ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಬ್ಯಾನರ್, ಫ್ಲೆಕ್ಸ್ ನಿಷೇಧ ಇದ್ದರೂ ವಿಧಾನಸೌಧದ ಮುಂದೆ ಬೃಹತ್ ಫ್ಲೆಕ್ಸ್ ಹಾಕಿದ್ದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಯುವ ಕಾಂಗ್ರೆಸ್‌ ಅಧ್ಯಕ್ಷ ಅಧ್ಯಕ್ಷ ನಲಪಾಡ್‌ಗೆ (Mohammed Nalapad) ವಾರ್ನಿಂಗ್ ಕೊಟ್ಟ ಪ್ರಸಂಗ ನಡೆಯಿತು.ವಿಧಾನಸೌಧದಲ್ಲಿ ಇಂದು ನೂತನ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ (Basanagouda Badarli) ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಬಸನಗೌಡ ಬಾರ್ದಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ನಲಪಾಡ್ ರಿಂದ ಶುಭ ಕೋರುವ ಫ್ಲೆಕ್ಸ್ ಹಾಕಲಾಗಿತ್ತು.ಫ್ಲೆಕ್ಸ್‌ ಹಾಕಿದ್ದನ್ನು ಗಮನಿಸಿದ್ದ ಡಿಕೆಶಿವಕುಮಾರ್, ನಲಪಾಡ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದ ಕೂಡಲೇ ನಲಪಾಡ್ ನೋಡಿ ಯಾರೋ ಫ್ಲೆಕ್ಸ್ ಹಾಕಿಸಿದ್ದು? ಕೇಸ್ ಹಾಕಿಸ್ತೀನಿ ಅಂತ‌ ಎಚ್ಚರಿಕೆ ಕೊಟ್ಟರು.ಇದಕ್ಕೆ ನಾನು ಹಾಕಿಸಿಲ್ಲ ಎಂದ ನಲಪಾಡ್ ಮರು ಉತ್ತರ ಕೊಟ್ಟರು‌. ಕೂಡಲೇ ಡಿಕೆಶಿ ಹಿಂದೆ ಇದ್ದ ಕಾರ್ಯಕರ್ತನ ಕಡೆ ತೋರಿಸಿ ಇವರು ಹಾಕಿದ್ದ ಅಂದ ಕೂಡಲೇ ಕಾರ್ಯಕರ್ತನ ಮೇಲೂ ಕಿಡಿಕಾರಿದ ಡಿಕೆ ಶಿವಕುಮಾರ್ ಕೇಸ್ ಹಾಕಿಸಲಾ ಅಂತ ವಾರ್ನಿಂಗ್ ಕೊಟ್ಟರು.  ಇದನ್ನೂ ಓದಿ: ನಟ ದರ್ಶನ್‌ ಬಂಧನವಾಗಿ ಒಂದು ತಿಂಗಳು ಪೂರ್ಣ – ಅರೆಸ್ಟ್‌ ದಿನದಿಂದ ಇಲ್ಲಿವರೆಗೆ ಏನೇನಾಯ್ತು? ಇಲ್ಲಿದೆ ಟೈಮ್‌ಲೈನ್‌!ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಗದೀಶ ಶೆಟ್ಟರ್‌ ಆಯ್ಕೆಯಾಗಿದ್ದರು. ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜುಲೈ 12ಕ್ಕೆ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ನಾಮಪತ್ರ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದ್ದು, ರಾಯಚೂರು ಜಿಲ್ಲೆ ಸಿಂಧನೂರಿನ ಬಸನಗೌಡ ಬಾದರ್ಲಿ ಅವರೊಬ್ಬರೇ ಅಂತಿಮವಾಗಿ ಕಣದಲ್ಲಿ ಉಳಿದಿದ್ದರು. ಅವಿರೋಧವಾಗಿ ಆಯ್ಕೆಯಾಗಿದ್ದ ಬಸನಗೌಡ ಬಾದರ್ಲಿ ಅವರ ಪ್ರಮಾಣ ವಚನ ಕಾರ್ಯಕ್ರಮ ಇಂದು ನಡೆಯಿತು. Sign in to your account
Username or Email Address


Password

 Remember Me


