ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ನೇಮಕ ಮಾಡಲು ಮನವಿ
ಕಲಬುರಗಿ:ಜು.6: ಭೋವಿ ಅಭಿವೃದ್ಧಿ ನಿಗಮ ಕಲಬುರಗಿ ಶಾಖೆಯನ್ನು ಪ್ರತ್ಯೇಕವಾಗಿ ನಿರ್ವಹಿಸುವ ಮತ್ತು ಪ್ರತ್ಯೇಕವಾಗಿ ಜಿಲ್ಲಾ ವ್ಯವಸ್ಥಾಪಕರನ್ನು ನೇಮಕ ಮಾಡಬೇಕೆಂದು ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆಯ ಅಧ್ಯಕ್ಷ ಜಿ.ಶಿವಶಂಕರ ಅವರು ಶ್ರೀಶ್ರೀಶ್ರೀ ಜಗದ್ಗುರು ಇಮಡಿ ಸಿದ್ದರಾಮೇಶ್ವರ ಸ್ವಾಮಿಜಿ ಅವರ ಸಮ್ಮುಖದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯಲ್ಲಿ 02 ರಿಂದ 03 ಲಕ್ಷ ಭೋವಿ ಸಮಾಜದ ಜನ ಸಂಖ್ಯೆ ಇದ್ದು ಸದರಿ ಜನರ ಆರ್ಥಿಕ ಸಬಲೀಕರಣದ ಕಾರಣ ಹಾಲಿ ಇರುವಂತ ನಿಗಮದ ಕಛೇರಿ ನಗರ ಪ್ರದೇಶದಿಂದ 06 ರಿಂದ 07 ಕಿ.ಮಿ ದೂರವಿದ್ದು ಸಾಮಾನ್ಯವಾಗಿ ಜನರಿಗೆ ನಿಗಮದ ಕಛೇರಿಗೆ ಹೋಗಿ ಬರಲು ತೊಂದರೆಯಾಗುತ್ತಿದು ಅದಲ್ಲದೇ ಇಗಿರುವ ಡಾ|| ಬಿ. ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಕಛೇರಿಯಲ್ಲಿ 4-5 ನಿಗಮದ ಕಛೇರಿ ಇರುವುದರಿಂದ ಸರಿಯಾಗಿ ನಮ್ಮ ಜನಾಂಗಕ್ಕೆ ಮಾಹಿತಿ ಸರಿಯಾಗಿ ದೋರಕದಿರುವ ಕಾರಣ ಜಿಲ್ಲಾಧಿಕಾರಿಗಳ ಕಛೇರಿಯ ಸುತ್ತ ಮುತ್ತ ಸದರಿ ನಿಗಮದ ಕಛೇರಿ ಪ್ರತ್ಯೇಕವಾಗಿ ನಿರ್ವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಮತ್ತು ಕಲಬುರಗಿ ಭೋವಿ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕವಾಗಿ ಜಿಲ್ಲಾ ವ್ಯವಸ್ಥಾಪಕರ ಹುದ್ದೆಯನ್ನು ಸೃಜಿಸಿ ನೇಮಕ ಮಾಡಲು ಸಂಬಂದಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭೋ.ಸ ಗೌರವ ಅಧ್ಯಕ್ಷ ರಾಜು ಗುತ್ತೇದಾರ, ಭೋ.ಸ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳಂಕೆ, ಕಾರ್ಯಧ್ಯಕ್ಷ ರಾಮಯ್ಯ ಪೂಜಾರಿ, ಭೋ.ಸಮಾಜದ ಯುವ ಮುಖಂಡ ರಾಘು ಲಶ್ಕರೆ, ಭೋ.ಸ.ನೌಕರರ ಸಂಘದ ಮಾಜಿ ಅಧ್ಯಕ್ಷ ಸಿದ್ದರಾಮ ದಂಡಗೋಲಕರ್, ಕ್ರಾ.ಬೆ.ವ.ಯಲ್ಲಣ್ಣ ಸೇನೆಯ ಕಾರ್ಯದರ್ಶಿ ಶ್ರೀಕೃಷ್ಣ ಕುಶಲಕರ, ಕ್ರಾ.ಬೆ.ವ.ಯಲ್ಲಣ್ಣ ಸೇನೆಯ ಜಿಲ್ಲಾಧ್ಯಕ್ಷ ನಾಗೇಶ ಕುಶಳಕರ್, ಭೋ.ಸಮಾಜ ಕಾಳಗಿ ಅಧ್ಯಕ್ಷ ಲಕ್ಷ್ಮಣ ಕೋಡ್ಲಿ, ನಾಗೇಶ ಗೋಬ್ಬೂರ, ಸುರೇಶ ಕುಶಾಳಕರ್ ಇದ್ದರು.