ಆಳಂದ:ರಾಜ್ಯ ಪಾಲರ ವಿರುದ್ಧ ಅಹಿಂದ ನಾಯಕರ ಪ್ರತಿಭಟನೆ
ಆಳಂದ.ಆ.೧೮: ಸಿದ್ಧರಾಮಯ್ಯ ಅವರ ವಿರುದ್ಧದ ಮುಡಾ ಹಗರಣ ಸಂಬAಧ ರಾಜ್ಯಪಾಲರು ಪ್ರಾಸಿಕ್ಯುಸನಗೆ ಅನುಮತಿನೀಡಿರುವುದನ್ನು ಖಂಡಿಸಿ ಶನಿವಾರ ಸಾಯಂಕಾಲ ಬಸ್ ನಿಲ್ದಾಣ ಎದುರುಗಡೆ ಟಾಯ್ ರಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು .
ಅಮರ ಜ್ಯೋತಿ ಭಂತೇಜಿ ಮಾತನಾಡಿ ನಿಮ್ಮಜೊತೆ ನಾವಿದ್ದಿವಿ ಮುಖ್ಯಮಂತ್ರಿಗಳೇ ಕೇಂದ್ರ ಸರ್ಕಾರದ ಹುನ್ನಾರ ನಡೆದಿದೆ ಕರ್ನಾಟಕದ ಅಭಿವೃದ್ಧಿ ಸಹಿಸದ ಕಾರಣ ಈ ರೀತಿ ನೋಟಿಸ್ ನೀಡುತ್ತಿರುವುದು ಸರಿಯಲ್ಲ ಎಂದರು ಹೋರಾಟಗಾರ ರಮೇಶ ಲೋಹಾರ ಮಾತನಾಡಿ ನಮ್ಮ ಮುಖ್ಯಮಂತ್ರಿಗಳು ಎಷ್ಟೆ ನೋಟಿಸ್ ನೀಡಿದರು ಹೆದರಲ್ಲ ಎದೆ ಗುಂದದೆ ಎದೆಗಾರಿಕೆಯಿಂದ ನಿಭಾಯಿಸುತ್ತಾರೆ ನಾವು ಅವರ ಹಿಂದೆ ಸದಾ ಇರ್ತಿವಿ ಎಂದರು ಶ್ರೀಶೈಲ ಪೂಜಾರಿ ಮಾತನಾಡಿ ನಮ್ಮ ಸಿದ್ಧರಾಮಯ್ಯ ಸಾಹೇಬ್ರಿಗೆ ಅನ್ಯಾಯವಾದ್ರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಶತಸಿದ್ಧ ಎಂದರು .
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘದ ತಾಲೂಕ ಅಧ್ಯಕ್ಷರು ಬಾಲಾಜಿ ಗೋಡ್ಕೆ ಮತ್ತು ಅಮರ ಜ್ಯೋತಿ ಬಂತೆಜಿ ಬುದ್ಧ ವಿಹಾರ ಬೆಳಮಗಿ ಸಾನಿಧ್ಯ ದಲ್ಲಿ ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರಮೇಶ್ ಲೋಹಾರ್ ಬಾಬುರಾವ್ ಅರುಣೋದಯ ಶ್ರೀಶೈಲ್ ಪೂಜಾರಿ ಅಪ್ಪು ಪೂಜಾರಿ ಶಿವಕುಮಾರ್ ಖಜೂರಿ ಬಸವರಾಜ್ ಚಿಂಚೋಳಿ ಸಿದ್ಧಾ ರಾಮ್ ಶಶಿಕುಮಾರ್ ನಂದು ಕಟಾರೆ ನಾಗರಾಜ್ ಧರ್ಮರಾಜ್ ಯಲ್ಲಾಲಿಂಗ ಹನುಮಂತ್ ಗೌಡ ಅನಿಲ ಆಕಾಶ್ ಇನ್ನಿತರ ಅಹಿಂದ ಸಮಾಜದ ಮುಖಂಡರು ಸಿದ್ಧರಾಮಯ್ಯ ರವರ ಅಭಿಮಾನಿಗಳು ಉಪಸ್ಥಿತರಿದ್ದರು