ಉತ್ತಮ ಜೀವನಕ್ಕೆ ಯೋಗ ಸಹಕಾರಿ
ಚನ್ನಮ್ಮನ ಕಿತ್ತೂರು,ಜೂ 22: ಯೋಗ ಪರಿವರ್ತಕ ಅಭ್ಯಾಸ, ಮನಸ್ಸು ಮತ್ತು ದೇಹದ ಸಾಮರಸ್ಯ, ಆಲೋಚನೆ. ಕ್ರಿಯೆಯ ನಡುವಿನ ಸಮತೋಲನ, ಏಕತೆಯನ್ನು ಪ್ರತಿನಿಧಿಸುತ್ತದೆ. ಇದು ಆತ್ಮವನ್ನು ಸಂಯೋಜಿಸುತ್ತದೆ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ ಅದು ನಮ್ಮ ಒತ್ತಡದ ಜೀವನಕ್ಕೆ ಶಾಂತಿಯನ್ನು ತರುತ್ತದೆ. ಎಂದು ಪ್ರಧಾನ ಗುರು ಸದಾಶಿವ.ಲ. ಪೋಳ ಹೇಳಿದರು.
ತಾಲೂಕಿನ ದೇವಗಾಂವ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 10ನೇ ಅಂತರರಾಷ್ಟ್ರೀಯ ಯೋಗಾ ಕಾರ್ಯಕ್ರಮಕ್ಕೆ ಸಸಿಗೆ ನೀರುನಿಸಿ ಚಾಲನೆ ನೀಡಿ ಮಾತನಾಡಿದ ಅವರು, ಗತಕಾಲದಿಂದ ಹೊರಬಂದು 21ನೇ ಶತಮಾನದಲ್ಲಿ ಇಡಿ ವಿಶ್ವಕ್ಕೆ ಯೋಗದ ಅಗತ್ಯವಿದೆ ಎಂದರು.
ಎಸ್‍ಎಸ್‍ಡಿಎಮ್‍ಸಿ ಅಧ್ಯಕ್ಷ ಮಂಜುನಾಥ ಮುಪ್ಪಿನಮಠ ಮಾತನಾಡಿ. ಪ್ರಪಂಚದ ಕಲ್ಯಾಣದೊಂಧಿಗೆ ತಮ್ಮ ಯೋಗಕ್ಷೇಮವನ್ನು ಯೋಗ ಹೊಂದಿದೆ ಎಂಬುವುದನ್ನು ಅರಿತುಕೊಳ್ಳಲು ಯೋಗ ಸಹಾಯಮಾಡಿದೆ. ಯೋಗ ಧ್ಯಾನದ ಏಕಾಗ್ರತೆ ಹೆಚ್ಚಿಸಲು ಸಹಾಯವಾಗಿದೆ. ಯೋಗದಿಂದ ಶಕ್ತಿ, ಉತ್ತಮ ಆರೋಗ್ಯ, ಯೋಗಕ್ಷೇಮ ವೃದ್ಧಿಸುತ್ತದೆ.” ಹೀಗಾಗಿ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ನೋಡಿಕೊಳ್ಳುವಂತೆ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಕರೆ ನೀಡಿದರು.
ಈ ವೇಳೆ ಸಹ ಶಿಕ್ಷಕರಾದ ಎಸ್ ಎ ಬುಡವಿ, ಎಸ್ ಎಸ್ ಕುಂದರನಾಡ, ಎಸ್ ಎಸ್ ಹಾಲಗೇರಿ, ಎಸ್,ಎಸ್, ಚಿಕ್ಕಮಠ, ವ್ಹಿ.ಎಂ. ಮಾನ್ಯದಮಠ, ಎ.ಸಿ. ಚೌಹ್ವಾನ, ರಾಘವೇಂದ್ರ ಹೊಂಬಳ, ಮಂಜುಳಾ ಬಾರ್ಕಿ, ತನುಜಾ ತೆಂಬದಮನಿ, ಎಸ್‍ಡಿಎಂಸಿ ಸರ್ವಸದಸ್ಯರು, ಗ್ರಾ.ಪಂ.ಅಧ್ಯಕ್ಷ, ಪಿಡಿಓ, ಸರ್ವಸದಸ್ಯರು, ಗ್ರಾಮಸ್ಥರು, ಅಡುಗೆ ಸಿಬ್ಬಂದಿ ಮಕ್ಕಳು, ಸೇರಿದಂತೆ ಇನ್ನಿತರಿದ್ದರು.