ಗೋಡಂಬಿ ಸಂಸ್ಕರಣೆ ಘಟಕ ಉದ್ಘಾಟನೆ
ಗದಗ,ಜು.8: ಸಹಕಾರ ಭೀಷ್ಮ ಕೆ. ಎಚ್. ಪಾಟೀಲ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಈ ಗೋಡಂಬಿ ಸಂಸ್ಕರಣೆ ಘಟಕ ಒಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಹೇಳಿದರು.
ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ, ಹುಲಕೋಟಿ ಗ್ರಾಮ ಪಂಚಾಯತಿ, ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಗೊಡಂಬಿ ಬೆಳೆಗಾರರ ಸಂಘ, ಹುಲಕೋಟಿ ರೈತ ಉತ್ಪಾದಕರ ಕಂಪನಿ ಇವುಗಳ ಆಶ್ರಯದಲ್ಲಿ ರುರ್ಬನ ಅಡಿಯಲ್ಲಿ ಹುಲಕೋಟೊಯಲ್ಲಿ ನಿರ್ಮಿಸಲಾದ ಗೊಡಂಬಿ ಸಂಸ್ಕರಣೆ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ತಾಲ್ಲೂಕಿನ ಗೋಡಂಬಿ ರುಚಿಯಲ್ಲಿ ತುಂಬಾ ಶ್ರೇಷ್ಠವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಗೊಡಂಬಿಗೆ ಮಾರುಕಟ್ಟೆ ವದಗಿಸುವದು ಬಹುದೊಡ್ಡ ಸವಾಲಾಗಿದೆ. ಇದಕ್ಕೆ ಈ ಸಂಸ್ಕರಣಾ ಘಟಕ ಸಹಕಾರಿ ಆಗಲಿ ಎಂದರು.
ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರೈತರ ಪರವಾಗಿ, ಅವರ ಬೆಳೆಗೆ ಉತ್ತಮ ಮೌಲ್ಯ ಕೊಡಿಸುವಲ್ಲಿ ಹಲವಾರು ಕಾರ್ಯ ಮಾಡಿದವರು ಹಿರಿಯರಾದ ಕೆ. ಎಚ್. ಪಾಟೀಲ ಎಂದು À ಹೇಳಿದರು.
ಹುಲಕೋಟಿಯಲ್ಲಿ ಗೋಡಂಬಿ ಘಟಕ ನಿರ್ಮಾಣಕ್ಕೆ ಕಾರಣೀಕರ್ತರಾದ ಎಲ್ಲರಿಗೂ ಧನ್ಯವಾದಗಳು. ಆಹಾರದಲ್ಲಿ ಸ್ವಾವಲಂಬಿಯಾದ ರಾಷ್ಟ ಸ್ವಾವಲಂಬಿ ಹಾಗೂ ಸ್ವಾಭಿಮಾನಿ ರಾಷ್ಟ್ರ ಆಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯನಿರತವಾಗಬೇಕು ಎಂದರು.
ರೈತ ಗಟ್ಟಿಯಾದರೇ ದೇಶ ಗಟ್ಟಿಗೊಳ್ಳುವದು. ಆರ್ಥಿಕ ಸಬಲತೆಗೆ ರೈತರು ಸಾಗಬೇಕು. ರಾಷ್ಟ್ರದ ಆರ್ಥಿಕ ಅಭಿವೃದ್ಧಿ ಕೃಷಿಯಿಂದ ಸಾಧ್ಯ. ಆದುದರಿಂದ ರೈತರ ಕೃಷಿ ಪರವಾದ ಯೋಜನೆಗಳು ಹೆಚ್ಚು ಹೆಚ್ಚು ಅನುಷ್ಠಾನ ಮಾಡುವ ಮೂಲಕ ಆರ್ಥಿಕಾಭಿವೃದ್ಧಿ ಆಗಲಿ ಎಂದು ಶುಭ ಕೋರಿದರು.
ಬಯಲು ಸೀಮೆಯಲ್ಲು ಗೊಡಂಬಿ ಬೆಳೆ ಬೆಳೆದು ಸಾಧನೆ ಮಾಡಿದ್ದಾರೆ ಈ ಭಾಗದ ರೈತರು. ಸುಮಾರು 1600 ಎಕರೆ ಪ್ರದೇಶದಲ್ಲಿ ಗೊಡಂಬಿ ಬೆಳೆದು ಬಯಲು ಸೀಮೆಯಲ್ಲು ಗೊಡಂಬಿ ಕೃಷಿ ಸಾಧ್ಯ ಎಂಬುದನ್ನು ಸಾಭೀತು ಪಡಿಸಿದ್ದಾರೆ.
ಶ್ಯಾಮ ಪ್ರಸಾದ ಮೂಖರ್ಜಿ ರುರ್ಬನ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇರದ ಉದ್ದೇಶ ಈ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯದಿಂದ ಇಲ್ಲಿ ಸಪಲವಾಗಿದೆ ಎಂದು ನುಡಿದರು.
ಮಾಜಿ ಶಾಸಕ ಡಿ ಆರ್ ಪಾಟೀಲ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನಾ, ಉಪಾಧ್ಯಕ್ಷ ಎ ವಿ ತಹಶಿಲ್ದಾರ ಸೇರಿದಂತೆ ಮತ್ತಿತರರು ಹಾಜರಿದ್ದರು.