ಮಿರಿಯಾಣ: ಶ್ರೀ ಕೊತ್ಲಾಪುರ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ
ಚಿಂಚೋಳಿ,ಜೂ.8- ಸಹಸ್ರಾರು ಭಕ್ತರ ಜೈಕಾರದ ನಡುವೆ ತಾಲೂಕಿನ ಮಿರಿಯಾಣ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಕೊತ್ಲಾಪುರ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು, ಭಕ್ತದಿಗಳು ಸುರಿಯುವ ಮಳೆಯನ್ನು ಲೆಕ್ಕಿಸದೆ ಶ್ರದ್ಧಭಕ್ತಿಯಿಂದ ಜಾತ್ರೆಯ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಚಿಂಚೋಳಿ ತಾಲೂಕಿನ ಗಡಿಭಾಗ ಮಿರಿಯಾಣ ಗ್ರಾಮಕ್ಕೆ ಹೊಂದಿಕೊಂಡಿರುವ ಕೊತ್ಲಪುರದ ಆರಾಧ್ಯ ದೈವ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತದಿಗಳ ಭಾಗವಹಿಸಿ ಜೈಕಾರಗಳನ್ನು ಹಾಕಿದರು.
ಸತತ ಒಂದು ತಿಂಗಳು ನಡೆಯುವ ಈ ಜಾತ್ರೆಯು ಮುಂದಿನ ಕಾರಹುಣ್ಣಿಮೆಯ ವರಗೆ ನಡೆಯುವುದು ಎಂದು ಪ್ರಧಾನ ಅರ್ಚಕರು ತಿಳಿಸಿದ್ದು ಪಕ್ಕದ ಕರ್ನಾಟಕದ ವಿವಿಧ ಜಿಲ್ಲೆಯಿಂದ ಹಾಗೂ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿ ದೇವರ ಕೃಪಾಶಿರ್ವಾದ ಪಡೆದರು