ಬೆಂಗಳೂರು: ಹಿಜಬ್ ವಿವಾದ ಸಂಬಂಧ ಸತತ ಆರನೇ ದಿನ ಹೈಕೋರ್ಟ್‍ನ ಪೂರ್ಣಪೀಠದಲ್ಲಿ ವಿಚಾರಣೆ ನಡೆಯಿತು. ಇಂದು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನೆರಲ್ ಪ್ರಭುಲಿಂಗ ನಾವಡಗಿ, ಹಿಜಬ್‍ಧಾರಣೆ ಮುಸ್ಲಿಮ್ ಸಮುದಾಯದಲ್ಲಿ ಕಡ್ಡಾಯ ಆಚರಣೆ ಅಲ್ಲ ಅಂದ್ರು.ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ನಿರ್ಬಂಧಿಸುವ ಮೂಲಕ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿಲ್ಲ ಎಂದರು. ಈ ಮೂಲಕ ಫೆಬ್ರವರಿ 5ರಂದು ಸರ್ಕಾರ ಹೊರಡಿಸಿದ್ದ ಕಡ್ಡಾಯ ಸಮವಸ್ತ್ರ ಆದೇಶವನ್ನು ಸಮರ್ಥಿಸಿಕೊಂಡರು. ಸಮಾನತೆ, ಸಮಗ್ರತೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ವಸ್ತ್ರಗಳನ್ನು ಸರ್ಕಾರ ಬ್ಯಾನ್ ಮಾಡಿರುವುದು ಸರಿಯಾಗಿಯೇ ಇದೆ ಎಂದು ವಾದ ಮಂಡಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್ ರಾಜ್ಯದ ಮಕ್ಕಳಿಗೆ ದ್ರೋಹ ಮಾಡ್ತಿದೆ, ಇದು ರಾಜದ್ರೋಹ: ಬೊಮ್ಮಾಯಿ ಕಿಡಿಕಾಲೇಜಿನ ಅಭಿವೃದ್ಧಿ ಸಮಿತಿ ವಿಚಾರವಾಗಿಯೂ ತೀವ್ರ ವಾದ ನಡೀತು. ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಧಿಕಾರ ಪ್ರಶ್ನಿಸಿದ್ದ ರವಿವರ್ಮ ಕುಮಾರ್ ಪ್ರಶ್ನೆಗೆ ಅಡ್ವೋಕೇಟ್ ಜನರಲ್ ನಾವಡಗಿ ಉತ್ತರ ನೀಡಿದ್ರು. ಕಾಲೇಜು ಅಭಿವೃದ್ಧಿ ಸಮಿತಿಯನ್ನು ಸರ್ಕಾರದ ಆದೇಶದಂತೆ ರಚಿಸಲಾಗಿದೆ. ಶಿಕ್ಷಣ ಇಲಾಖೆ ಕಾಯ್ದೆ ಪ್ರಕಾರ ಸಮವಸ್ತ್ರ ಕಡ್ಡಾಯ ಮಾಡಲು ಸಿಡಿಸಿಗೆ ಅಧಿಕಾರವಿದೆ. ಆದರೆ ಹಿಜಬ್‍ಗೆ ಅವಕಾಶ ನೀಡುವುದು ಬಿಡುವುದು ಕಾಲೇಜುಗಳ ಸಿಡಿಸಿಗಳಿಗೆ ಬಿಟ್ಟ ವಿಚಾರ. ಸಿಡಿಸಿ ಹೇಳಿದ ಯೂನಿಫಾರಂ ಕಡ್ಡಾಯವಾಗಿ ಧರಿಸಿ ಎಂಬ ಅಂಶವಷ್ಟೇ ಸರ್ಕಾರದ ಆದೇಶದಲ್ಲಿದೆ. ಸರ್ಕಾರ ಧಾರ್ಮಿಕ ವಿಚಾರಗಳಲ್ಲಿ ಮಧ್ಯಪ್ರವೇಶ ಕೂಡ ಮಾಡಲ್ಲ ಎಂದು ವಾದ ಮಂಡಿಸಿದ್ರು.ಕೊನೆಗೆ ಸಿಜೆ ಅವಸ್ಥಿ ನೇತೃತ್ವದ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಸೋಮವಾರ ಕೆಲ ಮಧ್ಯಂತರ ಅರ್ಜಿಗಳನ್ನು ಕೂಡ ಕೋರ್ಟ್ ವಿಚಾರಣೆಗೆ ಪರಿಗಣಿಸುವ ಸಂಭವ ಇದೆ. ಇನ್ನು ಕೋರ್ಟ್ ವಿಚಾರಣೆಯ ನೇರ ಪ್ರಸಾರ ನಿಲ್ಲಿಸುವಂತೆ ಮಾಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕ್ತಾರೆ, ಈಗ ತೆಗೆಯೋಕಾಗಲ್ವಾ..?- ವಿದ್ಯಾರ್ಥಿಗಳುSign in to your account
Username or Email Address


Password

 Remember Me


