ನಿಗಮ ಮಂಡಳಿ ಅಧ್ಯಕ್ಷರಾಗಿ ಅರುಣಕುಮಾರ್ ಪಾಟೀಲ್ ರನ್ನು ನೇಮಕ ಮಾಡಲು ಕಾರ್ಯಕರ್ತರ ಒತ್ತಾಯ
ಕಲಬುರಗಿ:ಜೂ.27: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದ್ಯಸರಾಗಿ ಮತ್ತು ಕಲಬುರ್ಗಿ ಜಿಲ್ಲಾ ಪಂಚಾಯತ್ ಸದ್ಯಸರಾಗಿ ಮತ್ತು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ 4ನೇ ಬಾರಿ ಸತತವಾಗಿ ಗೆಲುವು ದಾಖಲಿಸಿದ ಸೊಲಿಲ್ಲದ ಸರದಾರ ಅರುಣಕುಮಾರ್ ಎಂ ವೈ ಪಾಟೀಲ್ ಅವರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರೆ ಮುಂದಿನ ದಿನಗಳಲ್ಲಿ ಅಫಜಲಪೂರ ತಾಲೂಕ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಲು ಅನುಕೂಲವಾಗುತ್ತದೆ. ಅಫಜಲಪೂರ ಮತಕ್ಷೇತ್ರದ ಮತದಾರರ ಆಸೆ ಯಾಗಿದೆ ಎಂದು ಯುವ ಮುಖಂಡರಾದ ರವಿ ಪಾಟೀಲ್ ಮತ್ತು ಶ್ರೀಶೈಲ ಪಾಟೀಲ್ ಇವರು ಜಂಟಿಯಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ನಾಯಕರಲ್ಲಿ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.