ಫಿಲಿಪೈನ್ಸ್‌ಗೆ ಭಾರತದ ಬೆಂಬಲ
ಮನಿಲಾ/ ನವದೆಹಲಿ,ಮಾ.೨೭-“ರಾಷ್ಟ್ರೀಯ ಸಾರ್ವಭೌಮತ್ವ ಎತ್ತಿಹಿಡಿಯಲು ಫಿಲಿಪೈನ್ಸ್‌ಗೆ ಭಾರತ ಬೆಂಬಲ ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಕಾನೂನುಬದ್ಧ ಫಿಲಿಪೈನ್ಸ್ ಸಮುದ್ರ ಕಾರ್ಯಾಚರಣೆಗಳ ವಿರುದ್ಧ ಚೀನಾದ “ಅಪಾಯಕಾರಿ” ಕ್ರಮಗಳನ್ನು ಅಮೆರಿಕಾ ಖಂಡಿಸಿದ ವಾರದ ಅಂತರದಲ್ಲಿ ಫಿಲಿಫೈನ್ಸ್‌ಗೆ ಭೇಟಿ ನೀಡಿದ ಅವರು ದೇಶದ ಸಾರ್ವಭೌಮತ್ವ ರಕ್ಷಣೆ ಪ್ರತಿ ದೇಶದ ಕರ್ತವ್ಯ ಎಂದಿದ್ದಾರೆ.
ವಿಶ್ವಸಂಸ್ಥೆ ಮಾಡಿಕೊಂಡ ಸಮುದ್ರದ ನಿಯಮಾವಳಿ ೧೯೮೨ ರ ಪ್ರಕಾರ ಪ್ರತಿಯೊಂದು ದೇಶ ತನ್ನ ದೇಶದ ಸಾರ್ವಭೌಮತ್ವ ರಕ್ಷಣೆ ಮಾಡಲು ಎಲ್ಲ ಹಕ್ಕು ಹೊಂದಿದೆ. ಈ ನಿಟ್ಟಿನಲ್ಲಿ ಭಾರತ, ಫಿಲಿಫೈನ್ಸ್‌ಗೆ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಜೂನ್ ೨೦೨೩ ರಲ್ಲಿ ಭಾರತದಲ್ಲಿ ಅವರ ಕೊನೆಯ ಸಭೆಯ ನಂತರ ಭಿನ್ನವಾಗಿ, ಮಂತ್ರಿಗಳು ಫಿಲಿಪೈನ್ಸ್‌ನೊಂದಿಗಿನ ವಿವಾದದಲ್ಲಿ ಚೀನಾದ ವಿಸ್ತಾರವಾದ ಹಕ್ಕುಗಳನ್ನು ಬಲವಾಗಿ ನಿರಾಕರಿಸಿದ್ದು ೨೦೧೬ ರ ಕಾನೂನುಬದ್ಧ ತೀರ್ಪನ್ನು ನಿರ್ದಿಷ್ಟವಾಗಿ ಪಾಲಿಸುವಂತೆ ಚೀನಾಕ್ಕೆ ಆಗ್ರಹಿಸಲಾಗಿದೆ.
ಇದೇ ಮೊದಲ ಬಾರಿಗೆ ಭಾರತ, ಫಿಲಿಫೈನ್ಸ್‌ಗೆ ಬೆಂಬಲ ನೀಡಲು ಮಧ್ಯಸ್ಥಿಕೆ ವಹಿಸಿದೆ. ಅಂತಾರಾಷ್ಟ್ರೀಯ ನೀರಿನ ೯೦ ಪ್ರತಿಶತದ ಮೇಲೆ ಸಾರ್ವಭೌಮತ್ವವನ್ನು ಚೀನಾ ಪ್ರತಿಪಾದಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.