ಶರಣಬಸವೇಶ್ವರ ಸಂಸ್ಥಾನದಿಂದ 200 ವಿದ್ಯಾರ್ಥಿಗಳು ಉಚಿತ ವೈದ್ಯಕೀಯಕ್ಕೆ ಪ್ರವೇಶ
ಕಲಬುರಗಿ:ಆ.23:ಪ್ರತಿವರ್ಷ ಶರಣಬಸವೇಶ್ವರ ವಸತಿ ಪದವಿಪೂರ್ವ ಶಾಲೆಯಿಂದ 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉಚಿತ ವೈದ್ಯಕೀಯಕ್ಕೆ ಪ್ರವೇಶ ಪಡೆಯುತ್ತಾರೆ ಎಂದು ಖ್ಯಾತ ವೈದ್ಯರಾದ ಶರಣಬಸವೇಶ್ವರ ಸಂಸ್ಥಾನದ ಡಾ.ಅಲ್ಲಮಪ್ರಭು ದೇಶಮುಖ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಎಸ್.ಬಿ.ಆರ್.ಶಾಲೆಯಿಂದ ವೈದ್ಯಕೀಯ ಕ್ಷೇತ್ರಕ್ಕೆ ಎಂಬ ವಿಷಯ ಕುರಿತು ಮಾತನಾಡಿದರು.
ಪರಮಪೂಜ್ಯ ದೊಡ್ಪಪ್ಪ ಅಪ್ಪ ಅವರು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರೆ ಅದನ್ನು ಹೆಮ್ಮರವಾಗಿ ಬೆಳೆಸಿದವರು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು. ವಿದ್ಯಾರ್ಥಿಗಳ ಏಳ್ಗೆಗಾಗಿ ಅವರು ಹಗಲಿರುಳು ಶ್ರಮಿಸಿದರು. ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂದು ಮನಗಂಡು ಕಲ್ಯಾಣ ಕರ್ನಾಟಕವನ್ನು ಶೈಕ್ಷಣಿಕ ಹಬ್ ಆಗಿ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷ 500 ವಿದ್ಯಾಥಿ9ಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗುತ್ತಾರೆ. ಸಂಸ್ಥಾನದಿಂದ ಪೂಜ್ಯ ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿಯವರು 3.5 ಕೋಟಿ ರೂ.ಗಳು ಮಕ್ಕಳಿಗೆ ಉಚಿತ ಸ್ಕಾಲರಶೀಪ್ ನೀಡುತ್ತಿದ್ದಾರೆ. ದೇಶ ಕಂಡ ಹೆಮ್ಮೆಯ ರಾಷ್ಟ್ರಪತಿ ಡಾ.ಅಬ್ದುಲ್ ಕಲಂ ಅವರು ಸಂಸ್ಥಾನ ಮತ್ತು ಶೈಕ್ಷಣಿಕ ಕಾರ್ಯಗಳನ್ನು ನೋಡಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಶರಣಬಸವೇಶ್ವರ ಸಂಸ್ಥಾನದ ಇಂಜೀನಿಯರಿಂಗ್ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ವಿದ್ಯಾರ್ಥಿಗಳು ತಾಂತ್ರಿಕವಾಗಿ ಮುಂದೆ ಬರಬೇಕು ಮನಗಂಡು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು 2002 ರಲ್ಲಿ ಅಪ್ಪಾ ಇಂಜಿನಿಯರಿಂಗ್, ಮಹಿಳೆಯರಿಗಾಗಿಯೇ 2010 ಗೋದುತಾಯಿ ಕಾಲೇಜ್, 2010 ಸುರಪೂರದಲ್ಲಿ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜ್, ಮತ್ತು 2011 ರಲ್ಲಿ ಬೀದರನಲ್ಲಿ ಲಿಂಗರಾಜಪ್ಪ ಅಪ್ಪ ಇಂಜನಿಯರಿಂಗ್ ಕಾಲೇಜುಗಳನ್ನು ತೆರೆದು ತಾಂತ್ರಿಕವಾಗಿ ಬೆಳೆಯಲು ಶ್ರಮಿಸಿದ್ದಾರೆ ಎಂದು ಹೇಳಿದರು. ನಂತರ ಎಸ್.ಬಿ.ಆರ್. ಶಾಲೆಯ ಹಿಂದಿ ಪ್ರಾಧ್ಯಾಪಕರಾದ ಡಾ.ಚಂದ್ರಕಾಂತ ಪಾಟೀಲ ಮಾತನಾಡಿ, ಪೂಜ್ಯ ಡಾ.ಅಪ್ಪ ಅವರು 1949 ರಲ್ಲಿ ಶರಣಬಸವೇಶ್ವರ ಕಲಾ, ವಾಣಿಜ್ಯ ಪದವಿಪೂರ್ವ ಕಾಲೇಜು, 1956 ರಲ್ಲಿ ಶರಣಬಸವೇಶ್ವರ ವಿಜ್ಞಾನ ಪದವಿಪೂವ ಕಾಲೇಜ್, 1971 ರಲ್ಲಿ ಗೋದುತಾಯಿ ದೊಡ್ಡಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಪೂರ್ವ ಕಾಲೇಜ್, ಶರಣಬಸವೇಶ್ವರ ಕಲಾ ಪದವಿಪೂರ್ವ ಕಾಲೇಜ್, ಶರಣಬಸವೇಶ್ವರ ವಾಣಿಜ್ಯ ಪದವಿಪೂರ್ವ ಕಾಲೇಜು, 2011 ರಲ್ಲಿ ಶರಣಬಸವೇಶ್ವರ ವಸತಿ ಪದವಿಪೂರ್ವ ಕಾಲೇಜ್, 1999 ರಲ್ಲಿ ದೊಡ್ಪಪ್ಪ ಅಪ್ಪ ವಿಜ್ಞಾನ ಪದವಿಪೂವ ಕಾಲೇಜ್ ಆರಂಭಿಸಿ ಈ ಭಾಗದ ವಿದ್ಯಾಥಿ9ಗಳು ಶೈಕ್ಷಣಿಕವಾಗಿ ಬೆಳೆಯಲು ಕಾರಣಿಕೃರ್ತರಾಗಿದ್ದಾರೆ ಎಂದು ಹೇಳಿದರು.