ಬೀದರ್: ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಮತ್ತಿಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಗಡಿ ಜಿಲ್ಲೆ ಬೀದರ್‌ಗೆ ಬಂದಿದ್ದು ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಇಷ್ಟು ದಿನ ಆತಂಕದಲ್ಲಿದ್ದ ಪೋಷಕರು ಮತ್ತು ಕುಟುಂಬಸ್ಥರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಪಟ್ಟರು.ಶಶಾಂಕ್ ತಾಯ್ನಾಡಿಗೆ ಬರಲೇಬೇಕು ಎಂದು 40 ಕಿಮೀ ನಡೆದ ಕಥೆ ಮಾತ್ರ ರೋಚಕವಾಗಿದೆ. ಖಾರ್ಕಿವ್‍ನಲ್ಲಿ ಇದ್ದರೆ ಬಾರಿ ರಿಸ್ಕ್ ಆಗುತ್ತಿತ್ತು. ಹೀಗಾಗೀ ಅನಿವಾರ್ಯವಾಗಿ 40 ಕಿಮೀ ಯುದ್ಧಭೂಮಿಯಲ್ಲಿ ನಡೆದುಕೊಂಡು ಬಂದೆವು. 7ರಿಂದ 8ದಿನ ಬಂಕರ್‌ನಲ್ಲಿ ಇದ್ದೇವು. ಅಲ್ಲಿ ಊಟದ ಸಮಸ್ಯೆಯಾಗಿತ್ತು.ನಮ್ಮ ರಾಷ್ಟ್ರಧ್ವಜದಿಂದಾನೆ ನಾವು ಇಂದು ಬದುಕಿ ತಾಯ್ನಾಡಿಗೆ ಬಂದಿದ್ದೇವೆ. ರಾಷ್ಟ್ರಧ್ವಜವೇ ನಮ್ಮ ಹೆಮ್ಮೆ, ರಾಷ್ಟ್ರಧ್ವಜವೇ ನಮ್ಮ ಪವರ್ ಎಂದು ರಾಷ್ಟ್ರಧ್ವಜದ ಬಗ್ಗೆ ಗೌರವ ವ್ಯಕ್ತಪಡಿಸಿದರು. ಅಲ್ಲಿ ಕೆಟ್ಟ ಪರಿಸ್ಥಿತಿ ಇತ್ತು. ಈಗಾ ಮನೆಗೆ ಮಗ ಬಂದಿದ್ದಾನೆ ಬಹಳ ಖುಷಿಯಾಗುತ್ತಿದೆ ಎಂದು ಪೋಷಕರು ಹರ್ಷ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ: ಖಾರ್ಕೀವ್‍ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿSign in to your account
Username or Email Address


Password

 Remember Me


