ಡಿ. ಸಿ. ಸಿ. ಬ್ಯಾಂಕ್ ಪಕ್ಕದಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಲೈನ್
ಹೂವಿನ ಹಿಪ್ಪರಗಿ: ಏ.23:ಬಸವನಬಾಗೇವಾಡಿಯ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಇರುವ ಆ. ಅ. ಅ. ಬ್ಯಾಂಕ್. ಇಂಗಳೇಶ್ವರ ಶಾಖೆಯ ಬಿಲ್ಡಿಂಗ್ ಪಕ್ಕದಲ್ಲಿ. ವಿದ್ಯುತ್ ಕಂಬ ಅಪಾಯಕ್ಕೆ .ಆಹ್ವಾನಿಸುತ್ತಿದ್ದು.
ಇದರಿಂದ ಈ ಬ್ಯಾಂಕಿಗೆ ಹೋಗು ಬರುವ ಸಾರ್ವಜನಿಕರಿಗೆ ತುಂಬಾ ಅಪಾಯಕಾರಿ ಜಾಗವಾಗಿದ್ದು. ಈ ಬ್ಯಾಂಕ್ ಕಟ್ಟಡ ಎರಡನೆಯ ಅಂತಸ್ತಿನಲ್ಲಿದ್ದು. ಮೇಲ್ಗಡೆ ಹೋಗುವಾಗ. ಬ್ಯಾಂಕಿಗೆ ಹೋಗಿ ಬರುವ ಸಾರ್ವಜನಿಕರು ಸ್ವಲ್ಪ ಕೈ ಮೇಲೆ ಮಾಡಿದರು ಮತ್ತು ಅಕ್ಕಪಕ್ಕದಲ್ಲಿ ನಿಂತುಕೊಂಡರೆ. ಅಪಾಯ ಖಂಡಿತ, ಬ್ಯಾಂಕಿನ ಗ್ರಾಹಕರು ಮತ್ತು ಸಾರ್ವಜನಿಕರು ಬ್ಯಾಂಕಿಗೆ ಹೋಗುವಾಗ ಬಹಳ ಎಚ್ಚರದಿಂದ ಹೋಗಬೇಕು. ಇದೆ ಕಂಬದ ಪಕ್ಕದಲ್ಲಿ ದಿನ ಪ್ರತಿ ದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮ ಕಾರ್ಯಾಲಯಕ್ಕೆ ಹೋಗುತ್ತಾರೆ ಅಪಾಯಕ್ಕೆ ಆಹ್ವಾನಿಸುತ್ತಿರುವ ಈ ವಿದ್ಯುತ್ ಕಂಬ ಇವರ ಕಣ್ಣಿಗೆ ಕಾಣಿಸುತ್ತಿಲ್ಲವೇ ?
ಈ ವರದಿ ನೋಡಿದ ಮೇಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಿ ಬ್ಯಾಂಕಿನ ಸಿಬ್ಬಂದಿ ವರ್ಗದವರಿಗೆ ಮತ್ತು ಬ್ಯಾಂಕಿನಲ್ಲಿ ವ್ಯವಹಾರ ಮಾಡುವ.ರೈತರಿಗೆ, ಗ್ರಾಹಕರಿಗೆ ಮತ್ತು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.