ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲದ (Ankola) ಶಿರೂರಿನಲ್ಲಿ (Shirur) ಇಂದು (ಸೋಮವಾರ) ಗಂಗಾವಳಿ ನದಿಯಲ್ಲಿ (Gangavali River) ನಡೆದ ಶವ ಶೋಧ ಕಾರ್ಯಾಚರಣೆಯಲ್ಲಿ ಮನುಷ್ಯನ ಎದೆ ಹಾಗೂ ಕೈ ಭಾಗದ ಮೂಳೆಗಳು ದೊರೆತಿವೆ.ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಆಲದ ಮರ ಸೇರಿದಂತೆ ಹಲವು ವಸ್ತುಗಳನ್ನು ಹೊರತೆಗೆಯಲಾಗಿತ್ತು. ಇಂದು ಶವದ ಪಳೆಯುಳಿಕೆಗಳು ದೊರೆತಿದ್ದು, ಡಿಎನ್‌ಎ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: MUDA Scam Case: ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ EDಮೂರನೇ ಹಂತದ ಶವ ಶೋಧದಲ್ಲಿ ಅರ್ಜುನ್ ಶವ ಹೊರ ತೆಗೆಯಲಾಗಿದೆ. ಶಿರೂರಿನ ಜಗನ್ನಾಥ್, ಲೋಕೇಶ್ ಅವರ ಶವ ಇನ್ನಷ್ಟೇ ಸಿಗಬೇಕಿದೆ. ಅಂಕೋಲ ಪೊಲೀಸರು ಸಿಕ್ಕ ಅಸ್ತಿಪಂಜರದ ಮೂಳೆಗಳನ್ನು ಡಿಎನ್‌ಎ ಪರೀಕ್ಷೆಗೆ ರವಾನೆ ಮಾಡಲಿದ್ದಾರೆ. ಸದ್ಯ ಈ ಮೂಳೆಗಳು ಯಾರದ್ದು ಎಂಬ ಬಗ್ಗೆ ಮಾಹಿತಿ ಡಿಎನ್‌ಎ ಪರೀಕ್ಷೆ ನಂತರ ತಿಳಿದು ಬರಲಿದೆ. ಇದನ್ನೂ ಓದಿ: ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ – ತಂದೆ, ಮೂವರು ಮಕ್ಕಳು ಸಾವುSign in to your account
Username or Email Address


Password

 Remember Me


