ವಿದ್ಯಾರ್ಥಿಗಳಿಗೆ ಆನ್‌ಲೈನ್ ಭಾಷಣ
ಬೆಂಗಳೂರು, ಸೆ. ೨೬- ರಾಷ್ಟ್ರಪಿತ ಪ್ರಯುಕ್ತ ಮಹಾತ್ಮ ಗಾಂಧೀಜಿಯವರ ೧೫೫ನೇ ಜನ್ಮದಿನಾಚರಣೆಯ ಬಿಬಿಎಂಪಿ ವತಿಯಿಂದ ಸ್ವಚ್ಛತೆಯ ಕುರಿತು ವಿದ್ಯಾರ್ಥಿಗಳಿಗೆ ಆನ್‌ಲೈನ್ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಪ್ರೀತಿ ಗೆಹ್ಲೋಟ್ ರವರು ತಿಳಿಸಿದರು.
ಉದ್ಯಾನ ನಗರವೆಂಬ ಹೆಸರು ಪಡೆದ ಬೆಂಗಳೂರನ್ನು ಮತ್ತಷ್ಟು ಹಸಿರು ಮತ್ತು ಸ್ವಚ್ಚ ನಗರವನ್ನಾಗಿಸಲು ವಿನೂತ ಕ್ರಮಗಳನ್ನು ಅನುಸರಿಸುತ್ತಿದ್ದು, ಸ್ವಚ್ಛತೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಹಾಗೂ ಸ್ವಚ್ಛತಾ ಪ್ರತಿಜ್ಞೆ ತೆಗೆದುಕೊಳ್ಳಲು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ನಗರದ ಸ್ವಚ್ಛತೆ ಮತ್ತು ಹಸಿರು ಸ್ಥಳಗಳ ಮಹತ್ವದ ಕುರಿತು ಅರ್ಥಪೂರ್ಣ ಚರ್ಚೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ, ಬಿಬಿಎಂಪಿ, ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯ ಪುಟವಾದ leanblr.bbmp.gov.in/eng/elocution.php ಕ್ಕೆ ಭೇಟಿ ನೀಡಿ ಸೆ. ೨೮ರ ಒಳಗೆ ಅಪ್ಲೋಡ್ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಕೂಡಲೆ ಭಾಷಣಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗುತ್ತಿದೆ.
ಭಾಷಣಾ ಸ್ಪರ್ಧೆಯ ವರ್ಗಗಳು:
ಪ್ರಾಥಮಿಕ ಶಾಲೆ (೬ನೇ – ೮ನೇ ತರಗತಿ)
ಕನ್ನಡ: “ಹಸಿರು ಸ್ಥಳಗಳು ಮತ್ತು ನಗರ ಸ್ವಚ್ಛತೆಯಲ್ಲಿ ಅವುಗಳ ಪಾತ್ರ”
ಇಂಗ್ಲಿಷ್: “Green Spaces and Their Role in Urban Cleanliness’’
ಪ್ರೌಢಶಾಲೆ (೯ನೇ – ೧೦ನೇ ತರಗತಿ)
ಕನ್ನಡ: “ನಮ್ಮ ನಗರವನ್ನು ಪರಿವರ್ತಿಸುವ ಮತ್ತು ಸ್ವಚ್ಛತೆ ಹಾಗೂ ಹಸಿರೀಕರಣವಾಗಿಸಲು ಯುವಕರ ಶಕ್ತಿ”
ಇಂಗ್ಲಿಷ್: “The Power of Youth in Transforming Our City and Making Bengaluru Cleaner and Greener’’
ಪ್ರತಿ ಶಾಲೆಯು ಅತ್ಯುತ್ತಮ ಭಾಷಣಕಾರರನ್ನು ಆಯ್ಕೆ ಮಾಡಬೇಕು(ಪ್ರತಿ ವಿಭಾಗದಲ್ಲಿ ಪ್ರತಿ ಶಾಲೆಗೆ ಒಬ್ಬ ವಿದ್ಯಾರ್ಥಿ) ಶಾಲೆಯು ಸ್ಪಷ್ಟವಾದ ಆಡಿಯೊದೊಂದಿಗೆ ಭಾಷಣಧ ವೀಡಿಯೊವನ್ನು ರೆಕಾರ್ಡ್ ಮಾಡಬೇಕು(ಗರಿಷ್ಠ ೩ ನಿಮಿಷಗಳು, mp4 ಫಾರ್ಮ್ಯಾಟ್ ನಲ್ಲಿರಬೇಕು).
ವೀಡಿಯೊವನ್ನು ಅರ್ಹ ವರ್ಗದಲ್ಲಿ ಅಪ್‌ಲೋಡ್ ಮಾಡಲು ಭಾಷಣ ಸ್ಪರ್ಧೆಯ ಪುಟವಾದ cleanblr.bbmp.gov.in/eng/elocution.php ಗೆ ಭೇಟಿ ನೀಡಿ ದಿನಾಂಕ: ೨೮-೦೯-೨೦೨೪ ರೊಳಗೆ ಅಪ್ಲೋಡ್ ಮಾಡಬೇಕು ಎಂದಿದ್ದಾರೆ.