ಗುವಿವಿ ಗೌರವ ಡಾಕ್ಟರೇಟ್ ಪದವಿ ಪುರಷ್ಕೃತ ಹೋರಾಟಗಾರ ಡಾ.ಲಕ್ಷö್ಮಣ ದಸ್ತಿಗೆ ಕಜಾಪದಿಂದ ಗೌರವ ಸಮ್ಮಾನ
ಕಕ ಭಾಗದ ಜನರಲ್ಲಿ ಹೋರಾಟ ಮನೋಭಾವ ಹೆಚ್ಚಳವಾಗಲಿ
ಕಲಬುರಗಿ:ಆ.೧೭: ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ, ದೇಶಕ್ಕೆ ಪ್ರಥಮ ಕಾನೂನು ಗ್ರಂಥ ಕೊಟ್ಟ, ನಾಡಿಗೆ ಪ್ರಥಮ ಕೃತಿ ನೀಡಿದ, ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ನಮ್ಮ ಕಲ್ಯಾಣ ಕರ್ನಾಟಕ ಭಾಗವು ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದಿದೆ. ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ನ್ಯಾಯಯುತ ಹಾಗೂ ನಿರಂತರ ಹೋರಾಟ ಮಾಡುವ ಮನೋಭಾವ ಇಲ್ಲಿಯ ಜನರಲ್ಲಿ ಹೆಚ್ಚಳವಾಗಬೇಕಾಗಿದೆ ಎಂದು ಕಕ ಹೋರಾಟಗಾರ ಡಾ.ಲಕ್ಷö್ಮಣ ದಸ್ತಿ ಹೇಳಿದರು.
ಗುವಿವಿ ವತಿಯಿಂದ ತಮಗೆ ಇತ್ತೀಚಿಗೆ ಗೌರವ ಡಾಕ್ಟರೇಟ್ ಪದವಿ ದೊರೆತಿರುವ ಪ್ರಯುಕ್ತ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ವತಿಯಿಂದ ನಗರದ ಜಗತ ಬಡಾವಣೆಯ ಶರಣ ಡೋಹರ ಕಕ್ಕಯ್ಯ ದೇವಸ್ಥಾನದಲ್ಲಿ ಶುಕ್ರವಾರ ತಮಗೆ ಏರ್ಪಡಿಸಲಾಗಿದ್ದ ಗೌರವ ಸಮ್ಮಾನದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ಗೌರವ ಸಾಮಾಜಿಕ ಹೋರಾಟ ಕ್ಷೇತ್ರ ಮತ್ತು ಸಮಸ್ತ ಹೋರಾಟಗಾರರಿಗೆ ದೊರೆತ ಗೌರವವಾಗಿದೆ ಎಂದರು.
ಇತಿಹಾಸವನ್ನು ತಿಳಿಯದವರು, ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ, ನಮ್ಮ ಭಾಗದ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಬೇಕು. ರಾಜ್ಯದ ಇತರೆ ಭಾಗಗಳ ಅಭಿವೃದ್ಧಿಯ ಬಗ್ಗೆ ಹಿನ್ನಲೆಯನ್ನು ಅರ್ಥಮಾಡಿಕೊಳ್ಳಬೇಕು. ಆಗ ನಮಗೆ ಹೋರಾಟದ ಕಿಚ್ಚು ಹೊರಹೊಮ್ಮಲು ಸಾಧ್ಯವಾಗುತ್ತದೆ. ಕೃಷ್ಣಾ ಜಲ ಸಮಸ್ಯೆ, ನಂಜುAಡಪ್ಪ ಸಮಿತಿ ರಚನೆ, ಹೈಕೋರ್ಟ ಪೀಠ ಸ್ಥಾಪನೆ, ಕಕ ವಿಶೇಷ ಸ್ಥಾನಮಾನ ೩೭೧(ಜೆ) ಸೇರಿದಂತೆ ಕಕ ಭಾಗದ ಜ್ವಲಂತ ಸಮಸ್ಯೆಗಳು ಈ ಭಾಗದ ನಿರಂತರ ಹೋರಾಟದ ಫಲವಾಗಿ ದೊರೆತಿವೆ ಎಂಬುದು ಮನಗಾಣಬೇಕಾಗಿದೆ. ಮುಂದೆಯೂ ಕೂಡಾ ಸಮಸ್ಯೆಗಳ ಪರಿಹಾರಕ್ಕೆ ನ್ಯಾಯಯುತ ಹೋರಾಟ ಮಾಡಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿAಗಪ್ಪ ಮಾತನಾಡಿ, ಡಾ.ಲಕ್ಷö್ಮಣ ದಸ್ತಿ ಅವರು ಸ್ವಾತಂತ್ರö್ಯ ಹೋರಾಟಗಾರರ ಮನೆತನದವರಾಗಿದ್ದರಿಂದ, ರಕ್ತಗತವಾಗಿಯೇ ಅವರಲ್ಲಿ ಹೋರಾಟ ಪ್ರವೃತ್ತಿ ಮೂಗೂಡಿದೆ. ಅವರಲ್ಲಿರುವ ಕಕ ಭಾಗದ ಅಭಿವೃದ್ಧಿ ತುಡಿತ, ಕಾಳಜಿ ಶ್ಲಾಘನೀಯ ಮತ್ತು ಮಾದರಿಯಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಂಘಟನಾ ಕಾರ್ಯದರ್ಶಿ ಸಾಯಬಣ್ಣ ಹೋಳ್ಕರ್, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಿವಪುತ್ರ ಗೊಬ್ಬೂರಕರ್, ರಮೇಶ ಗಾಯಧನಕರ್, ಬಾಬುರಾವ ಕಟಕೆ, ಅಶೋಕ ಖರಟಮಲ್ಲ, ದಿನೇಶ ಸೇರಿದಂತೆ ಇನ್ನಿತರರಿದ್ದರು.