ವೀರಶೈವ ಲಿಂಗಾಯತ ಬಿ. ಬಾಲಚಂದ್ರ ಮೂರ್ತಿ ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೨೫-ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಬಿ. ಬಾಲಚಂದ್ರ ಮೂರ್ತಿ ಅವಿರೋಧವಾಗಿ ಆಯ್ಕೆಯಾದರು.
ನಗರದ ಸತ್ತಿ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಕಚೇರಿಯಲ್ಲಿ ನಡೆದ ತಾಲೂಕು ಘಟಕದ ಚುನಾವಣೆಯಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಬಿ. ಬಾಲಚಂದ್ರ ಮೂರ್ತಿ ಒಬ್ಬರೇ ಹಾಗೂ ೧೩ ನಿರ್ದೇಶಕರ ಸ್ಥಾನಗಳಿಗೆ ೧೩ ಮಂದಿ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತಾಲೂಕು ಚುನಾವಣಾಧಿಕಾರಿಯಾಗಿದ್ದ ಎಸ್. ನಾಗಸುಂದರ್ ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಣೆ ಮಾಡಿದರು.
ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಬಾಲಚಂದ್ರ ಮೂರ್ತಿ, ನಿರ್ದೇಶಕರಾಗಿ ಹೊಸೂರು ಜಗದೀಶ್, ಎಚ್.ಜಿ. ನಟರಾಜು, ಜಿ. ಮಲ್ಲಿಕಾರ್ಜುನ, ಎಂ. ಮಹೇಶ್, ಎನ್. ಮಹೇಶ್, ವಿ. ಗುರುಸ್ವಾಮಿ, ಜೆ.ಪಿ. ದೊರೆಸ್ವಾಮಿ, ಎ.ಬಿ. ನಾಗರಾಜು, ಸಿ.ಎಲ್. ನಾಗರಾಜು, ಕೆ.ಎಂ. ಪ್ರಸಾದ್, ಪ್ರಶಾಂತ್‌ಕುಮಾರ್, ಕೆ.ಎಂ. ಶ್ರೀಕಂಠಮೂರ್ತಿ, ಡಿ. ಸೋಮಶೇಖರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿ ಎಸ್. ನಾಗಸುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.