ಸಿಂಗಟಾಲೂರು  ಏತ ನೀರಾವರಿ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ಗೆ ತಕರಾರು.
ಸಂಜೆವಾಣಿ ವಾರ್ತೆ
ಕುಕನೂರು, ಜು.13:  ಸಿಂಗಟಾಲೂರು  ಏತ ನೀರಾವರಿ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗಿದ್ದು ಈ ಕುರಿತಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ನಾವಿಕರಿಸಬಹುದಾದ ಇಂಧನ ಇಲಾಖೆಯ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
ಮದ್ಯ ಪ್ರದೇಶದ ಮಾದರಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಗದಗ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಬರ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವಸಲುವಾಗಿ 2015 ರಲ್ಲಿ 5 ಸಾವಿರ ಕೋಟಿ ರೂ ಮೊತ್ತದ ಅನುಮೋದನೆ ಕೊಡಲಾಗಿತ್ತು, ಅದರಂತೆ ಈಗಾಗಲೇ ಯೋಜನೆ ಪ್ರಗತಿಯಲ್ಲಿ ಇದ್ದು ಇದುವರೆಗೂ ಸುಮಾರು 3 ಸಾವಿರದ ಒಂಬೈನೂರು ಕೋಟಿ ಹಣ ವ್ಯಯಿಸಿ ಪೈಪ್ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ನೀರಾವರಿ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗಿದ್ದು ಉದ್ದೇಶಿತ ಯೋಜನೆಯ ಬಗ್ಗೆ ಚಕಾರ ಶುರುವಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಅಡವಿಹಳ್ಳಿ, ಲಕಮಪುರ, ತಳಕಲ್ ಸೇರಿದಂತೆ ಹಲವು ಹಳ್ಳಿಗಳಲ್ಲಿ ಮದ್ಯ ಪ್ರದೇಶದ ಮಾದರಿಯಲ್ಲಿ ಹನಿ ನೀರಾವರಿ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ಈಗ ಇದೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಇಂಧನ ಇಲಾಖೆ ಮುಂದಾಗಿದೆ. ಆದರೆ ನೀರಾವರಿ ಇಲಾಖೆ ಅನುಮತಿ ಇಲ್ಲದೇ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಜಿಲ್ಲೆಯ ಅಧಿಕಾರಿಗಳು
ಎನ್ ಎ ಮಾಡಲು ಅನುಮತಿ ಕೊಡಲಾಗಿದೆ. ಇದರಿಂದ ಸುಮಾರು 400 ಹೆಕ್ಟೆರ್ ಪಲವತ್ತಾದ ಜಮೀನಿನಲ್ಲಿ ಸೋಲಾರ್ ನಿರ್ಮಾಣದಿಂದ ರೈತರಿಗೆ, ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಉದ್ದೇಶಿಸಿ ಸೋಲಾರ್ ಪಾರ್ಕ್ ನಿರ್ಮಾಣವನ್ನು ನಿಲ್ಲಿಸಬೇಕು ಎಂದು ನಿವೃತ್ತ ಪ್ರಧ್ಯಾಪಕ, ಸಾಮಾಜಿಕ ಹೋರಾಟಗಾರ ಶಂಕರ್ ರೆಡ್ಡಿ ಸೋಮರೆಡ್ಡಿ ಅವರು ಸರ್ಕಾರಕ್ಕೆ ಅಗ್ರಹಿಸಿದ್ದಾರೆ.