ಕಲಬುರಗಿ: ಮದುವೆ ಆಗಲು ಒಪ್ಪದ ಪ್ರಿಯಕರನೊಬ್ಬನಿಗೆ ಪ್ರೇಯಸಿಯೊಬ್ಬಳು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ ಎದುರೇ ಗೂಸಾ ಕೊಟ್ಟಿದ್ದಾಳೆ.ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ಇರ್ಫಾನ್ ಮತ್ತು ಬೆಂಗಳೂರಿನ ರಹೀನಾ ಬಾನು ಬೆಂಗಳೂರಿನ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗಿದ್ದರು. ಇಬ್ಬರೂ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದರು. ಆದರೆ ಯುವತಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿದ್ದ ಇರ್ಫಾನ್ ಪ್ರೇಯಸಿಯನ್ನು ಬಿಟ್ಟು ಊರಿಗೆ ವಾಪಸ್ ಬಂದಿದ್ದ. ಹೀಗಾಗಿ ಆತನನ್ನು ಹುಡುಕಿಕೊಂಡು ಬಂದ ಪ್ರೇಯಸಿ ಎಲ್ಲರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ. ಆದರೆ ಅದಕ್ಕೆ ಇರ್ಫಾನ್ ಒಪ್ಪದೇ ಇದ್ದಾಗ ಆತನಿಗೆ ಎಲ್ಲರ ಎದುರೇ ಒದೆ ಕೊಟ್ಟಿದ್ದಾಳೆ. ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್ ನೋಟ್‍ನಲ್ಲಿ ಅಪ್ಪನ ವಿರುದ್ಧವೇ ಮಕ್ಕಳ ಆರೋಪಬೆಂಗಳೂರಿನಿಂದ ಕಲಬುರಗಿಗೆ ಹೋಗಿದ್ದ ರಹೀನಾ ಬಾನು, ಇರ್ಫಾನ್ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾಳೆ. ಬಳಿಕ ಮಾತುಕತೆಯಿಂದ ಬಗೆ ಹರಿಯದೇ ಇದ್ದಾಗ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ತನಗಾದ ಮೋಸದ ಬಗ್ಗೆ ತಿಳಿಸಿದ್ದಾಳೆ. ಅಲ್ಲಿ ಪೊಲೀಸರು ಜೊತೆಗಿದ್ದಂತೆ ಇರ್ಫಾನ್‍ಗೆ ಹೊಡೆದು ಬುದ್ಧಿಕಲಿಸಲು ಮುಂದಾಗಿದ್ದಾಳೆ.  ಇದನ್ನೂ ಓದಿ: ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್






 Advertisement 




Sign in to your account
Username or Email Address


Password

 Remember Me


