ಜಾತ್ರೆಗಳಿಂದ ಸಂಸ್ಕøತಿ, ಭಕ್ತಿ, ಸೌಹಾರ್ದತೆ ಹೆಚ್ಚಳ : ಡಾ.ಬಸವಲಿಂಗ ಅವಧೂತರು
ಬೀದರ:ಮೇ.21: ತಾಲೂಕಿನ ಶಮಶೀರನಗರ ಗ್ರಾಮದಲ್ಲಿ ಇತ್ತೀಚಿಗೆ ಸಿಂದಗೇರಿ ನಂದಿಬಸವಣ್ಣ ಪಂಚಕಮಿಟಿ ವತಿಯಿಂದ ಒಂದು ವಾರಗಳ ಕಾಲ ಸಿಂದಗೇರಿ ನಂದಿ ಬಸವಣ್ಣನವರ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.
ಸರ್ವಧರ್ಮ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿದ ಮಲ್ಲಯ್ಯ ಗಿರಿ, ದೇಗಲಮಡಿ ಆಶ್ರಮದ ಪೂಜ್ಯಶ್ರೀ ಡಾ.ಬಸವಲಿಂಗ ಅವಧೂತರು ಜಾತ್ರೆಗಳಿಂದ ಜನರಲ್ಲಿ ಸಮಾಜದಲ್ಲಿ ಸಂಸ್ಕøತಿ ಭಕ್ತಿ ಸೌಹಾರ್ದತೆ ಹೆಚ್ಚಾಗುತ್ತದೆ. ಶಾಂತಿ, ನೆಮ್ಮದಿ, ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಜಾತ್ರೆಗಳು ಎಲ್ಲಾ ಧರ್ಮಗಳ ಮಧ್ಯ ಶಾಂತಿ ಸೌಹಾರ್ದತೆಯಿಂದ ಬಾಳಲು ಬಹಳ ಸಹಾಯಕವಾಗುತ್ತವೆ. ಸತ್ಯ ಧರ್ಮ, ಪರಿಪಾಲನೆಯಿಂದ ಮನಸ್ಸು ಪರಿಶುದ್ಧಗೊಳಿಸುತ್ತದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕøತಿ ಮರೆಯಬಾರದು. ಹುಟ್ಟು ಎಷ್ಟೇ ಸಹಜವೋ ಸಾವು ಅಷ್ಟೇ ನಿಶ್ಚಿತ. ಇವೆರಡರ ಮಧ್ಯ ಬದುಕು ಸಮೃದ್ಧಗೊಳಿಸಲು ಮಹಾತ್ಮರು ತೋರಿದ ದಾರಿ ಆಶಾಕಿರಣವಾಗಿದೆ. ನಾವೆಲ್ಲ ಮಹಾತ್ಮರು ತೋರಿದ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕಗೊಳಿಸಬೇಕೆಂದು ಹೇಳಿದರು.