2ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.27: ನಗರದ ಶಾದಿಮಹಲ್‍ನಲ್ಲಿ ಶೈನ್ ಮಹರ್ಷಿಯಲ್ ಆಟ್ಸ್ ಟ್ರಸ್ಟ್‍ನವರು 2ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ನ 10 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿ ಬಹುಮಾನಗಳನ್ನು ಪಡೆದಿದ್ದಾರೆ.
15ವರ್ಷದ ಕೆಳಗಿನ ವಿಭಾಗದಲ್ಲಿ ನಂದೀಶ್.ಪಿ.ಎಸ್. ಕಟಾ ವಿಭಾಗದಲ್ಲಿ ಪ್ರಥಮ, ಕುಮ್ಮತಿಯಲ್ಲಿ ದ್ವೀತಿಯ, ತೇಜೇಶ್.ಪಿ.ಎಸ್. ಕಟಾ ವಿಭಾಗದಲ್ಲಿ ದ್ವೀತಿಯ, ಕುಮ್ಮತಿ ವಿಭಾಗದಲ್ಲಿ ತೃತೀಯ, ಮದನ್‍ಕೃಷ್ಣ ಕಟಾ ವಿಭಾಗದಲ್ಲಿ ತೃತೀಯ, ಕುಮ್ಮತಿ ವಿಭಾಗದಲ್ಲಿ ದ್ವೀತಿಯ, ಎಸ್.ಎಂ.ಸಾನ್ವಿ, ಕಟಾವಿಭಾಗದಲ್ಲಿ ದ್ವೀತಿಯ, ಕುಮ್ಮತಿಯ ವಿಭಾಗದಲ್ಲಿ ದ್ವೀತಿಯ. ರಿತೀಷ.ಬಿ. ಕಟಾ ವಿಭಾಗದಲ್ಲಿ ಪ್ರಥಮ, ಕುಮ್ಮತಿವಿಭಾಗದಲ್ಲಿ ಪ್ರಥಮ, ಅದಿತಿ.ಎಸ್, ಕಟಾ ವಿಭಾಗದಲ್ಲಿ ದ್ವೀತಿಯ, ಕುಮ್ಮತಿ ವಿಭಾಗದಲ್ಲಿ ತೃತೀಯ, ನವ್ಯಶ್ರೀ.ಟಿ. ಕಟಾ ವಿಭಾಗದಲ್ಲಿ ದ್ವೀತಿಯ, ಕುಮ್ಮತಿ ವಿಭಾಗದಲ್ಲಿ ತೃತೀಯ, ಕುಮಾರಿ ಪ್ರಜ್ಞಾ ಕಟಾ ವಿಭಾಗದಲ್ಲಿ ದ್ವೀತಿಯ, ಕುಮ್ಮತಿ ವಿಭಾಗದಲ್ಲಿ ದ್ವೀತಿಯ, ಕುಮಾರಿ ಮಾನಸ ಕಟಾ ವಿಭಾಗದಲ್ಲಿ ಪ್ರಥಮ, ಕುಮ್ಮತಿ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ ಎಂದು
ಟ್ರಸ್ಟ್ ನ ಅಧ್ಯಕ್ಷರು ಮತ್ತು ತರಬೇತಿದಾರರು, ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.