ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯ ಉಪನಿರ್ದೇಶಕ ಇನಾಯತ ಅಲಿ ಸಿಂಧೆ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಿದರು. ಬೀದರ್ (ಜೂನ್ 28):ಭಾಲ್ಕಿ ತಾಲೂಕಿನ ಕಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅಕ್ಷರ ದಾಸೋಹ ಯೋಜನೆಯ ಉಪನಿರ್ದೇಶಕ ಇನಾಯತ ಅಲಿ ಸಿಂಧೆ ಅವರು ಮಕ್ಕಳೊಂದಿಗೆ ಬಿಸಿಯೂಟ, ಮೊಟ್ಟೆಸವಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಅಕ್ಷರ ದಾಸೋಹ ಯೋಜನೆಯ ಜೊತೆಯಲ್ಲಿ ಮೊಟ್ಟೆನೀಡಲಾಗುತ್ತಿದೆ. ಮೊಟ್ಟೆತಿನ್ನದ ಮಕ್ಕಳಿಗೆ ಬಾಳೆ ಹಣ್ಣು ಇಲ್ಲವೇ ಚಿಕ್ಕಿಗಳನ್ನು ನೀಡಲಾಗುತ್ತಿದೆ ಎಂದರು. ಸರ್ಕಾರಿ ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟುಯೋಜನೆಗಳನ್ನು ರೂಪಿಸಿದೆ. ವಿದ್ಯಾರ್ಥಿಗಳು ಈ ಎಲ್ಲಾ ಯೋಜನೆಗಳ ಸದುಪಯೋಗ ಪಡೆಯುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗೆ ದಾಖಲಾಗಿ, ಕಡ್ಡಾಯವಾಗಿ ಹಾಜರಾಗಬೇಕು. ಸರ್ಕಾರಿ ಶಾಲೆಯ ಶಿಕ್ಷಕರು ಉತ್ತಮ ರೀತಿಯಿಂದ ಪಾಠ ಮಾಡುತ್ತಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕರು ಇದರ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು. ಪಾಸ್‌ ಕಣ್ಣಿಗೆ ಕೂಲಿಂಗ್ ಗ್ಲಾಸ್: ತನಗೆ ತಾನೇ ಫ್ಲೆಕ್ಸ್ ಹಾಕಿಸಿ ಬಾಲಕನ ಬಿಂದಾಸ್ ಪೋಸ್‌ ಉಪನಿರ್ದೇಶಕ ಕಚೇರಿಯ ಆರ್‌ಎಂಎಸ್‌ಎ ಅ​ಧಿಕಾರಿ ಗುಂಡಪ್ಪ ಹುಡಗೆ ಮಾತನಾಡಿ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮಕ್ಕಳು ಶಾಲೆ ತೊರೆಯದಂತೆ ತಡೆಯುವುದು, ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು, ಪೌಷ್ಠಿಕಾಂಶ ಹೆಚ್ಚಿಸುವುದರ ಮೂಲಕ ಮಕ್ಕಳ ಆರೋಗ್ಯವನ್ನು ಅಭಿವೃದ್ಧಿ ಗೊಳಿಸುವುದು, ಸಾಮಾಜಿಕ ಸಾಮಾನತೆ ಅಭಿವೃದ್ಧಿಪಡಿಸಿ ತನ್ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದರು. ಮಹಾತ್ಮ ಗಾಂಧಿ​ ಪ್ರೌಢಶಾಲಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಸ್ಥಳೀಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜಕುಮಾರ, ಕುಪೇಂದ್ರ ಜಗಶೆಟ್ಟಿ, ಮುಸ್ತಫಾ, ಬಸವರಾಜ ಕುಂಬಾರ, ಮುಕ್ತಾಬಾಯಿ, ಮಂಗಲಾ, ಸುಮನಬಾಯಿ ವಾಮನರಾವ್‌, ಜ್ಯೋತೆಮ್ಮ, ಮಿಲಿಂದಾ, ಮುಖ್ಯ ಅಡುಗೆ ಸಿಬ್ಬಂದಿ ಪದ್ಮಾವತಿ, ಸುನೀತಾ ಉಪಸ್ಥಿತರಿದ್ದರು. 2022; ಕರಾಮುವಿ ಪ್ರವೇಶಾತಿಗೆ ಆನ್‌ಲೈನ್‌ ಅರ್ಜಿ ಆಹ್ವಾನ ಸರ್ಕಾರಿ ಶಾಲೆ ಶಿಕ್ಷಕಿಯ ಒಂದೊಳ್ಳೆ ಕೆಲ್ಸ ವೈರಲ್:ಶಿಕ್ಷಕರು ಮಕ್ಕಳ ಬದುಕಿನಲ್ಲಿ ಸರಿಯಾದ ಮಾರ್ಗವನ್ನು ತೋರುತ್ತಾರೆ. ಆದರೆ ಎಲ್ಲರಿಗೂ ಇಂತಹ ಶಿಕ್ಷಕರು ಸಿಗುವುದಿಲ್ಲ. ಆದರೆ ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ಶಾಲೆಯಲ್ಲಿ ತಮ್ಮ ಕೆಲಸ ಮುಗಿದ ನಂತರ ಮಂಗಳಮುಖಿ ಹಾಗೂ ದಿವ್ಯಾಂಗರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠ ಹೇಳಿ ಮನೆಗೆ ಹಿಂದಿರುಗುವ ಸರ್ಕಾರಿ ಶಾಲೆಯ ಶಿಕ್ಷಕಿ ನಮ್ರತಾ ಆನಂದ್ ಅವರು ತಮ್ಮ ಸಮಯವನ್ನು ತೃತೀಯಲಿಂಗಿ ಮತ್ತು ವಿಶೇಷ ಚೇತನರ ಕಲ್ಯಾಣಕ್ಕಾಗಿ ಬಳಸುತ್ತಾರೆ. ನಮ್ರತಾ ಆನಂದ್ ಅವರು ಪಾಟ್ನಾ ಜಿಲ್ಲೆಯ ಸಿಪಾರಾದಲ್ಲಿನ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಪರಿಸರ ಮತ್ತು ಸಾಮಾಜಿಕ ವಿಜ್ಞಾನವನ್ನು ಮಕ್ಕಳಿಗೆ ಕಲಿಸುತ್ತಾರೆ. ಶಾಲೆ ಮುಗಿದ ನಂತರ ಅವರು ಪಾಟ್ನಾದ ಚಿತ್ಕೊಹ್ರಾ ಪ್ರದೇಶದ ಕೊಳೆಗೇರಿಗಳಿಗೆ ಭೇಟಿ ನೀಡಿ ಅಲ್ಲಿ ಪಾಠ ಮಾಡುತ್ತಾರೆ. 2007ರಲ್ಲಿ ನಮ್ರತಾ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಸಮಾಜಮುಖಿ ಕಾರ್ಯಗಳನ್ನು ಆರಂಭಿಸಿದರು. ಭೋಧನೆ ಮತ್ತು ಸಮಾಜಸೇವೆ ನನ್ನ ಆಸಕ್ತಿಯ ಕ್ಷೇತ್ರಗಳು. ಬಡ ಕುಟುಂಬದಿಂದ ಮಕ್ಕಳಿಗೆ ಶಿಕ್ಷಣ ನೀಡಲು ಕಮಲ ನೆಹರು ಶಾಲೆಯಲ್ಲಿ ಕೊಠಡಿಯೊಂದನ್ನು ನಿರ್ಮಿಸಲಾಗಿದೆ. ಅಗತ್ಯವಿರುವವರಿಗೆ ಉಚಿತ ಶಿಕ್ಷಣ ನೀಡಲು 4 ರಿಂದ 5 ಇತರ ಕೇಂದ್ರಗಳನ್ನು ಸಹ ತೆರೆಯಲಾಗಿದೆ ಎಂದು ನಮ್ರತಾ ಹೇಳುತ್ತಾರೆ. ಭಾರತೀಯ ವಿಕಾಸ್ ಪರಿಷತ್ತಿನ ಬೆಂಬಲದೊಂದಿಗೆ, ಅವರು ವಿಶೇಷಚೇತನರಿಗೆ ಕ್ಯಾಲಿಪರ್‌ಗಳು, ಕೃತಕ ಕಾಲುಗಳು ಮತ್ತು ತ್ರಿಚಕ್ರ ವಾಹನಗಳನ್ನು ಒದಗಿಸುವ ಮೂಲಕ ಅವರನ್ನು ಬೆಂಬಲಿಸಿದ್ದಾರೆ. ಅದರೊಂದಿಗೆ ಅವರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮಂಗಳಮುಖಿಯರಿಗೆ ಉಚಿತ ಪಡಿತರವನ್ನು ಒದಗಿಸಿದ್ದಾರೆ. ಚಳಿಗಾಲದಲ್ಲಿ ಅವರಿಗೆ ಹೊದಿಕೆಗಳನ್ನು ಸಹ ನೀಡಿದ್ದೇವೆ ಎಂದು ಅವರು ಹೇಳಿದರು. 2020ರಲ್ಲಿ, ನಮ್ರತಾ ಕುರ್ತೋಲ್‌ನ ಫುಲ್ಜಾರಿ ಗಾರ್ಡನ್‌ನಲ್ಲಿ ( ) ಸಂಸ್ಕಾರ ಶಾಲೆಯನ್ನು ಸ್ಥಾಪಿಸಿದರು. ಬಡ ಕುಟುಂಬ ಮತ್ತು ಕೊಳೆಗೇರಿಗಳ ಮಕ್ಕಳಿಗೆ ಅಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಅವರು ಸಂಗೀತ ಮತ್ತು ಹೊಲಿಗೆ ಮತ್ತು ನೇಯ್ಗೆ, ಹಪ್ಪಳ ತಯಾರಿಕೆ, ಚಿತ್ರಕಲೆ ಮತ್ತು ನೃತ್ಯದಲ್ಲಿ ತರಬೇತಿ ನೀಡುತ್ತಾರೆ. ತಮ್ಮ ಕುಟುಂಬಕ್ಕೆ ಬಟ್ಟೆ , ಹೊಲಿಗೆ ಮತ್ತು ಶಾಲಾ ಮಕ್ಕಳ ಸಮವಸ್ತ್ರದಿಂದ ಬರುವ ಆದಾಯದಿಂದ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಬಾಲಕಿಯರಾದ ಗುಡಿಯಾ ಮಾತು ಪ್ರೀತಿ ಹೇಳಿದರು.