ಚಿತ್ರರಂಗದ ಪ್ರತಿಯೊಂದು ಕೆಲಸದಲ್ಲೂ ಪುನೀತ್ ಅವರನ್ನ ನೆನಪಿಸಿಕೊಳ್ತಾರೆ. ಪ್ರತಿ ಹೆಜ್ಜೆಯಲ್ಲೂ ಪವರ್‌ಸ್ಟಾರ್ ಪುನೀತ್ ಅವರನ್ನ ಸ್ಮರಿಸಿಸುತ್ತಾರೆ. ಇದೀಗ ಕನ್ನಡ ಒಟಿಟಿ ಟಾಕೀಸ್ ಲಾಂಚ್ ಕಾರ್ಯಕ್ರಮವೊಂದರಲ್ಲಿ ನಟ ಶಿವಣ್ಣ ಸಹೋದರ ಪುನೀತ್ ನೆನಪುಗಳನ್ನು ಮತ್ತೆ ಮೆಲುಕು ಹಾಕಿದ್ದಾರೆ.ನಟ ಪುನೀತ್ ರಾಜ್‌ಕುಮಾರ್ ಅವರು ಬಾಲನಟನಾಗಿ ಬಂದು, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದೈತ್ಯ ಪ್ರತಿಭೆ. ಡಾ. ರಾಜ್‌ಕುಮಾರ್ ಪುತ್ರ ಅನ್ನೋ ಹಣೆಪಟ್ಟಿಯನ್ನು ಮೀರಿ ತಮ್ಮ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡವರು. ಇನ್ನು ಕನ್ನಡ ಚಿತ್ರರಂಗ ಪುನೀತ್ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಒಟಿಟಿ ಟಾಕೀಸ್ ಲಾಂಚ್ ಮಾಡಿದ ಸಂದರ್ಭದಲ್ಲಿ ಅಪ್ಪು ಕುರಿತು ಶಿವಣ್ಣ ಮಾತಾನಾಡಿದ್ದಾರೆ. ಇದನ್ನೂ ಓದಿ: ಮಗಳ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಶಿವಣ್ಣ ಆಕ್ಟಿಂಗ್ಕನ್ನಡ ಒಟಿಟಿ ಟಾಕೀಸ್ ವಿಭಿನ್ನ ಪ್ರಯತ್ನಕ್ಕೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. ಈ ವೇಳೆ ಮಾತಾನಾಡಿದ ಶಿವಣ್ಣ, ನನ್ನ ತಮ್ಮ ಅಪ್ಪು ವಿಷಯ ಪ್ರಸ್ತಾಪ ಮಾಡದೇ ಚಿತ್ರರಂಗದ ವಿಷಯವನ್ನು ಮಾತನಾಡಲು ಸಾಧ್ಯವಿಲ್ಲ. ಅವನು ಚಿಕ್ಕ ವಯಸ್ಸಿನಲ್ಲೇ ಸೂಪರ್ ಸ್ಟಾರ್. ಅವನು ಇದ್ದಿದ್ದರೆ ಸಾಕಷ್ಟು ಕೆಲಸ ಮಾಡುತ್ತಿದ್ದ ಇನ್ನೂ ಸಾಕಷ್ಟು ಕೆಲಸ ಮಾಡುತ್ತಿದ್ದ ಎಂದು ಶಿವಣ್ಣ ಭಾವುಕರಾಗಿದ್ದಾರೆ. ಅಪ್ಪು ಅಗಲಿಕೆಯಿಂದ ಇಡೀ ಕುಟುಂಬಕ್ಕೆ ಆದ ನೋವನ್ನು ಹೇಳಲು ಅಸಾಧ್ಯ. ಆದರೂ ಆ ನೋವಿನ ಜತೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.Sign in to your account
Username or Email Address


Password

 Remember Me


