“ಹರ ಘರ್ ತಿರಂಗಾ” ಅಭಿಯಾನಕ್ಕೆ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನ
ಕಲಬುರಗಿ,ಆ.14:ಎಸ್ಬಿಆರ್ ಪಬ್ಲಿಕ್ ಶಾಲೆಯ 1000 ವಿದ್ಯಾರ್ಥಿಗಳು “ಹರ ಘರ್ ತಿರಂಗಾ” ಅಭಿಯಾನದ ಭಾಗವಾಗಿ ಭವ್ಯ ಪಥ ಸಂಚಲನ ನಡೆಸಿದರು. ಈ ಪಥ ಸಂಚಲನವು ಎಸ್ಬಿಆರ್ ಪಬ್ಲಿಕ್ ಶಾಲೆಯಿಂದ ಆರಂಭಗೊಂಡು, ಶರಣಬಸವೇಶ್ವರ ದೇವಸ್ಥಾನಕ್ಕೆ ತಲುಪಿತು.
ವಿದ್ಯಾರ್ಥಿಗಳು ಜಾಥಾ ಮೂಲಕ ರಾಷ್ಟ್ರಭಕ್ತಿಯನ್ನು ಪ್ರತಿಬಿಂಬಿಸಿದರು. ಪಥ ಸಂಚಲನದ ಕೊನೆಯಲ್ಲಿ, ಅವರು ತಿರಂಗಾ ಧ್ವಜವನ್ನು ಶ್ರೀ ಬಸವರಾಜ ದೇಶಮುಖ್, ಕಾರ್ಯದರ್ಶಿ, ಎಸ್ಬಿವಿವಿಎಸ್ ಕಲಬುರ್ಗಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಸವರಾಜ ದೇಶಮುಖ್ ಅವರು ಮಾತನಾಡಿ, ವಿದ್ಯಾರ್ಥಿಗಳು ತೋರಿಸಿರುವ ದೇಶಪ್ರೇಮ ಹಾಗೂ ಸಮ್ಮಾನಸಹಿತ ಜವಾಬ್ದಾರಿಯು ಭವಿಷ್ಯದಲ್ಲಿ ದೇಶದ ಏಳಿಗೆಗೆ ಸಹಾಯವಾಗಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.