ಹಾವೇರಿ: ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಶಂಕರ್ ಕಿಚಡಿ ಹಾಗೂ ಬಿ.ಸುಭಾಷ್ ಇವರಿಗೆ ಹಾವೇರಿ ಜಿಲ್ಲೆ ಬ್ಯಾಡಗಿ ಬ್ಯಾಡ್ಮಿಂಟನ್ ಕ್ಲಬ್‍ನ ಸದಸ್ಯರು ಅಭಿನಂದಿಸಿದ್ದಾರೆ.ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಸ್ಫರ್ಧೆಗಳಲ್ಲಿ ಶಂಕರ ಕಿಚಡಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸನಲ್ಲಿಯೂ ಪುರುಷರ 400 ಮೀ ಮತ್ತು 800 ಮೀ ರನ್ನಿಂಗ್‍ನಲ್ಲಿ ಬಿ. ಸುಭಾಷ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‍ನಲ್ಲಿ ಶಂಕರ ಕಿಚಡಿ ಶಂಭು ಬಿದರಕಟ್ಟಿ ಅವರೊಂದಿಗೆ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿಜೇತ ಕ್ರೀಡಾಪಟುಗಳಿಗೆ ಬ್ಯಾಡಗಿ ಬ್ಯಾಡ್ಮಿಂಟನ್ ಕ್ಲಬ್‍ನ ಅಧ್ಯಕ್ಷ ನೇಮಿಚಂದ ಜೈನ್, ಸದಸ್ಯರಾದ ವನರಾಜ ಅಕ್ಕಿ ವಿಶಾಲ್ ಜಿಂಗಾಡೆ, ಮಹೇಶ ನಾಯಕ್, ಬಸವರಾಜು ನವಲೆ, ಐ.ಎಂ.ಮುಲ್ಲಾ, ಶಿವರಾಜ ಚೂರಿ, ಡಾ.ಶಿವಕುಮಾರ್, ಶಿವಾನಂದ ಮಲ್ಲನಗೌಡ್ರ, ಎಸ್.ಬಿ.ಖಾನಗೌಡ್ರ, ಉಜ್ಜನಗೌಡ ನಂದಿಗೌಡ್ರ, ಸತೀಶ್ ಚೂರಿ, ಪ್ರಕಾಶ್ ತಾರೀಕೊಪ್ಪ, ಚಾಲ್ರ್ಸ ಚಾಕೋ, ಶಾಂತರಾಜ್ ಕರ್ಕುಂದಿ, ವಿರೇಶ್ ಪೂಜಾರ, ಮನೋಹರ, ಶಿವಪ್ರಸಾದ್ ಇನ್ನಿತರರು ಅಭಿನಂದಿಸಿದ್ದಾರೆ.Sign in to your account
Username or Email Address


Password

 Remember Me


