ಮಾದಕ ವಸ್ತುಗಳ ಸೇವನೆ ಅತ್ಯಂತ ಅಪಾಯಕಾರಿ
ಕಲಬುರಗಿ:ಜೂ.29:ಮಾದಕ ವಸ್ತುಗಳ ವ್ಯಸನ ಮನುಷ್ಯನ ಕ್ರಿಯಾಶೀಲ ಅಲೋಚನಾ ಕ್ರಮವನ್ನೆ ಸಂಕುಚಿತಗೊಳಿಸಿ ಅವನ ಸರ್ವತೋಮುಖ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆದರಲ್ಲೂ ಹದಿಹರೆಯದ ವಯಸ್ಸಿನಲ್ಲಿ ಮಾದಕ ವಸ್ತುಗಳ ಸೇವನೆ ಅತ್ಯಂತಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ, ವ್ಯಸನಕ್ಕೆ ಒಳಗಾದ ವ್ಯಕ್ತಿ ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಮತ್ತುಶೈಕ್ಷಣಿಕವಾಗಿಯಾವುದೇ ಸ್ಥಿತಿಯನ್ನು ಎದುರಿಸಲಾರದ ಸ್ಥಿತಿಯನ್ನು ತಲುಪುತ್ತಾನೆ. ಇಂದುಯುವತಲೆಮಾರುಎಚ್ಚೆತ್ತುಕೊಂಡುಅಂತಹ ಚಟುವಟಿಕೆಗಳಿಂದ ದೂರ ಉಳಿಯಬೇಕೆಂಬ ಕಿವಿಮಾತನ್ನು ವಿದ್ಯಾರ್ಥಿ ಮತ್ತುಯುವ ಸಮುದಾಯಕ್ಕೆಕಡಗಂಚಿಯಲ್ಲಿ ಆಯೋಜಿಸಿದ್ದಇನ್ಸ್‍ಟಿಟ್ಯೂಟ್ ಫಾರ್ ಸೋಷಿಯಲ್ ವರ್ಕರ್ಸ್ ಫಾರ್‍ಆ್ಯಕ್ಷನ್‍ರೀಸರ್ಚ್(ರಿ), ಮೈಸೂರು, ಸಾಯಿಪ್ರತಾಪ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯ, ಕಡಗಂಚಿಮತ್ತುಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ನೌಕರರಕ್ಷೇಮಾಭಿವೃದ್ಧಿ ಸಂಘ(ರಿ),ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಇವರ ಸಹಯೋಗದಲ್ಲಿ”ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಜನಜಾಗೃತಿಕಾರ್ಯಕ್ರಮ”26 ಜೂನ್ 2024 ರಿಂದ ಸಪ್ತಾಹಘೋಷವಾಕ್ಯ: ಸಾಕ್ಷಿಗಳು ಸ್ಪಷ್ಟವಾಗಿವೆ: ತಡೆಗಟ್ಟುವುದನ್ನು ಪ್ರೋತ್ಸಾಹಿಸೋಣಕಾರ್ಯಕ್ರಮದಲ್ಲಿಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕಡಾ.ಕಿರಣ್ ಎಂ.ಗಾಜನೂರುಕಾರ್ಯಕ್ರಮದಉದ್ಘಾಟನೆಯನ್ನು ನೆರವೇರಿಸಿ ಸಲಹೆಯನ್ನುನೀಡಿದರು.
ಅಂತರರಾಷ್ಟ್ರೀಯ ಮಾದಕವಸ್ತು ಸಮಸ್ಯೆಯು ಲಕ್ಷಾಂತರಜನರಜೀವನದ ಮೇಲೆ ಪರಿಣಾಮ ಬೀರುವ ಸಂಕೀರ್ಣ ಸಮಸ್ಯೆಯಾಗಿದೆ. ಮಾದಕ ದ್ರವ್ಯಗಳ ಪರಿಣಾಮಗಳು ವ್ಯಾಪಕ ಮತ್ತು ಬಹುಮುಖಿಯಾಗಿದ್ದು, ಮಾದಕವಸ್ತು ಬಳಕೆಯ ಅಸ್ವಸ್ಥತೆ ಹೊಂದಿರುವಜನರಿಂದ ಹಿಡಿದು ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತಅಪರಾಧದಿಂದಉಂಟಾಗುವ ಪರಿಣಾಮಗಳೊಂದಿಗೆ ವ್ಯವಹರಿಸುವ ಸಮುದಾಯಗಳವರೆಗೆ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ವೈಜ್ಞಾನಿಕವಾಗಿ ಬೆಂಬಲಿತ, ತಡೆಗಟ್ಟುವಿಕೆ ಮತ್ತುಚಿಕಿತ್ಸೆ-ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯಎಂದುಕರ್ನಾಟಕಕೇಂದ್ರೀಯ ವಿಶ್ವವಿದ್ಯಾನಿಲಯದ, ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕರಾದಡಾ.ಎಂ ಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಡಾ.ಡಿ.ಶ್ರೀನಿವಾಸ ಮಣಗಳ್ಳಿ, ಸಲಹೆಗಾರ ಮಂಡಳಿ ಸದಸ್ಯರು(ISWಂಖ,ಸ್ವಯಂ ಸೇವಾ ಸಂಸ್ಥೆ), ಮೈಸೂರುಹಾಗೂಸಹಾಯಕ ಪ್ರಾದ್ಯಾಪಕರುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ, ಇವರುಈ ವರ್ಷದಜೂನ್ 26ರಂದು ವಿಶ್ವದಾದ್ಯಂತಡ್ರಗ್‍ದುರುಪಯೋಗ ಮತ್ತುಅಕ್ರಮ ಸಾಗಣೆ ವಿರುದ್ಧ 37ನೇ ಅಂತರರಾಷ್ಟ್ರೀಯ ದಿನವನ್ನುಆಚರಿಸಲಾಗುತ್ತದೆ. 1987ರಿಂದ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮಾದಕ ವ್ಯಸನದಿಂದ ಮುಕ್ತವಾದಜಗತ್ತಿಗೆ ಸಹಕರಿಸಲುತಮ್ಮ ಸಮರ್ಪಣೆಯನ್ನು ಪ್ರದರ್ಶಿಸಲು ಈ ದಿನವನ್ನು ಸ್ಮರಿಸುತ್ತಿವೆ. ಯುನೈಟೆಡ್ ನೇಷನ್ಸ್‍ಆಫೀಸ್‍ಆನ್‍ಡ್ರಗ್ಸ್‍ಅಂಡ್‍ಕ್ರೈಮ್2024 ಕ್ಕೆ ಮಾದಕ ವ್ಯಸನ ಮುಕ್ತ ಪ್ರಪಂಚದಕಡೆಗೆ ಸಹಯೋಗ ಮತ್ತುಕ್ರಿಯೆಯನ್ನು ಹೆಚ್ಚಿಸಲು, ಈ ವರ್ಷದ ವಿಶ್ವಡ್ರಗ್‍ಡೇಅಭಿಯಾನವು ವಿಜ್ಞಾನ, ಸಂಶೋಧನೆ, ಸಹಾನುಭೂತಿ, ಮಾನವ ಹಕ್ಕುಗಳಿಗೆ ಸಂಪೂರ್ಣಗೌರವ ಮತ್ತು ಸಮಾಜ, ಆರ್ಥಿಕತೆ ಮತ್ತುಆರೋಗ್ಯದ ಮೇಲೆ ಮಾದಕವಸ್ತು ಬಳಕೆಯ ಋಣಾತ್ಮಕ ಪರಿಣಾಮಗಳ ಸಂಪೂರ್ಣಗ್ರಹಿಕೆಯನ್ನು ಆಧರಿಸಿದ ಔಷಧ ನೀತಿಯನ್ನು ಆಧರಿಸಿರಬೇಕು.ಅರ್ಥಪೂರ್ಣಜೀವನವನ್ನು ನಡೆಸುವ ಸಾಮಥ್ರ್ಯವನ್ನು ಹೊಂದಿರುವಜಗತ್ತನ್ನು ನಾವು ಮಾಡಬಹುದು.ಈ ಪರಿಸ್ಥಿತಿಯನ್ನು ನಿಭಾಯಿಸಲು ವೈಜ್ಞಾನಿಕವಾಗಿ ಬೆಂಬಲಿತ, ತಡೆಗಟ್ಟುವಿಕೆ ಮತ್ತುಚಿಕಿತ್ಸೆ-ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯಎಂದುವಿದ್ಯಾರ್ಥಿಗನ್ನುದ್ದೇಶಿಸಿ ಮಾತನಾಡಿದರು.
ಒಗ್ಗಟ್ಟು, ಸಹಾನುಭೂತಿ ಮತ್ತು ವಿಜ್ಞಾನದ ಮೌಲ್ಯಗಳಿಗೆ ಬದ್ಧವಾಗಿರುವಾಗ ಪ್ರಪಂಚದ ಮಾದಕದ್ರವ್ಯ ಬಿಕ್ಕಟ್ಟನ್ನು ಪರಿಹರಿಸಲು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸೋಣ. ಒಟ್ಟಾಗಿ, ಸಾಕ್ಷ್ಯಾಧಾರಿತ ಪರಿಹಾರಗಳಿಗೆ ಬದ್ಧರಾಗುವ ಮೂಲಕ ಪ್ರತಿಯೊಬ್ಬರೂಆರೋಗ್ಯಕರ, ಅರ್ಥಪೂರ್ಣಜೀವನವನ್ನು ನಡೆಸುವ ಸಾಮಥ್ರ್ಯವನ್ನು ಹೊಂದಿರುವಜಗತ್ತನ್ನು ನಾವು ಮಾಡಬಹುದು. ಕೇವಲ ಹಸಿದವರಿಗೆ ಆಹಾರ ನೀಡುವ ಮೂಲಕ ನಾವು ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ; ನಾವು ಹಸಿವನ್ನು ಸೃಷ್ಟಿಸುವ ವ್ಯವಸ್ಥೆಗಳನ್ನು ತೊಡೆದುಹಾಕಬೇಕುಅದರಂತೆಯೇಇದರ ನಿರ್ಮೂಲನೆಯಆಗಬೇಕೆಂದು ವಿದ್ಯಾರ್ಥಿಗಳಿಗೆ ಅಧ್ಯಕ್ಷತೆಡಾ.ಸುನಿಲ್ ಕುಮಾರ್‍ಕಾಂಬ್ಳೆ, ಅದ್ಯಕ್ಷರು, ಸಾಯಿ ಪ್ರತಾಪ ಶಿಕ್ಷಣ ಸಂಸ್ಥೆ, ಕಡಗಂಚಿಕಿವಿಮಾತನ್ನು ತಿಳಿಸಿದರು.
ಮಾದಕ ವ್ಯಸನವು ಸಾಮಾಜಿಕ ನಿμÉೀಧವಾಗಿದೆ ಮತ್ತು ಪ್ರತಿಧರ್ಮದಿಂದಲೂ ನಿμÉೀಧಿಸಲಾಗಿದೆ. ಮಾದಕವಸ್ತುಗಳ ಪ್ರಲೋಭನೆಯನ್ನು ವಿರೋಧಿಸುವ ಮೂಲಕ ನಾವು ಬಲಶಾಲಿ ಎಂದು ಸಾಬೀತುಪಡಿಸಬೇಕು, ಏಕೆಂದರೆ ವಿವೇಚನೆಯು ನಡವಳಿಕೆಯ ಉತ್ತಮ ಭಾಗವಾಗಿದೆಎಂದುಕಾರ್ಯಕ್ರಮದನಿರೂಪಣೆಯನ್ನುಡಾ.ಶಿವಾನಂದ್ ಎಂ. ಬೂಸನೂರು, ಪ್ರಾಂಶುಪಾಲರು, ಸಾಯಿ ಪ್ರತಾಪ ಶಿಕ್ಷಣ ಸಂಸ್ಥೆ, ಕಡಗಂಚಿತಿಳಿಸಿದರು.ಡಾ.ಮಹದೇವಸ್ವಾಮಿ ಡಿ, ಅದ್ಯಕ್ಷರು, (ISWಂಖ,ಸ್ವಯಂ ಸೇವಾ ಸಂಸ್ಥೆ), ಮೈಸೂರುಮತ್ತು ಸಂಸ್ಥೆಯಅದ್ಯಾಪಕರು ಮತ್ತುಅದ್ಯಾಪಕೇತರು ಸಿಬ್ಬದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.