ಬಳ್ಳಾರಿ: ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಹಿನ್ನೆಲೆ ಸಂಡೂರು (Sanduru) ಕ್ಷೇತ್ರದ ಶಾಸಕ ಸ್ಥಾನಕ್ಕೆ ಇ.ತುಕಾರಾಂ (Tukaram) ರಾಜೀನಾಮೆ ನೀಡಿದ್ದಾರೆ.ಸಂಸತ್ ಅಧಿವೇಶನದಲ್ಲಿ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಬೇಕಾದ ಹಿನ್ನೆಲೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಂಸದ ತುಕಾರಾಂ ವಿಧಾನಸಭೆಯ ಸ್ಪೀಕರ್ ಲಭ್ಯವಿಲ್ಲದ ಕಾರಣ, ಅವರ ಅನುಮತಿ‌ ಪಡೆದು ಕಾರ್ಯದರ್ಶಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ: ತುಕಾರಂ ʼಕೈʼ ಹಿಡಿದ ಬಳ್ಳಾರಿ ಜನ – ಶ್ರೀರಾಮುಲುಗೆ ಸೋಲುಸಂಡೂರು ಕ್ಷೇತ್ರದಿಂದ 2008, 2013, 2018 ಮತ್ತು 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು. ಎಂ.ಕಾಂ ಪದವೀಧರರಾದ ತುಕಾರಾಂ ಅವರು ವಿಎಸ್ ಲಾಡ್ ಕಂಪನಿಯಲ್ಲಿ ನೌಕರರಾಗಿದ್ದರು.ಕಂಪನಿಯಲ್ಲಿನ ನಿಷ್ಠೆ ಹಿನ್ನೆಲೆ ಸಂತೋಷ ಲಾಡ್ 2008 ರಲ್ಲಿ ಮೊದಲ ಬಾರಿಗೆ ಟಿಕೆಟ್ ಕೊಡಿಸಿ ಸಂಡೂರು ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಅಂದಿನಿಂದ ಈವರೆಗೂ ನಡೆದ ಎಲ್ಲಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತುಕಾರಾಂ ಸೋಲಿಲ್ಲದ ಸರದಾರರಾಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ದರ್ಶನ್ ಗ್ಯಾಂಗ್‍ನ ಮತ್ತಿಬ್ಬರು ಅರೆಸ್ಟ್Sign in to your account
Username or Email Address


Password

 Remember Me


