ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸ್ಪಟ್ಟಿರುವ ಅಪರಿಚಿತ ಮೃತ್ಯು; ಶವ ದಫನ
ಉಡುಪಿ, ಅ.೨೩; ವಾರಸುದಾರರ ಬರುವಿಕೆಗಾಗಿ ರಕ್ಷಿಸಿಡಲಾಗಿದ್ದ ಅಪರಿಚಿತ ಶವದ ವಾರಸುದಾರರು ಸಂಪರ್ಕಿಸದೆ ಇರುವುದರಿಂದ, ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಅಂತ್ಯಸಂಸ್ಕಾರವನ್ನು ಗೌರಯುತವಾಗಿ, ಬೀಡಿನಗುಡ್ಡೆಯಲ್ಲಿರುವ ದಫನ ಭೂಮಿಯಲ್ಲಿ ಗುರುವಾರ ನಡೆಸಲಾಯಿತು. ಕೆಲವು ದಿನಗಳ ಹಿಂದೆ ಮೃತ ವ್ಯಕ್ತಿಯನ್ನು ಪೇಜಾವರ ಅಧೋಕ್ಷಜ ಮಠದ ಮುಂಭಾಗ ಅನಾರೋಗ್ಯದಿಂದ ಅಸಹಾಯಕ ಸ್ಥಿತಿಯಲ್ಲಿದ್ದಾಗ, ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ವ್ಯಕ್ತಿ ಮೃತಪಟ್ಟಿದ್ದರು. ಶವವನ್ನು ಶವಗಾರದಲ್ಲಿ ವಾರಸುದಾರರ ಬರುವಿಕೆಗಾಗಿ ರಕ್ಷಿಸಿಡಲಾಗಿತ್ತು.
ನಗರ ಪೋಲಿಸ್ ಠಾಣೆಯ ಎ.ಎಸ್.ಐ ನವೀನ್ ದೇವಾಡಿಗ , ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ದಫನ ಕಾರ್ಯಕ್ಕೆ ಪ್ರಶಾಂತ್, ರಂಜಿತ್ ಕಲ್ಮಾಡಿ, ಸಾಜಿ ಕುಮಾರ್, ಸತೀಶ್ ಕುಮಾರ್ ,ವಿಕಾಸ್ ಶೆಟ್ಟಿ,ಫ್ಲವರ್ ವಿಷ್ಣು ಸಹಕರಿಸಿದರು. ನಗರಸಭೆ, ಜಿಲ್ಲಾಸ್ಪತ್ರೆ ನೆರವು ನೀಡಿತು.