ವೈಜ್ಞಾನಿಕ ಕೃಷಿಯಿಂದ ಗ್ರಾಮೀಣ ಪ್ರದೇಶದ ರೈತರಿಗೆ, ಕೃಷಿಕರಿಗೆ ಉತ್ತಮ ಆದಾಯ ಸಾಧ್ಯ
ಸಂಜೆವಾಣಿ ವಾರ್ತೆ
 ದಾವಣಗೆರೆ .ಜೂ.20; ವೈಜ್ಞಾನಿಕ ಕೃಷಿಯಿಂದ ಗ್ರಾಮೀಣ ಪ್ರದೇಶದ ರೈತರಿಗೆ, ಕೃಷಿಕರಿಗೆ ಉತ್ತಮ ಆದಾಯ ಬರಲು ಸಾಧ್ಯ ಎಂದು ಸಿಇಓ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.ಜಿಲ್ಲಾ ಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲಾ ಪಂಚಾಯತ್ ಸಂಭಾಂಗಣದಲ್ಲಿ ಹಮ್ಮಿಕೋಳ್ಳಲಾಗಿದ್ದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಮತ್ತು ಮೀನು ಕೃಷಿಕರಿಗೆ ಮೀನು ಸಾಕಾಣಿಕೆಯ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತೋಟಗಾರಿಕೆ,  ರೇಷ್ಮೆ ಮತ್ತು ಪಶುಸಂಗೋಪನಾ ಇಲಾಖೆ, ಮೀನುಗಾರಿಕೆ, ಕೃಷಿ ಇಲಾಖೆಗಳು ಗ್ರಾಮೀಣ ಪ್ರದೇಶದ  ರೈತರಿಗೆ, ಕೃಷಿಕರಿಗೆ ತುಂಬಾ ಹತ್ತಿರವಾದಂತಹ ಇಲಾಖೆಗಳಾಗಿವೆ. ಆದ್ದರಿಂದ ಜನರು ಇಂತಹ ಇಲಾಖೆಗಳನ್ನು  ಸಂಪರ್ಕಿಸಿ, ಸರ್ಕಾರದ ಯೋಜನೆಗಳನ್ನು ತಿಳಿದುಕೊಳ್ಳುವ ಮೂಲಕ ಯೋಜನೆಗಳ ಲಾಭ ಪಡೆದು ವೈಜ್ಞಾನಿಕವಾಗಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದಲ್ಲದೆ ಗ್ರಾಮ ಪಂಚಾಯತಿಗಳ ಆದಾಯವನ್ನು ಹೇಗೆ ಹೆಚ್ಚಿಗೆ ಮಾಡಿ ಕೊಳ್ಳಬಹುದೆಂದು ತಿಳಿಸಿದರು.ಮೀನುಗಾರಿಕೆ ಉಪನಿರ್ದೇಶಕರಾದÀ ಶ್ರೀನಿವಾಸ್ ಕುಲಕರ್ಣಿ ಪ್ರಸ್ತಾವಿಕ ನುಡಿಗಳನ್ನಾಡಿದರು.ಮೀನುಗಾರಿಕೆ ವಿದ್ಯಾಲಯದ ಡೀನ್ ಡಾ. ಶಿವಕುಮಾರ್ ಮಗದ ಮೀನು ಕೃಷಿಯ ಕುರಿತು ಕೃಷಿಕರಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಡಾ.ಉಮೇಶ್, ಕೃಷಿ ವಿಜ್ಞಾನ ಕೇಂದ್ರ ಐಸಿಎಆರ್ ಮುಖ್ಯಸ್ಥರಾದ ಡಾ.ದೇವರಾಜು, ಎಲ್ಲ ತಾಲ್ಲೂಕು ಸ್ವ-ಸಹಾಯ ಸಂಘದ ಮಹಿಳೆಯರು, ಮೀನು ಕೃಷಿಕರು ಹಾಗೂ ಇನ್ನಿತರರು ಭಾಗವಹಿಸಿದ್ದರು.