ಬಿ.ಎಂ.ಆರ್.ವೈ ಕಾಲೇಜ್ ನಲ್ಲಿ  “ನವಸಂಗಮ” ಸ್ವಾಗತ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.06: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿನ್ನೆ  2024-25ನೇ ಸಾಲಿನ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತಕಾರ್ಯಕ್ರಮ “ನವಸಂಗಮ” “ಫ್ರೆಷರ್ಸ್ ಡೇ 2024-2025 ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿ.ಎಸ್.ಕೆ ವಿವಿ ಉಪ ಕುಲಪತಿ ಪ್ರೊ|| ಎಂ. ಮುನಿರಾಜು ಮಾತನಾಡುತ್ತಾ, “ ಈ ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಸೀಟು ಪಡೆಯಲು ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣರಾದ ನಂತರ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕರ್ನಾಟಕದ ವಿವಿಧ ಸ್ಥಳಗಳಿಂದ ಒಂದೇ ಛತ್ರಿಯಡಿಯ ಈ ಸಂಸ್ಥೆಯಲ್ಲಿ ಬರುತ್ತಿದ್ದಾರೆ, ಅದಕ್ಕಾಗಿಯೇ ಈ ಕಾರ್ಯಕ್ರಮವನ್ನು ನವಸಂಗಮ ಎಂದು ಕರೆಯಲಾಗುತ್ತದೆ., ನನ್ನ ಆತ್ಮೀಯ ವಿದ್ಯಾರ್ಥಿಗಳೇ. ನೀವು ಭಾರತದ ದಕ್ಷಿಣ ರಾಜ್ಯಗ¼, ಕರ್ನಾಟಕದ ಅತ್ಯುತ್ತಮ ಕಾಲೇಜನ್ನು ಆಯ್ಕೆ ಮಾಡಿದ್ದೀರಿ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಕಾರ್ಯದರ್ಶಿ  ಚೋರನೂರು ಟಿ ಕೊಟ್ರಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ನಿಮ್ಮ ಹೊಸ ಸ್ನೇಹಿತರ ವಲಯದಲ್ಲಿ ನೀವು ಸಂತೋಷವಾಗಿರಬೇಕು, ಒಳ್ಳೆಯ ಗುಣಗಳನ್ನು ಸಂಪಾದಿಸಿ, ಕೆಟ್ಟ ಅಭ್ಯಾಸಗಳಿಂದ ದೂರವಿರಿ. ನೆನಪಿಡಿ, ಇದು ನಮ್ಮ ಜೀವನದಲ್ಲಿ ಒಂದು ಮಹತ್ವದ ತಿರುವು ಎಂದರು.
ಕಾಲೇಜಿನ ಅಧ್ಯಕ್ಷರು. ಜಾನೆ ಕುಂಟೆ ಬಸವರಾಜ್ ಮಾತನಾಡಿ,  “ ವಿ ವಿ ಸಂಘ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ಅದು ಈ ಕಾಲೇಜಿನಲ್ಲಿರಲಿ ಅಥವಾ ನಮ್ಮ ವಿ ವಿ ಸಂಘದ ಯಾವುದೇ ಕಾಲೇಜಿನಲ್ಲಿರಲಿ, ವಿದ್ಯಾರ್ಥಿಗಳ ಜೀವನವನ್ನು ರೂಪಿಸಲು ಬದ್ಧವಾಗಿದೆ ಎಂದರು.
ಆರಂಭದಲ್ಲಿ ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ ಸ್ವಾಗತಿಸಿದರು, ಮೊದಲನೇಯ ವರ್ಷ ವಿದ್ಯಾರ್ಥಿವೃಂದರ ಸಂಯೋಜಕರು-ಡಾ|| ಚಿನ್ನಾ.ವಿ.ಗೌಡರು, ಸ್ಟೂಡೆಂಟ್‍ಇಂಡಕ್ಷನ್ ಪ್ರೋಗ್ರಾಮ್‍ನ ಬಗ್ಗೆ ವಿವರಿಸಿದರು. ಶ್ರೀಮತಿ ವಾಣಿ ಹಿರೇಗೌಡರು ಕಾರ್ಯಕ್ರಮ ನಿರೂಪಿಸಿದರು, ಉಪಪ್ರಾಂಶುಪಾಲರಾದ ಡಾ|| ಶ್ರೀಮತಿ ಸವಿತಾ ಸೊನೋಳಿ  ಅವರು ಈ ಸಂಸ್ಥೆಯಲ್ಲಿ ಲಭ್ಯವಿರುವ ಸೌಲಭ್ಯಗಳು, ವಿದ್ಯಾರ್ಥಿಗಳು ಮಾಡಿದ ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದರು , ಹಿಂದಿನ ವರ್ಷಗಳಲ್ಲಿ ಪಡೆದ ಎಲ್ಲಾ ಗ್ರೇಡ್‍ಗಳು ಏನೇನು, ಕರ್ನಾಟಕ ರಾಜ್ಯದಲ್ಲಿ ಈ ಸಂಸ್ಥೆ ಎಷ್ಟು ಉತ್ತಮವಾಗಿದೆ ಇತ್ಯಾದಿ ಎಲ್ಲವನ್ನೂ ವಿದ್ಯಾರ್ಥಿಗಳ ಮುಂದೆ ಸಂಕ್ಷಿಪ್ತವಾಗಿ ವರದಿ ಮಾಡಿದರು. ಡಾ||ಬಿ.ಸುಮಂಗಳ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಸಹಾಕಾರ್ಯದರ್ಶಿ ಯಾಲ್ಪಿ ಮೇಟಿ ಪಂಪನಗೌಡ, ಡೀನ್-ಅಕಾಡಮಿಕಡಾ||ಹೆಚ್.ಗಿರೀಶ್,ಡೀನ್-ಪರೀಕ್ಷಾಡಾ||ಬಿ.ಶ್ರೀಪತಿ, ಇಂಜಿನೀರಿಂಗ್‍ವಿಭಾಗಗಳ ಮುಖ್ಯಸ್ಥರು- ಡಾ||ಹೆಚ್.ಎಂ.ಮಲ್ಲಿಕಾರ್ಜುನ, ಡಾ||ಕೋರಿ ನಾಗರಾಜ, ಡಾ||ಚಿತ್ರಿಕಿತೋಟಪ್ಪ, ಡಾ||ಕೊಟ್ರೇಶ್.ಎಸ್, ಡಾ.ಪ್ರಭಾವತಿ, ಡಾ||ಕೆ.ರಾಘವೇಂದ್ರ ಪ್ರಸಾದ್, ಡಾ||ಬಿ.ಸುಮಂಗಳ, ಡಾ||ಕೊಟ್ಟೂರೇಶ್ವರ.ಎನ್.ಎಂ, ಡಾ||ನಾಗಭೂಷಣ.ಎನ್.ಎಂ, ಡಾ.ನಾಗರಾಜ್, ಮೊದಲನೇಯವರ್ಷವಿದ್ಯಾರ್ಥಿವೃಂದರ ಸಂಯೋಜಕರು-ಡಾ|| ಚಿನ್ನಾ.ವಿ.ಗೌಡರು, ಡಾ.ಪುನೀತ್‍ಜಿ.ಜೆ, ಮಹಾವಿದ್ಯಾಲಯದ ಶಿಕ್ಷಕವೃಂದದವರು, ಸಿಬ್ಬಂದಿವರ್ಗದವರು ವಿದ್ಯಾರ್ಥಿವೃಂದದವರು, ಪೋಷಕರು ಭಾಗವಹಿಸಿದ್ದರು.