ದೇಶಸೇವೆಗಾಗಿ ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ಅಂಜಲಿ! ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್( 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌( ) ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ( ) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈಸರಣಿಯ 5ನೇ ಸಂಚಿಕೆಯಲ್ಲಿ 158 ನೇ ಪಡೆದ ಉತ್ತರ ಪ್ರದೆಶದ( ) ಕಾನ್ಪುರ್() ನಿವಾಸಿ ಅಂಜಲಿ ವಿಶ್ವಕರ್ಮ( ) ಜೊತೆ ಸಂವಾದ ನಡೆಸಲಾಗಿದೆ. ಈ ವೇಳೆ ಅವರು UPSCಯಲ್ಲಿ ಯಶಸ್ಸನ್ನು ಪಡೆಯಲು, ಕಠಿಣ ಪರಿಶ್ರಮದ ಜೊತೆಗೆ, ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಅಂಜಲಿ ವಿದೇಶದಲ್ಲಿ ತೈಲ ಕಂಪನಿಯಲ್ಲಿ( ) ಕೆಲಸ ಮಾಡುತ್ತಿದ್ದರು ಆದರೆ ಯುಪಿಎಸ್‌ಸಿಗೆ ತಯಾರಾಗಲು, ಕೈತುಂಬಾ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಸ್ವದೇಶಕ್ಕೆ ಮರಳಿದರು. ಇದರೊಂದಿಗೆ, ಅವರು ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಅವರ ಈ ಯಶಸ್ಸಿನ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್( 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌( ) ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ( ) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈಸರಣಿಯ 5ನೇ ಸಂಚಿಕೆಯಲ್ಲಿ 158 ನೇ ಪಡೆದ ಉತ್ತರ ಪ್ರದೆಶದ( ) ಕಾನ್ಪುರ್() ನಿವಾಸಿ ಅಂಜಲಿ ವಿಶ್ವಕರ್ಮ( ) ಜೊತೆ ಸಂವಾದ ನಡೆಸಲಾಗಿದೆ. ಈ ವೇಳೆ ಅವರು UPSCಯಲ್ಲಿ ಯಶಸ್ಸನ್ನು ಪಡೆಯಲು, ಕಠಿಣ ಪರಿಶ್ರಮದ ಜೊತೆಗೆ, ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಅಂಜಲಿ ವಿದೇಶದಲ್ಲಿ ತೈಲ ಕಂಪನಿಯಲ್ಲಿ( ) ಕೆಲಸ ಮಾಡುತ್ತಿದ್ದರು ಆದರೆ ಯುಪಿಎಸ್‌ಸಿಗೆ ತಯಾರಾಗಲು, ಕೈತುಂಬಾ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಸ್ವದೇಶಕ್ಕೆ ಮರಳಿದರು. ಇದರೊಂದಿಗೆ, ಅವರು ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಅವರ ಈ ಯಶಸ್ಸಿನ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ. ಉದ್ಯೋಗ ಬಿಟ್ಟಿದ್ದೇಕೆ? ಐಪಿಎಸ್‌ಗೆ ಆಯ್ಕೆಯಾಗಿರುವ ಅಂಜಲಿ ಕಾನ್ಪುರದಲ್ಲಿ ಜನಿಸಿದ್ದಾರೆ. ಡೆಹ್ರಾಡೂನ್‌ನಿಂದ 12 ರವರೆಗೆ ಅಧ್ಯಯನ ಮಾಡಿದ ಅವರು ಬಳಿಕ ಐಐಟಿ ಕಾನ್ಪುರ (ಐಐಟಿ ಕಾನ್ಪುರ) ದಿಂದ ಬಿ.ಟೆಕ್ (ಬಿ.ಟೆಕ್) ಮಾಡಿದ್ದಾರೆ. ತದ ನಂತರ ವಿದೇಶಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಜೀವನೋಪಾಯಕ್ಕಾಗಿ ಕೆಲಸ ಮಾಡುವ ಮೂಲಕ ಹಣವನ್ನು ಗಳಿಸಬಹುದು, ಆದರೆ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬುವುದು ಅಂಜಲಿ ಉದ್ದೇಶವಾಗಿತ್ತು. ಈ ಆಲೋಚನೆಯಿಂದಾಗಿ ನಾನು ನನ್ನ ಕೆಲಸವನ್ನು ಬಿಟ್ಟು ಪರೀಕ್ಷೆಗೆ ತಯಾರಿ ಆರಂಭಿಸಿದೆ ಹಾಗೂ ಎರಡನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದೆ ಎಂದಿದ್ದಾರೆ ಅಂಜಲಿ. ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗ ಅಂಜಲಿ ವಿಶ್ವಕರ್ಮ ಐಐಟಿ ಕಾನ್ಪುರದಲ್ಲಿ 2015 ರಲ್ಲಿ ಪದವಿ ಗಳಿಸಿದರು. ಬಳಿಕ 2018 ರವರೆಗೆ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡಿದರು. ಈ ಸಮಯದಲ್ಲಿ, ಅವರು ದೀರ್ಘಕಾಲದವರೆಗೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಮೆಕ್ಸಿಕೋನ ತೈಲ ಕಂಪನಿಯಲ್ಲಿ ಉದ್ಯೋಗ ಮಾಡಿ ಅವರು ವೃತ್ತಿ ಜೀವನ ಆರಂಭಿಸಿದರು. ಕಂಪನಿಯಲ್ಲಿ ಅವರ ಕೆಲಸ ಕಡಲತೀರದಿಂದ ಸಮುದ್ರದ ನಡುವೆ ಇರುತ್ತಿತ್ತು. ಇದಕ್ಕಾಗಿ ಬೇಕಾದ ತರಬೇತಿಯನ್ನು ಅವರು ಯುಎಇಯಲ್ಲಿ ಪಡೆದರು. ಅಲ್ಲದೇ ಅವರು ನಾರ್ವೆ, ಮಲೇಷ್ಯಾ, ಸ್ಟೇಟ್ ಆಫ್ ಮಲಕ್ಕಾ, ಯುಕೆ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಸಮುದ್ರದ ನಡುವೆ ಕೆಲಸ ಮಾಡಿದ್ದಾರೆ. ಇನ್ನು ಪರೀಕ್ಷೆಗೆ ತಯಾರಾಗಲು ನಿರ್ಧರಿಸಿದಾಗ ಅವರು ನ್ಯೂಜಿಲೆಂಡ್‌ನಲ್ಲಿದ್ದರು. ಎರಡನೇ ಪ್ರಯತ್ನದಲ್ಲಿ ಯಶಸ್ಸು ಅಂಜಲಿ ಅವರು 2018 ರಲ್ಲಿ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಗೆ ಸಿದ್ಧರಾಗಲು ನಿರ್ಧರಿಸಿದರು. 2018 ರ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಅದೃಷ್ಟವನ್ನು ಪ್ರಯತ್ನಿಸಿದೆ. ಆದರೆ ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿರಲಿಲ್ಲ. ಅವರು ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಸೋಶಿಯಲ್ ಮೀಡಿಯಾ ಪ್ರಭಾವ ಕಡಿಮೆಯಾಯ್ತು ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಹೆಚ್ಚು ಗಮನಹರಿಸಿ ತಯಾರಿ ನಡೆಸಬೇಕು. ಅದೂ ಸುತ್ತಲಿನ ಪರಿಸರದಿಂದ ವಿಚಲಿತರಾಗಬಾರದು. ತನ್ನ ಅಧ್ಯಯನದ ಅನುಭವವನ್ನು ಹಂಚಿಕೊಂಡ ಅಂಜಲಿ, 12 ನೇ ತರಗತಿಯವರೆಗೆ, ಇಂಟರ್ನೆಟ್ ಅಷ್ಟೊಂದು ವ್ಯಾಪಕವಾಗಿರಲಿಲ್ಲ. ಆ ಸಮಯದಲ್ಲಿ ಅಧ್ಯಯನದಲ್ಲಿ ಗಮನಹರಿಸುವುದು ಸುಲಭವಾಗಿತ್ತು. ಇದೇ ಕಾರಣದಿಂದ ಯುಪಿಎಸ್‌ಸಿಗೆ ತಯಾರಿ ನಡೆಸುವಾಗ ಸೋಶಿಯಲ್ ಮಿಡಿಯಾದಿಂದ ದೂರ ಉಳಿದೆ ಎಂದಿದ್ದಾರೆ. ಆಡಳಿತಾತ್ಮಕ ಸೇವೆಯಿಂದ ಮಾತ್ರ ಜೀವನದಲ್ಲಿ ಪರಿಣಾಮಕಾರಿ ಕೆಲಸ ಸಾಧ್ಯ ತನ್ನ ಕೆಲಸದ ಸಮಯದಲ್ಲಿ, ಜೀವನದಲ್ಲಿ ಕೆಲವು ಪರಿಣಾಮಕಾರಿ ಕೆಲಸಗಳನ್ನು ಮಾಡಬೇಕಾದರೆ, ಅದನ್ನು ಕೇವಲ ಭಾರತೀಯ ಆಡಳಿತ ಸೇವೆಯ ಮೂಲಕ ಮಾತ್ರ ಮಾಡಬಹುದು ಎಂಬುವುದು ಅಂಜಲಿ ಅಭಿಪ್ರಾಯ. ವೈವಿಧ್ಯಮಯ ಸಾಮರ್ಥ್ಯಗಳನ್ನು ಆಡಳಿತ ಸೇವೆಯಲ್ಲಿ ಉತ್ತಮವಾಗಿ ಪೂರೈಸಬಹುದೆಂದು ಭಾವಿಸಿದ್ದೇನೆ ಎಂದು ಅಂಜಲಿ ಹೇಳಿದ್ದಾರೆ. ಆರ್ಥಿಕವಾಗಿ ಸುರಕ್ಷಿತವಾಗಿರಲು ಉದ್ಯೋಗಕ್ಕೆ ಸೇರಿದ್ದೆ. ಇದರಿಂದ ನಾನು ನನ್ನ ಅಧ್ಯಯನವನ್ನು ನಿಭಾಯಿಸಲೂ ಸುಲಭವಾಯ್ತು. ನನ್ನೊಂದಿಗೆ ಅಧ್ಯಯನ ಮಾಡಿದ ಜನರು ಸಿದ್ಧತೆ ಮತ್ತು ಯಶಸ್ಸನ್ನು ಪಡೆದರು, ಅವರು ಮುಂದೆ ಹೋದರು ಎಂದಿದ್ದಾರೆ. ಪೋಷಕರಿಗೆ ಯಶಸ್ಸಿನ ಕ್ರೆಡಿಟ್ ಅಂಜಲಿ ತನ್ನ ಯಶಸ್ಸಿನ ಕ್ರೆಡಿಟ್ ಅನ್ನು ತನ್ನ ಹೆತ್ತವರಿಗೆ ನೀಡುತ್ತಾರೆ. ನನಗೆ ಅಧ್ಯಯನ ಮಾಡಲು ಪ್ರೋತ್ಸಾಹಿಸಿದರು. ಅಲ್ಲದೇ ತಂಗಿ ಆರುಷಿಯ ಬೆಂಬಲ ಸಿಕ್ಕಿತು. ಮನೆಯಲ್ಲಿ ಕಲಿಕೆಯ ವಾತಾವರಣ ತುಂಬಾ ಚೆನ್ನಾಗಿತ್ತು. ಶಿಕ್ಷಕರ ಬೆಂಬಲ ಸಿಕ್ಕಿತು. ಅವರು ನ್ಯೂಜಿಲೆಂಡ್‌ನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದಾಗ, ಸಹೋದ್ಯೋಗಿಗಳಿಂದ ಬೆಂಬಲವಿತ್ತು ಎಂದಿದ್ದಾರೆ ನೀವು ಸ್ನೇಹಿತರಿಂದಲೂ ಸ್ಫೂರ್ತಿ ಪಡೆಯಬಹುದು ಇದನ್ನೆಲ್ಲ ನೋಡಿ, ಅನೇಕ ಜನರು ಹಣ ಸಂಪಾದಿಸುತ್ತಿದ್ದಾರೆ. ಆದರೆ ನಾಣು ದೇಶದ ಸೇವೆ ಮಾಡಬೇಕು ಎಂದು ನಿರ್ಧರಿಸಿ ಯುಪಿಎಸ್‌ಸಿಗೆ ತಯಾರಿ ಆರಂಭಿಸಿದೆ. ನನಗೆ ಇಂತಹ ಕೆಲಸಕ್ಕೆ ಸೇರೆಂಬ ಬಯಕೆ ಯಾವತ್ತೂ ಇತ್ತು. ಇದು ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ನೀವು ನಿಮ್ಮ ಸ್ನೇಹಿತರಿಂದಲೂ ನೀವು ಸ್ಫೂರ್ತಿ ಪಡೆಯಬಹುದು.