ನಾಸೀರ್ ಹುಸೇನ್ ಗೆ ಅದ್ದೂರಿ ಸ್ವಾಗತ
(ಸಂಜೆವಾಣಿ  ಪ್ರತಿನಿಧಿಯಿಂದ)
ಬಳ್ಳಾರಿ, ಏ.15 : ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾದ ಬಳಿಕ ಡಾ.ಸೈಯದ್ ನಾಸೀರ್ ಹುಸೇನ್ ನಿನ್ನೆ ಸಂಜೆ ನಗರಕ್ಕೆ ಆಗಮಿಸಿದಾಗ ಸಚಿವ ಬಿ.ನಾಗೇಂದ್ರ,  ಶಾಸಕ ನಾರಾ ಭರತ್ ರೆಡ್ಡಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ. ನಡೆಯಿತು.
ತೆರೆದ ವಾಹನದಲ್ಲಿದ್ದವರಿಗೆ  ಎರಡು ಜೆಸಿಬಿ ಮೂಲಕ ಪುಷ್ಪ ಹಾಕುವ ಮೂಲಕ , ಪಟಾಕಿ ಸಿಡಿಸಿ ಬೈಕ್ ರ‌್ಯಾಲಿ ಮಾಡಿ ಅದ್ದೂರಿ ಮೆರವಣಿಗೆ  ಇಂದಿರಾ  ವೃತ್ತದಿಂದ ಗಡಗಿ ಚೆನ್ನಪ್ಪ ವೃತ್ತ, ಗವಿಯಪ್ಪ ವೃತ್ತದಿಂದ ಕೌಲಬಜಾರ್ ವರೆಗೆ   ಮೆರವಣಿಗೆ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮ.  ಡಿಜೆ ಹಾಡು ಹಾಕುವ ಮೂಲಕ ಪ್ರಚಾರ ನಡೆಯಿತು