ಜೋಳ ಅಕ್ರಮ ಖರೀದಿಗೆ ರೈತ ಸಂಘ ಆಕ್ಷೇಪ
(ಸಂಜೆವಾಣಿ ವಾರ್ತೆ)
ಬಳ್ಳಾರಿ. ಏ.08: ಜಿಲ್ಲೆಯಲ್ಲಿ ಜೋಳ ಖರೀದಿ  ಕೇಂದ್ರದಲ್ಲಿ ಜೋಳ ತೆಗೆದುಕೊಂಡು ಹೋದ  ರೈತರಿಗೆ ಖಾಲಿ ಚೀಲ ಇಲ್ಲಾ ಅಂತ ಆನ್ ಲೋಡ್ ಮಾಡದ ಹಾಗೆ ನಿಂತಿದೆ.
ಆದರೆ ತಾಲ್ಲೂಕು ಖರೀದಿ ಕೇಂದ್ರಗಳಲ್ಲಿ ವ್ಯಾಪಾರಸ್ಥರಿಂದ ಡೈರಕ್ಷ ಆನ್ ಲೋಡ್ ಆಗುತ್ತಿದೆ ಒಂದು ಕ್ವಿಂಟಾಲ್‌ಗೆ 100 ರೂಪಾಯಿ ಮಾಮುಲ್ ತೆಗೆದುಕೊಂಡು ಆನ್ ಲೋಡ್ ಮಾಡಿಕೊಳ್ಳುತ್ತಾರೆ.
ಇದರಿಂದ ರೈತರಿಗೆ ತುಂಬಾ ಅನ್ಯಾಯ ಆಗುತ್ತಿದೆ  ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ  ಜಿಲ್ಲಾ ಅಧ್ಯಕ್ಷರು ಸಂಗನಕಲ್ಲು ಕೃಷ್ಣ,  ಖಜಾಂಚಿ ಆಂಡಳ್ ಕೆ.ಮಾರಣ್ಣ ಹಾಗೂ  ರೈತರು ಜಿಲ್ಲಾಡಳಿತಕ್ಕೆ ಇಂದು  ಮನವಿ ಮಾಡಿದ್ದಾರೆ.