ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರಾ ಮಹೊತ್ಸವದ ನಾಲ್ಕನೇ ದಿನವಾದ ಇಂದು ಭಕ್ತ ಸಾಗರವೇ ಹರಿದುಬಂದಿದೆ.ಇಂದು ರಾಜ್ಯದ ಮೂಲೆ ಮೂಲೆಯಿಂದಲೂ ಜನರು ಶಿರಸಿ ಮಾರಿಕಾಂಬಾ ದೇವಿ ಗದ್ದುಗೆಗೆ ಪೂಜೆ, ಹರಕೆ ಸಲ್ಲಿಸಲು ಆಗಮಿಸಿದ್ದಾರೆ. ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಸರ್ವಾಲಂಕಾರ ಭೂಷಿತೆ ಮಾರಿಕಾಂಬೆಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಸಾವಿರಾರು ಭಕ್ತರು ದರ್ಶನ ಪಡೆದರು.  ಇದನ್ನೂ ಓದಿ:  ಮಾರ್ಚ್‌ 15 ರಿಂದ 23 ರ ವರೆಗೆ ರಾಜ್ಯದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಹರಕೆ ಹೊತ್ತ ಭಕ್ತರು ಪ್ರತಿವರ್ಷದಂತೆ ಈ ಬಾರಿಯೂ ಮರ್ಕಿದುರ್ಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೇವಿನ ಉಡುಗೆ ತೊಟ್ಟು ಜಾತ್ರಾಗದ್ದುಗೆಯ ಸುತ್ತಾ ಪ್ರದಕ್ಷಿಣೆ ತಿರುಗಿ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸಾವಿರಾರು ಭಕ್ತರು ಬೇವಿನ ಉಡುಗೆ ತೊಡುವ ಸಂಪ್ರದಾಯ ನೂರಾರು ವರ್ಷದಿಂದ ಇಲ್ಲಿ ಚಾಲ್ತಿಯಲ್ಲಿದೆ. ಸದ್ಯ ದೇವಿಯು ಇದೀಗ ಭಕ್ತರಿಗೆ ದರ್ಶನ ನೀಡಲು ಗದ್ದುಗೆಯಲ್ಲಿ ಕುಳಿತಿದ್ದು ಮಾರ್ಚ್ 23 ರಂದು ಜಾತ್ರೆ ಮುಕ್ತಾಯಗೊಳ್ಳಲಿದೆ. ಇದನ್ನೂ ಓದಿ: ಮಿಂಚುಳ್ಳಿ ಲೋಕದಲ್ಲೊಂದು ಪಯಣ






 Advertisement 




Sign in to your account
Username or Email Address


Password

 Remember Me


