ಜನಸಂಖ್ಯೆ ಸಮಸ್ಯೆ ದೇಶದ ಅಭಿವೃದ್ಧಿಗೆ ಮಾರಕ:ಡಾ.ಧ್ಯಾನೇಶ್ವರ ನೀರಗುಡೆ
ಬೀದರ, ಜು.12: ಜನಸಂಖ್ಯೆ ಸಮಸ್ಯೆಯು ದೇಶದ ಅಭಿವೃದ್ಧಿಗೆ ಮಾರಕವಾಗಿರುವುದರಿಂದ ಇದನ್ನು ನಿಯಂತ್ರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲರೂ ಕುಟುಂಬ ಕಲ್ಯಾಣ ವಿಧಾನಗಳನ್ನು ಬಳಸಿಕೊಂಡು ಜನಸಂಖ್ಯಾ ಸ್ಥಿರತೆಯಲ್ಲಿ ಕೈ ಜೋಡಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ..ಧ್ಯಾನೇಶ್ವರ ನೀರಗುಡೆ ಹೇಳಿದರು.
ಅವರು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ-2024ರ ಜನಸಂಖ್ಯಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವರ್ಷವು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು “ಅಭಿವೃದ್ದಿ ಹೊಂದಿದ ಭಾರತದ ಹೊಸ ಗುರಿತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ. ಹಿರಿಯ ಜನಸಂಖ್ಯಾ ಶಾಸ್ತ್ರಜ್ಞ ಡಾ|| ಕೆ.ಸಿ.ಜಕರಿಯಾ ಅವರು ಈ ದಿನವನ್ನು ಆಚರಿಸಬೇಕೆಂದು ಸಲಹೆ ನೀಡಿದರು. ಜನಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಶಾಶ್ವತ ವಿಧಾನಗಳಾದ ಎನ್.ಎಸ್.ವಿ, ಟ್ಯೂಬೆಕ್ಟಮಿ, ಲ್ಯಾಪೆÇ್ರಸ್ಕೋಪಿಕ್ ಶಸ್ತ್ರಚಿಕಿತ್ಸೆ ಜಿಲ್ಲಾ, ತಾಲೂಕು, ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಸಮೂದಾಯ ಆರೋಗ್ಯ ಕೇಂದ್ರಗಳಲ್ಲಿ ಸೇವೆಯು ಲಭ್ಯವಿದೆ. ತಾತ್ಕಾಲಿಕ ಗರ್ಭ ನಿರೋಧಕ ವಿಧಾನಗಳಾದ ನಿರೋಧ ಹಾಗೂ ಮಾಲಾ-ಎನ್, ಛಾಯಾ ಮಾತ್ರೆಗಳು ಹಾಗೂ ನೂತನ ಗರ್ಭ ನಿರೋಧಕವಾದ ಅಂತರಾ ಚುಚ್ಚು ಮದ್ದು ಹಾಗೂ 10 ವರ್ಷಗಳ ವರೆಗೂ ಸುರಕ್ಷತಾ ನೀಡುವಂತಹ ಐ.ಯು.ಸಿ.ಡಿ-380 ಎ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಮೇಲ್ದರ್ಜೆಯ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಹೊಸದಾಗಿ ಬಂದಿರುವ Subಜeಡಿmಚಿಟ ಅoಟಿಣಡಿಚಿಛಿeಠಿಣive Imಠಿಟಚಿಟಿಣ ನಮ್ಮ ರಾಜ್ಯದಲ್ಲಿ ಬೀದರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಮೊದಲನೆ ಹಂತದಲ್ಲಿ ಜಾರಿಯಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುಂಚೆ ನಡೆದ ಜಾಗೃತಿ ಜಾಥಾವು ಬೀದರ ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂಖ್ಯೆ ನಿಯಂತ್ರಣದ ಘೋಷಣೆಗಳನ್ನು ಕೂಗುತ್ತಾ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಸತತ ಎರಡನೇ ಬಾರಿ ಎಫ್.ಪಿ.ಎಲ್.ಎಂ.ಐ.ಎಸ್ ನಲ್ಲಿ ಮೊದಲನೇ ಸ್ಥಾನ ಪಡೆದಿದ್ದಕ್ಕೆ ಆರೋಗ್ಯ ನಿರೀಕ್ಷಣಾಧಿಕಾರಿ ರೂಜ್‍ವೆಲ್ಟ್ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಶಿವಶಂಕರ.ಬಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ, ಡಾ. ಕಿರಣ ಪಾಟೀಲ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ, ಸಂಗಪ್ಪ ಕಾಂಬಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಡಾ.ದಿಲೀಪ ಡೋಂಗರೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ, ಡಾ. ಸಂತೋಶ ಕಾಳೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ, ಡಾ. ಸಂಗರೆಡ್ಡಿ ತಾಲೂಕಾ ಆರೋಗ್ಯ ಅಧಿಕಾರಿ, ಡಾ. ಲಕ್ಷಿ??ಕಾಂತ , ಶಾಲುಬಾಯಿ ಡಿ.ಎನ್.ಓ, ಅನೀತಾ, ಮುದಾಸ್ಸಿರ್, ಮಹೇಶರೆಡ್ಡಿ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನಸಿರ್ಂಗ್ ಕಾಲೇಜಿನ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.