ಠೇವಣಿ ಇಟ್ಟರೆ ಸಹಕಾರ ಸಂಘಗಳ ಬಲವರ್ಧನೆ ಸಾಧ್ಯ
ಕೋಲಾರ,ಜು,೧೩- ರೈತರು ವದಂತಿಗಳಿಗೆ ಕಿವಿಗೋಡದರೆ ಪಡೆದುಕೊಂಡಿರುವ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು, ಜತೆಗೆ ಸಹಕಾರ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಆರ್ಥಿಕವಾಗಿ ಸಬಲರಾಗಲು ಮುಂದಾಗಬೇಕು ಎಂದು ಕಡಗಟ್ಟೂರು ಎಸ್‌ಎಫ್‌ಸಿಎಸ್ ಅಧ್ಯಕ್ಷ ಕೆ.ವಿ.ದಯಾನಂದ್ ಹೇಳಿದರು.
ತಾಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವ ಸಹಕಾರ ಸಂಘದಿಂದ ಗುರುವಾರ ಸಘದ ಆವರಣದಲ್ಲಿ ಹಮ್ಮಿಕೊಂಡಿದ್ದ ೧೫೬ ಮಂದಿ ರೈತರಿಗೆ ೧,೪೧,೭೬೦೦೦ ರೂ. ಸಾಲ ವಿತರಣಾ ಸಮಾರಭದಲ್ಲಿ ಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ಕಡಗಟ್ಟೂರು ಸೋಸೈಟಿಯು ಇತರೆ ಬ್ಯಾಂಕ್‌ಗಳಿಂತ ಮಾದರಿಯಾಗಿ ವಹಿವಾಟು ನಡೆಸುತ್ತಿದೆ. ರೈತರಿಗೆ ಆಗಲಿ, ಮಹಿಳಾ ಸಂಘಗಳಿಗೆ ಸಾಲ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಅದ್ದರಿಂದಲೇ ಆರ್ಥಿಕವಾಗಿ ಶಕ್ತಿಹೊಂದಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುತ್ತಿದೆ ಎಂದರು.
ಸಂಘದಿಂದ ಪಡೆದುಕೊಂಡಿರುವ ಸಾಲವನ್ನು ರೈತರು, ಮಹಿಳೆಯರು ಪ್ರಾಮಾಣಿಕವಾಗಿ ಮರು ಪಾವತಿ ಮಾಡುತ್ತಿರುವುದರಿಂದ ವಿವಿಧ ಸಾಲಕ್ಕೆ ಬೇಡಿಕೆ ಹೆಚ್ಚಾಗಿದೆ. ಸಂಘಗಳಿಂದ ಸಾಲ ನೀಡಲು ಸರ್ಕಾರ ಹಣ ನೀಡುತ್ತದೆ ಎಂಬುದು ತಪ್ಪು ಕಲ್ಪನೆ, ರಿಸಾರ್ವ್ ಬ್ಯಾಂಕಿನಿಂದ ನಬಾರ್ಡ್, ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್, ಅಪೆಕ್ಸ್‌ಬ್ಯಾಂಕಿನಿಂದ ಡಿಸಿಸಿ ಬ್ಯಾಂಕಿಗೆ ಸಾಲ ಬರುತ್ತದೆ. ಡಿಸಿಸಿ ಬ್ಯಾಂಕಿನಿಂದ ಸಂಘಗಳು ಸಾಲ ಪಡೆದು ರೈತರಿಗೆ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತಿದ್ದು, ಡಿಸಿಸಿ ಬ್ಯಾಂಕಿಗೆ ಬಡ್ಡಿ ಪಾವತಿ ಮಾಡಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಸಕಾಲಕ್ಕೆ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಆಡಳಿತಾಧಿಕಾರಿ ಇರುವುದರಿಂದ ಸಾಲ ನೀಡಲು ಅಸಕ್ತಿ ತೋರುತ್ತಿಲ್ಲ. ಅಧಿಕಾರಿಗಳು ಸಾಲ ವಸೂಲಿಗೆ ಮುಂದಾಗುತ್ತಿಲ್ಲ. ಸಂಬಂಳಕ್ಕೆ ಸಿಮೀತರಾಗಿದ್ದಾರೆ. ಅಧಿಕಾರಿಗಳು ಬೆಂಗಳೂರಿನಿಂದ ಬಂದು ಹೋಗುವುದರಿಂದ ರೈತರ ಬಗ್ಗೆ ಕಾಲಜಿಯಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಕೋಲಾರದಲ್ಲಿ ಸಹಕಾರ ವ್ಯವಸ್ಥೆ ಸಂಪುರ್ಣವಾಗಿ ನಾಶವಾಗಿತ್ತು. ಪರಿಸ್ಥಿತಿ ಸುಧಾರಣೆಯಾದ ನಂತರ ಸೋಸೈಟಿಗಳು ಆರ್ಥಿಕವಾಗಿ ಸಬಲಗೊಮಡಿವೆ. ದಿನಗಳಲ್ಲಿ ಮನೆ ನಿಮಾರ್ಣ, ನಿವೇಶನ ಖರೀದಿ ಸಾಲ ನೀಡಲಾಗುತ್ತಿತ್ತು, ಈಗ ಚಿನ್ನ ಸಾಲ ನೀಡಲಾಗುವುದು. ಖಾಸಗಿ ಬ್ಯಾಂಕ್, ಫೈನಾನ್ಸ್ ಗಳವರು ನೀಡುವ ಮಾತುಗಳಿಗೆ ಮರುಳಾಗದೆ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡಲು ಮುಂದಾಗಬೇಕು ಎಂದು ಕೋರಿದರು.
ಸಮಾರಂಭದಲ್ಲೇ ೬೧ ಲಕ್ಷ ರೂ. ಠೇವಣಿ ಸಂಗ್ರವಾಗಿದ್ದು, ಆ ಪೈಕಿ ಮಚಂಡಹಳ್ಳಿ ಮಂಜುನಾಥ್ ೧೦ ಲಕ್ಷ, ಕಡಗಟ್ಟೂರು ದಯಾನಂದ್ ೨೦ ಲಕ್ಷ, ಕೆ.ಎಸ್.ವರುಣಾ ೨ ಲಕ್ಷ, ಡೇವಿಡ್ ೨೦ ಲಕ್ಷ, ಬೈರಪ್ಪ ೮೦ ಸಾವಿರ, ಮುನಿರಾಜು ೧ ಲಕ್ಷ ಠೇವಣಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂದ ಉಪಾಧ್ಯಕ್ಷ ಡೇವಿಡ್, ನಿರ್ದೇಶಕ ರಾಜಣ್ಣ, ರಮೇಶ್, ರಾಮಾಂಜಿ, ಸುಬ್ರಮಣಿ, ಮಂಜುನಾಥ್, ಸಿಇಒ ಮುನೀಶ್ವರಪ್ಪ ಮತಿತರರು ಹಾಜರಿದ್ದರು.