ಪೌರಕಾರ್ಮಿಕರ ಮತ್ತು ಸಫಾಯಿಕರ್ಮಚಾರಿ ಸಮಸ್ಯೆಗಳ ಪರಿಹರಿಸಲು ಅಧಿಕಾರಿಗಳು ಸಮಯ ನಿಗಧಿಪಡಿಸಿ:ಜಿಲ್ಲಾಧಿಕಾರಿ.ಬಿ. ಫೌಜಿಯಾ ತರನ್ನುಮ್
ಕಲಬುರಗಿ:ಜು.25: ಪೌರಕಾರ್ಮಿಕರ ಮತ್ತು ಸಫಾಯಿಕವiðಚಾರಿಗಳ ಸಮಸ್ಯೆಗಳು ಪರಿಹರಿಸಲು ಅಧಿಕಾರಿಗಳಿಗೆ ಸಮಯ ನಿಗಧಿಪಡಿಸಲು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಸೂಚನೆ ನೀಡಿದರು.
ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೌರಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪೌರಕಾರ್ಮಿಕರ ಮತ್ತು ಸಫಾಯಿ ನಿಗಧಿತ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ ಪ್ರತಿವರ್ಷ ಅವರಿಗೆ ಒಂದು ವೇತನಬಡ್ತಿ ನೀಡಿಬೇಕು ಇ.ಎಸ್.ಐ. ಸರಿಯಾಗಿ ವೇತನದಲ್ಲಿ ಕಟ್ಟುಮಾಡುತ್ತಿಲ್ಲ. ಇ.ಎಸ್.ಐ. ಕಟ್ಟಮಾಡದಿರುವ ಬಗ್ಗೆ ಅನೇಕ ದೂರಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು..ಜಿಲ್ಲಾಧಿಕಾರಿ ಮಾತನಾಡಿ, ಪ್ರತಿ ವರ್ಷ ಅವರ ಖಾತೆ ವೇತನ ಜಮೆ ಆಗಬೇಕು ಸರ್ಕಾರದಿಂದ ಅವರಿಗೆ ನಿಗಧಿಪಿಡಿಸಿದ ಎಲ್ಲಾ ಸವಲತ್ತುಗಳು ನೀಡಲು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಫಾಯಿ ಕರ್ಮಚಾರಿಗಳ ಸಮಸ್ಯೆಗಳು ಅನೇಕ ಇದ್ದು ಯಾವುದೇ ಅಧಿಕಾರಿಗಳು ಸರಿಯಾದ ನಿರ್ದೇಶನ ನೀಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಮೇಲ್ವಿಚಾರಣ ಸಮಿತಿ ಸದಸ್ಯರಾದ ನರ್ಮದಾ ವಿಶಾಲ ಸೌಧ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಮಾತನಾಡಿ, ಕಾನೂನಾತ್ಮಕ ಸಿಗಬೇಕಾದ ಸೌಲಭ್ಯಗಳನ್ನು ದೊರೆಯುವ ರೀತಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯಿಂದ ಅನುದಾನವನ್ನು ಬಳಕೆ ಮಾಡಿಕೊಂಡು ಒಂದು ವರ್ಷದ ಕೌಶಲ್ಯ ತರಬೇತಿ ನೀಡಬೇಕು. ಅಧಿಕಾರಿಗಳು ಜಂಟಿಯಾಗಿ ಸರ್ವೇ ಮಾಡಿ ಅವರಿಗೆ ಗುರುತಿನ ಚೀಟಿ ನೀಡಿ ಅವರಿಗೆ ತರಬೇತಿ ಆಯೋಜಿಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳ 196 ವಸತಿ ಮನೆಗಳ ವ್ಯವಸ್ಥೆ ಮಾಡಬೇಕು ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಹೆಣ್ಣು ಮಕ್ಕಳು ಸಲುವಾಗಿ ಕೌಶಲ್ಯ ತರಬೇತಿ ನೀಡಬೇಕೆಂದು ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳಿಗೆ ಗುರುತಿನ ಚೀಟಿ ನೀಡಲು ಸೂಚನೆ ನೀಡಿದರು.
ಪುನರ ವಸತಿ ಕೆಲಸವನ್ನು ನೀಡಬೇಕೆಂದು ಪೌರಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿಗಳ ಮೇಲ್ವಿಚಾರಣ ಸಮಿತಿ ಸದಸ್ಯೆ ನರ್ಮದಾ ವಿಶಾಲ ಸೌಧ ಸಭೆಯಲ್ಲಿ ಗಮನಕ್ಕೆ ತಂದರು.
ಸುಲಭ ಶೌಚಾಲಯ ನಿರ್ವಹಣೆಯನ್ನುö ಬೇರೆ ಜಿಲ್ಲೆಯಿಂದ ಬಂದವರು ಕೆಲಸಗಳನ್ನು ಮಾಡುತ್ತಿದ್ದಾರೆ ನಮ್ಮ ಸ್ಥಳೀಯ ಆದ್ಯತೆ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅವರು ಕುಂದುಕೊರತೆಗೆ ಬಗ್ಗೆ ಪ್ರತಿಯೊಂದು ವಿಚಾರಿಸಿ ಅವರಿಂದ ಮಾಹಿತಿ ಪಡೆದುಕೊಂಡರು.
ಅದೇ ರೀತಿಯಾಗಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯಗಳಿಗೆ ಕಂಪ್ಯೂಟರ್ ತರಬೇತಿಯ ಕೊಠಡಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ದೇವಿದಾಸ ಪಾಟೀಲ, ಉಪ ಆಯುಕ್ತ ಆರ್.ಪಿ. ಜಾಧವ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ್ ಸೇರಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಮಾಜ ಕಲ್ಯಾಣಾಧಿಕಾರಿಗಳು ಸಮಾಜದ ಮುಖಂಡರು ಭಾಗವಹಿಸಿದ್ದರು.