ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಬೀದರ್,ಆ.27-ನಗರ ಹೊರವಲಯದ ಬೆನಕನಳ್ಳಿ ರಸ್ತೆಯಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಯಿತು.
ಭಗವಾನ್ ಕೃಷ್ಣನಿಗೆ ಪವಿತ್ರವಾದ ಪಠಣಗಳು ಮತ್ತು ಭಕ್ತಿಗೀತೆಗಳೊಂದಿಗೆ ಪೂಜೆಯನ್ನು ಸಲ್ಲಿಸಲಾಯಿತು.
ಮುದ್ದಾದ ಪುಟ್ಟ ಮಕ್ಕಳು ರಾಧಾ ರಾಣಿ ಮತ್ತು ಶ್ರೀಕೃಷ್ಣ ವೇಷಭೂಷಣಗಳನ್ನು ಧರಿಸಿದ್ದರು. ನವಿಲು ಗರಿಗಳಿಂದ ಅಲಂಕರಿಸಿದ ವೇದಿಕೆಯು ಗೋಕುಲದಂತೆ ಕಂಗೊಳಿಸುತ್ತಲಿತ್ತು.
ಜಯ ಜನಾರ್ದನ ಗೀತೆಗೆ ಮಕ್ಕಳು ಮಾಡಿದ ನೃತ್ಯ ಮಂತ್ರಮುಗ್ಧರನ್ನಾಗಿಸಿತ್ತು. ನಂತರ ಪ್ರಾಂಶುಪಾಲರಾದ ಡಾ.ಮನೀಶಾ ಅವರು ಮಕ್ಕಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವದ ಬಗ್ಗೆ ವಿವರಿಸಿದರು.
ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನ್‍ಪೆÇೀರ್ ಅವರು, ಕೆನಡಾದಲ್ಲಿರುವ ಹೊರತಾಗಿಯೂ ಈ ಶುಭ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಭಕ್ತಿ ಸಮರ್ಪಿಸಿ ಮಕ್ಕಳು, ಸಿಬ್ಬಂದಿಗೆ ಶುಭ ಕೋರಿದರು.
ಹೆಡ್ ಮಿಸ್ಟ್ರೆಸ್ ಜ್ಯೋತಿ ರಾಗ, ಫೌಂಡೇಶನ್ ಪ್ರಾಂಶುಪಾಲೆ ಡಾ.ಮನಿಷಾ, ಕೋರ್ ಗ್ರೂಪ್ ಸದಸ್ಯರಾದ ಸುಬೇದಾರ್ ಮಾದೆಪ್ಪ ಹಾಗೂ ಸುಬೇದಾರ್ ಧನರಾಜ್, ಅಶೋಕ್ ಪಾಟೀಲ್, ಡಾ.ಗಹನಿನಾಥ್, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು