ದೇವಸ್ಥಾನಗಳು ನಮ್ಮ ಪರಂಪರೆಯ ರಾಯಭಾರಿಗಳು
ಲಕ್ಷ್ಮೇಶ್ವರ,ಮೇ30: ದೇವಸ್ಥಾನಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮಾತ್ರವಲ್ಲ. ಅವು ನಮ್ಮ ಶ್ರೇಷ್ಠ ಪರಂಪರೆಯ ರಾಯಬಾರಿಗಳು. ಅಂತಹದಕ್ಕೆ ಉತ್ತಮ ಉದಾಹರಣೆ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ” ಎಂದು ಉಪನ್ಯಾಸಕ ಸೋಮಶೇಖರ ಕೆರಿಮನಿ ಅಭಿಪ್ರಾಯಪಟ್ಟರು. ಅವರು ಲಕ್ಷ್ಮೇಶ್ವರ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿ ಹುಣ್ಣಿಮೆಯಂದು ಹಮ್ಮಿಕೊಳ್ಳಲಾಗುವ ‘ಪುಲಿಗೆರೆ ಪೌರ್ಣಿಮೆ’ ಕಾರ್ಯಕ್ರಮ ಸರಣಿಯ 30 ನೇ ಸಂಚಿಕೆಯಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ರಹ್ಮಾಕುಮಾರಿ ನಾಗಲಾಂಬಿಕೆ “ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ತಿಕವಾಗಿ ಸೋಮೇಶ್ವರ ದೇವಸ್ಥಾನದ ಪಾತ್ರ ಮಹತ್ತರವಾದುದು. ಅಂತಹ ಹಿರಿಮೆ ಸಾರುವ ಇಲ್ಲಿ ಪ್ರತಿ ಹುಣ್ಣಿಮೆಯಂದು ಉತ್ತಮ ಕಾರ್ಯ ಸಂಘಟಿಸಲಾಗುತ್ತಿರುವದು ಶ್ಲ್ಯಾಘನೀಯ”ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ “ಸೋಮೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಮೇ ಕೊನೆಯ ವಾರ ಸೂರ್ಯನ ಪ್ರಥಮ ಕಿರಣಗಳು ಗರ್ಭ ಗುಡಿಯಲ್ಲಿನ ಸೋಮೇಶ್ವರ ಮೂರ್ತಿಯನ್ನು ತಲುಪುವ ವಿಹಂಗಮ ನೋಟ ಇವಾಗಲೂ ಕಣ್ತುಂಬಿಕೊಳ್ಳಬಹುದು” ಎಂದರು.
ಮುಖ್ಯ ಅತಿಥಿಗಳಾಗಿ ವಿದ್ಯುತ್ ಸರಬರಾಜು ನಿಗಮದ ಗುರುರಾಜ್ ಸಿ, ಸಾಂಸ್ಕೃತಿಕ ಚಿಂತಕ ವಾಸಣ್ಣ ಪಾಟೀಲ ಕುಲಕರ್ಣಿ ಭಾಗವಹಿಸಿ ಮಾತನಾಡಿದರು.
ನೀಲಪ್ಪ ಕಜ್ರಕ್ಕಣ್ಣನವರ,ಸುರೇಶ ರಾಚನಾಯ್ಕರ, ಸಿದ್ದನಗೌಡ್ರ ಬಳ್ಳೋಳ್ಳಿ, ಎಸ್.ಎಫ್. ಆದಿ,
ಪಿ.ಬಿ.ಖರಾಟೆ,
ಎನ್.ಆರ್.ಸಾತಪೂತೆ,
ದೇವಣ್ಣ ಬಳಿಗಾರ, ಸೋಮಣ್ಣ ಅಣ್ಣಿಗೇರಿ, ಎಂ.ಶಿದ್ಲಿಂಗಯ್ಯ, ಗೀತಾ ಮಾನ್ವಿ, ಲಲಿತಕ್ಕ ಕೆರಿಮನಿ,ಸರೋಜಕ್ಕ ಬನ್ನೂರ, ಸೋಮಣ್ಣ ಮುಳಗುಂದ, ಕುಬೇರಪ್ಪ ಮಹಾಂತಶೇಟ್ಟರ, ಎಂ.ಎನ್.ಹುಬ್ಬಳ್ಳಿ, ವಿರುಪಾಕ್ಷಪ್ಪ ಆದಿ, ಎಸ್.ಎ. ಸಾತಣ್ಣನವರ, ಆಶೋಕ ನೀರಾಲೋಟಿ ಹಾಗೂ ಇತರರು ಉಪಸ್ಥಿತರಿದ್ದರು.
ಜಯಪ್ರಕಾಶ ಹೊಟ್ಟಿ, ನಾಗರಾಜ ಕಳಸಾಪೂರ, ಜಿ. ಎಸ್. ಗುಡಗೇರಿ ಕಾರ್ಯಕ್ರಮ ನಿರ್ವಹಿಸಿದರು.