ಹಾಸನ: ನಾನು ಬದುಕಿರುವವರೆ ಬಿಜೆಪಿಯಲ್ಲೇ ಇರುತ್ತೇನೆ. ನಾನು ಮಾಡಿರುವ ಕೆಲಸಕ್ಕೆ ನಿಮಗೆ ಪ್ರೀತಿ ಬಂದರೆ ಓಟ್ ಹಾಕಿ ಕೂಲಿ ಕೊಡಿ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.ಹಾಸನದ ಟಿಪ್ಪು ನಗರದ ಜನರಿಗೆ ಮನೆಗಳ ಹಕ್ಕು ಪತ್ರ ವಿತರಣೆ ಸಂಬಂಧ ಚರ್ಚೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅನೇಕರಲ್ಲಿ ಶಾಸಕ ಪ್ರೀತಂಗೌಡ ಕಾಂಗ್ರೆಸ್‍ಗೆ ಸೇರುತ್ತಾರೆ ಎನ್ನುವ ಗೊಂದಲ ಇದೆ. ಅದಕ್ಕಾಗಿಯೇ ಮುಸಲ್ಮಾನರಿಗೆ ಬಹಳ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಎಲ್ಲರನ್ನು ಸರಿಮಾಡಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಇದೆ. ಆದರೆ ಯಾವುದೇ ಕಾರಣಕ್ಕೂ ಆ ರೀತಿಯ ಭಾವನೆ ಹೊಂದಿಲ್ಲ. ನಾನು ಇರುವುದನ್ನು ನೇರವಾಗಿ ಹೇಳುತ್ತೇನೆ. ನನಗೆ ಸುಳ್ಳು ಹೇಳಿ ಅಭ್ಯಾಸ ಇಲ್ಲ. ನಾನು ಬದುಕಿರುವವರೆಗೂ ಬಿಜೆಪಿಯಲ್ಲಿಯೇ ಇರುತ್ತೇನೆ. ಅದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿನಾನು ಬಂದಿರುವುದು ಓಟ್ ಕೇಳಲು ಅಲ್ಲ, ರಾಜಕಾರಣದ ಬಗ್ಗೆ ಮಾತನಾಡಲು ಅಲ್ಲ. ನಾನು ಮಾಡಿರುವ ಕೆಲಸಕ್ಕೆ ನಿಮಗೆ ಪ್ರೀತಿ ಬಂದರೆ ಓಟ್ ಹಾಕಿ ಕೂಲಿ ಕೊಡಿ. ಇಲ್ಲ ಶಾಸಕರೇ ನಿಮ್ಮ ಮೇಲೆ ಪ್ರೀತಿ ಇಲ್ಲ. ಓಟ್ ಹಾಕಲ್ಲ ಅಂದರೆ ನನಗೆ ಏನೂ ಬೇಜಾರಿಲ್ಲ. ನಾನು ವಿನಯಪೂರ್ವಕವಾಗಿ ಯಾರು ಬಡವರಿದ್ದಾರೆ, ಅವರಿಗೆ ಸಹಾಯ ಮಾಡಲು ಬಂದಿದ್ದೀನಿ. ನನ್ನ ಎದುರು ದಳದಿಂದ ಕಾಂಗ್ರೆಸ್‍ನಿಂದ ಯಾರು ನಿಲ್ಲುತ್ತಾರೆ ನೋಡಿ. ಎಲ್ಲರನ್ನು ತುಲನೆ ಮಾಡಿ ನಾನು ನಿಮಗೆ ಸಹಾಯ ಮಾಡಿದ್ದರೆ, ನನಗೆ ಮತ ಕೊಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಹರಿ ಸಂಸ್ಥೆ ನಿರ್ಮಿಸಿದ ಆಲ್ಬಂಗೆ 2022ರ ಗ್ರ್ಯಾಮಿ ಪ್ರಶಸ್ತಿ
preetham gowda, Vote, BJP, HassanSign in to your account
Username or Email Address


Password

 Remember Me


