ಧಾರವಾಡ: ದೇವಸ್ಥಾನಗಳು ಶಾಂತಿಯ ಪ್ರತೀಕ. ಆದರೆ ದೇವಸ್ಥಾನದ ಮೇಲೆಯೇ ದಾಳಿ ಮಾಡಿದ್ದು ಖಂಡನೀಯ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದರು.ಹುಬ್ಬಳ್ಳಿ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ(ಶನಿವಾರ) ನಡೆದ ಹುಬ್ಬಳ್ಳಿ ಗಲಾಟೆಯನ್ನು ನಾನು ಖಂಡಿಸುತ್ತೇನೆ. ನಿಮ್ಮ ಮೆಕ್ಕಾ, ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ್ದಕ್ಕೆ ಇಷ್ಟು ಆಕ್ರೋಶ ಸರೀನಾ? ಎಂದು ಪ್ರಶ್ನೆ ಕೇಳಿದರು. ನಿಮ್ಮಗೆ ಕಾನೂನಿದೆ, ಠಾಣೆಯಿದೆ, ನ್ಯಾಯಾಲಯವಿದೆ ನೀವು ಅಲ್ಲಿ ನ್ಯಾಯ ಕೇಳಬಹುದು ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯನ್ನು ಕೆಜಿ ಹಳ್ಳಿ, ಡಿಜೆಹಳ್ಳಿ ಘಟನೆಗೆ ಹೋಲಿಸಿದ ಗೃಹಸಚಿವಇಸ್ಲಾಂ ಎಂದರೆ ಶಾಂತಿ ಸಂದೇಶ ಸಾರುತ್ತದೆ. ಇದು ನಿಮ್ಮ ಶಾಂತಿ ಸಂದೇಶನಾ? ಇದು ಹೇಯ ಹಾಗೂ ಕ್ರೌರ್ಯ ಘಟನೆ. ಇದನ್ನ ಖಂಡನೆ ಮಾಡುತ್ತೇನೆ. ಇದೊಂದು ಪೂರ್ವಯೋಜಿತ ಕೃತ್ಯ. ಅಲ್ಲಿ ಮೂರು ಜನ ಎಂಐಎಂ ಪಾಲಿಕೆ ಸದಸ್ಯ ಇದ್ದಾರೆ. ಪಿಎಫ್‍ಐ ಸದ್ಯಸರೇ ಇದಕ್ಕೆ ಕಾರಣ ಎಂದು ಆರೋಪಿಸಿದರು.ದೇವಸ್ಥಾನ ಮೇಲೆ ಏಕೆ ದಾಳಿ ಮಾಡಿದ್ದು, ದೇವಸ್ಥಾನ ಶಾಂತಿಯ ಪ್ರತೀಕವಾಗಿದೆ. ಮುಸ್ಲಿಂ ಮುಖಂಡರು ಇದಕ್ಕೆ ಉತ್ತರ ನೀಡಬೇಕು ಎಂದು ಅಗ್ರಹ ಮಾಡಿದರು. ಅಲ್ಲದೆ ದೇವಸ್ಥಾನದ ಮೇಲೆ ದಾಳಿ ಮಾಡಿದ್ದು, ಗಜನಿ ಸಂಸ್ಕೃತಿ, ಔರಂಗಜೇಬನ ಹಾಗೂ ಟಿಪ್ಪು ಸಂಸ್ಕೃತಿ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಪೊಲೀಸ್ ವಾಹನಗಳೇ ಟಾರ್ಗೆಟ್ – ದಿಡ್ಡಿ ಹನುಮಂತ ದೇಗುಲಕ್ಕೂ ಕಲ್ಲೇಟುಪೊಲೀಸರ ಮೇಲೆ ಹಲ್ಲೆ ಸರಿಯಲ್ಲ. ಗಡಿಯಲ್ಲಿ ಸೈನಿಕರು ಮಾಡುವ ಕೆಲಸ ಆಂತರಿಕವಾಗಿ ಪೊಲೀಸರು ಮಾಡ್ತಾರೆ. ಈ ಘಟನೆ ನೋಡಿ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ನೆನಪಾಗುತ್ತಿದೆ. ಸರ್ಕಾರ ಇವರನ್ನ ಹದ್ದು ಬಸ್ತಿನಲ್ಲಿ ಇಡಬೇಕು ಎಂದು ಒತ್ತಾಯಿಸಿದರು.Sign in to your account
Username or Email Address


Password

 Remember Me


