ಇಡೀ ಜೀವನವೇ ಒಂದು ನಾಟಕ:ತಾರಕೇಶ್ವರ್ ವಿ. ಬಿ
ಕಲಬುರಗಿ:ಮಾ.7:”ಇಡೀ ಜೀವನವೇ ಒಂದು ನಾಟಕ, ಹುಟ್ಟಿನಿಂದ ಸಾಯುವವರೆಗೆ ಮಾನವನು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾನೆ” ಎಂದು ಹೈದರಾಬಾದನ ಇಂಗ್ಲೀಷ ಮತ್ತು ವಿದೇಶಿ ಭಾμÉಗಳ ವಿಶ್ವವಿದ್ಯಾಲಯದ ಪೆÇ್ರ. ತಾರಕೇಶ್ವರ್ ವಿ. ಬಿ, ಹೇಳಿದರು. ಅವರು ಸಿಯುಕೆಯ ಇಂಗ್ಲಿμï ವಿಭಾಗವು ಆಯೋಜಿಸಿದ್ದ “ಪ್ರದರ್ಶನ ಕಲೆಗಳ ಹೊಸ ಸಾಧ್ಯತೆಗಳು ಮತ್ತು ಪ್ರಯೋಗಗಳು” ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಮುದ್ರಣ ಮಾಧ್ಯಮದ ಆಗಮನದ ಮೊದಲು ಕರ್ತೃತ್ವವು ಪ್ರದರ್ಶನ ಕಲೆಗಳ ರೂಪದಲ್ಲಿತ್ತು. ನಾಟಕಗಳು ಮತ್ತು ಕಥೆಗಳು ಸಮಾಜ ಮತ್ತು ಅವರ ಸುತ್ತಮುತ್ತಲಿನ ಬಗ್ಗೆ ಬರಹಗಾರರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಧನಗಳಾಗಿದ್ದವು. ಮುದ್ರಣ ಮತ್ತು ಇತರ ಆಧುನಿಕ ಮಾಧ್ಯಮಗಳ ಆಗಮನದಿಂದ ಲೇಖಕರು ಮತ್ತು ನಾಟಕಗಳು ಮಾರಾಟದ ಸರಕುಗಳಾಗಿ ಮಾರ್ಪಟ್ಟಿವೆ ಮತ್ತು ಬಂಡವಾಳೀಕರಣಕ್ಕೆ ಕಾರಣವಾಗಿವೆ. ಪ್ರದರ್ಶನವು ಕೇವಲ ರಂಗಭೂಮಿ ಮತ್ತು ನಾಟಕಗಳಿಗೆ ಮಾತ್ರ ಸೀಮಿತವಾಗಿಲ್ಲ, ಕವಿತೆ, ಆತ್ಮಚರಿತ್ರೆ ಮತ್ತು ಯಾವುದೇ ಸಾಹಿತ್ಯವನ್ನು ಪ್ರದರ್ಶಿಸಬಹುದಾಗಿದೆ. ಇದು ಪ್ರದರ್ಶನ ಕಲೆಗಳ ಹಳೆಯ ಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸುತ್ತದೆ ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ” ಎಂದು ಅವರು ಹೇಳಿದರು.
ಆಂಗ್ಲ ವಿಭಾಗದ ಮುಖ್ಯಸ್ಥರಾದ ಪೆÇ್ರ.ಬಸವರಾಜ ಡೋಣೂರ ಅವರು ಮಾತನಾಡಿ, “ವೇದಿಕೆಯಲ್ಲಿ ನಾಟಕದ ಪ್ರದರ್ಶನವನ್ನು ನಾವು ಆನಂದಿಸುತ್ತೇವೆ, ಆದರೆ ಅದರ ಹಿಂದೆ ಸಾಕಷ್ಟು ನೋವು ಇದೆ. ಸರಿಯಾದ ಪ್ರತಿಭೆಯನ್ನು ಗುರುತಿಸುವುದು, ಪೆÇೀಷಿಸುವುದು ಮತ್ತು ಅವರನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವುದು ತುಂಬಾ ಕಷ್ಟದ ಕೆಲಸ. ನಿರ್ದೇಶಕರು ಮಾತ್ರ ಈ ನೋವನ್ನು ಅನುಭವಿಸುತ್ತಾರೆ ಮತ್ತು ಸಹಿಸಿಕೊಳ್ಳುತ್ತಾರೆ” ಎಂದು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಅವರು ಮಾತನಾಡಿ, “ಆಧುನಿಕತೆ ಮತ್ತು ಪಾಶ್ಚಿಮಾತ್ಯೀಕರಣದ ಆಗಮನದಿಂದ ಭಾರತೀಯ ಸಂಸ್ಕøತಿ ಮತ್ತು ಸಮಾಜ ಅಪಾಯದಲ್ಲಿದೆ. ನಾವು ಇದನ್ನು ಅರ್ಥಮಾಡಿಕೊಂಡು ನಮ್ಮ ಸುಸಂಸ್ಕೃತ ನಾಗರಿಕತೆಯನ್ನು ರಕ್ಷಿಸಬೇಕು” ಎಂದು ಹೇಳಿದರು.
ಸನ್ಮಾನ್ಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ತರಗತಿಯ ಆಚೆಗೂ ಕಲಿಯಲು ಸಾಕಷ್ಟು ಅವಕಾಶಗಳಿವೆ. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತಜ್ಞರೊಂದಿಗೆ ಸಂವಹನ ನಡೆಸಲು ಮತ್ತು ಅವರಿಂದ ಕಲಿಯಲು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಇಂಗ್ಲಿμï ಭಾμÉಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಆದ್ದರಿಂದ ನಾವು ವಿದ್ಯಾರ್ಥಿಗಳಿಗೆ ಇಂಗ್ಲಿμï ಭಾμÁ ಬೋಧನೆ ಮತ್ತು ತರಬೇತಿ ಪ್ರಯೋಗಾಲಯ ಮತ್ತು ಚಲನಚಿತ್ರ ಪ್ರಯೋಗಾಲಯಗಳನ್ನು, ಸಂಜೆ ವೇಳೆಯಲ್ಲಿ ಹೆಚ್ಚುವರಿ ತರಗತಿಗಳನ್ನು ಪ್ರಾರಂಭಿಸಿದ್ದೇವೆ. ಮಾತನಾಡುವ ಮತ್ತು ಬರೆಯುವ ಭಾμÁ ಕೌಶಲ್ಯಗಳು ಬಹಳ ಮುಖ್ಯ. ಅದನ್ನು ಸರಿಯಾಗಿ ಕಲಿತುಕೊಳ್ಳಿ” ಎಂದು ಹೇಳಿದರು.
ಇದಕ್ಕೂ ಮುನ್ನ ಸಂಘಟನಾ ಕಾರ್ಯದರ್ಶಿ ಡಾ.ರೇಣುಕಾ ಎಲ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಮಹಿಮಾ ರಾಜ್ ಕಾರ್ಯಕ್ರಮ ನಿರೂಪಿಸಿದರು, ಡಾ.ಜಯದೇವಿ ಜಂಗಮಶೆಟ್ಟಿ, ಡಾ.ರವಿಕಿರಣ್ ನೊಕೋಡ್ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡ ಗೀತೆಯನ್ನು ಹಾಡಿದರು. ಡಾ.ಆಶಿಶ್ ಬೆಳಮಕರ ವಂದಿಸಿದರು. ಈ ಸಂದರ್ಭದಲ್ಲಿ ಪೆÇ್ರ.ಗಣೇಶ ಪವಾರ, ಡಾ.ಮಹೇಂದ್ರ, ಡಾ.ಪ್ರಕಾಶ ಬಾಳಿಕಾಯಿ, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಉಪಸ್ಥಿತರಿದ್ದರು.