ಚಿತ್ರೀಕರಣ ವೇಳೆ ಅನುರಾಗ್ ಮೇಲೆ ಹಲ್ಲೆ
ಮುಂಬೈ,ಜು.೨೨-ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ಬ್ಯಾಡ್ ನ್ಯೂಸ್ ಚಿತ್ರದ ಯಶಸ್ಸಿನ ಬಗ್ಗೆ ಉತ್ಸುಕರಾಗಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ನಟ ಅನುರಾಗ್ ಕಶ್ಯಪ್ ಅವರ ’ಗ್ಯಾಂಗ್ಸ್ ಆಫ್ ವಾಸೇಪುರ್’ ನಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ .
ಈಗ ಸಂದರ್ಶನವೊಂದರಲ್ಲಿ ಅವರು ಆ ಚಿತ್ರಕ್ಕೆ ಸಂಬಂಧಿಸಿದ ಕೆಲವು ಆಶ್ಚರ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ಅವರ ಗ್ಯಾಂಗ್ಸ್ ಆಫ್ ವಾಸೇಪುರ್ ಚಿತ್ರೀಕರಣದ ವೇಳೆ ಅವರನ್ನು ಥಳಿಸಲಾಗಿದೆ. ಈ ವಿಷಯವನ್ನು ಸ್ವತಃ ವಿಕ್ಕಿಯೇ ಹಂಚಿಕೊಂಡಿದ್ದಾರೆ. ಚಿತ್ರದ ಅಕ್ರಮ ಮರಳುಗಾರಿಕೆ ದೃಶ್ಯದ ಚಿತ್ರೀಕರಣ ಬನಾರಸ್‌ನಲ್ಲಿ ನಡೆಯುತ್ತಿರುವಾಗ ಈ ಘಟನೆ ನಡೆದಿದೆ ಎಂದಿದ್ದಾರೆ.
ನಟ ’ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರದ ಭಯಾನಕ ಘಟನೆಯನ್ನು ಹಂಚಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣದ ವೇಳೆ ಅಕ್ರಮ ಮರಳುಗಾರಿಕೆ ಚಿತ್ರೀಕರಣ ವೇಳೆ ಮರಳು ಮಾಫಿಯಾಗಳಿಂದ ಥಳಿತಕ್ಕೆ ಒಳಗಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ವಿಕ್ಕಿ, ’ಸಿನಿಮಾದಲ್ಲಿ ತೋರಿಸಿರುವ ಕಲ್ಲಿದ್ದಲು ಕಳ್ಳಸಾಗಣೆ ನಿಜವಾಗಿತ್ತು. ನಾವು ಅದನ್ನು ಶೂಟ್ ಮಾಡಿದೆವು. ಈ ವೇಳೆ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆಯ ದೃಶ್ಯವನ್ನು ಸೆರೆಹಿಡಿಯಲು ಹೋದಾಗ ಈ ಘಟನೆ ನಡೆದಿದೆ. ನಾನು ಆಘಾತಕ್ಕೊಳಗಾಗಿದೆ, ಏಕೆಂದರೆ ಇದು ಬಹಿರಂಗವಾಗಿ ನಡೆಯುತ್ತಿದೆ ಎಂದು ನಾನು ಮೊದಲ ಬಾರಿ ಅರಿತುಕೊಂಡೆ ಮೊದಲ ಬಾರಿಗೆ ಇದು ನಿಜವಾಗಿಯೂ ಕಳ್ಳಸಾಗಣೆ ಎಂದು ಗೊತ್ತಾಗುವುದಿಲ್ಲ , ಇದು ವ್ಯವಸ್ಥೆಗಾಗಿ ನಡೆಸಲಾದ ವ್ಯಾಪಾರ ಎಂದು ನೀವು ಭಾವಿಸುತ್ತೀರಿ, ಏಕೆಂದರೆ ಅಲ್ಲಿ ಕೇವಲ ಎರಡು ಟ್ರಕ್‌ಗಳು ನಿಂತಿರಲಿಲ್ಲ ಆದರೆ ಅಲ್ಲಿ ೫೦೦ ಟ್ರಕ್‌ಗಳು ನಿಂತಿದ್ದವು.ವಿಕ್ಕಿ ಅವರು ಚಿತ್ರೀಕರಣ ಮಾಡುವಾಗ ೫೦೦ ಜನರು ಸುತ್ತುವರೆದರು ಎಂದು ಹೇಳಿದ್ದಾರೆ.
ಕ್ಯಾಮೆರಾ ಅಟೆಂಡೆಂಟ್ ಒಬ್ಬ ಹಿರಿಯ ವ್ಯಕ್ತಿ, ಅವರ ವಯಸ್ಸು ೫೦ ಕ್ಕಿಂತ ಹೆಚ್ಚು. ಆ ವ್ಯಕ್ತಿ ಯುನಿಟ್‌ಗೆ ಕರೆ ಮಾಡಿ, ನಾವು ಇಲ್ಲಿ ಸ್ವಲ್ಪ ತೊಂದರೆಯಲ್ಲಿರುವುದರಿಂದ ಕ್ಯಾಮೆರಾ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂದು ಹೇಳಿದ್ದಾರೆ. ಫೋನಿನಲ್ಲಿ ಅವರ ಮಾತು ಕೇಳಿದ ಮೇಲೆ ಅಲ್ಲಿದ್ದವನಿಗೆ ಆತ ಯಾವುದೋ ಪ್ರಭಾವಿ ವ್ಯಕ್ತಿಗೆ ಕರೆ ಮಾಡುತ್ತಿದ್ದಾನೆ ಅನ್ನಿಸಿದೆ. ಆ ವ್ಯಕ್ತಿ ಕ್ಯಾಮೆರಾಮನ್‌ಗೆ ಕಪಾಳಮೋಕ್ಷ ಮಾಡಿ, ಕ್ಯಾಮೆರಾ ಕಸಿದುಕೊಂಡು ಕ್ಯಾಮೆರಾ ಒಡೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಘಟನೆ ವಿವರ ನೀಡಿದ್ದಾರೆ.