ಬೆಂಗಳೂರು: ಕೂಡು ಒಕ್ಕಲಿಗ ಸಮುದಾಯ ಲಿಂಗಾಯತ ಸಮುದಾಯದ ಒಂದು ಉಪ ಪಂಗಡವಾಗಿದೆ. ನಾನು ಕೂಡ ಒಕ್ಕಲಿಗ ಪಂಗಡದಲ್ಲಿ ಜನಿಸಿದವನು ಎಂದು ಮಾಜಿ ಮಂತ್ರಿ ಎಂ.ಬಿ.ಪಾಟೀಲ್ ಹೇಳಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಕೂಡು ಒಕ್ಕಲಿಗ ಸಮುದಾಯದವರು ಕೂಡು ಒಕ್ಕಲಿಗರು ಶುದ್ಧ ಶಾಕಹಾರಿಗಳು. ನಾವು ಒಕ್ಕಲುತನ ಮಾಡುತ್ತೇವೆ. ಒಕ್ಕಲಿಗರು ಒಕ್ಕಲುತನ ಮಾಡ್ತಾರೆ. ಅದಷ್ಟೆ ನಮಗೆ, ಅವರಿಗು ಇರುವ ಸಾಮ್ಯತೆ. ಒಕ್ಕಲಿಗರು ಅಂತಾರೆ ನಮ್ಮನ್ನ, ಒಕ್ಕಲಿಗ ಅನ್ನೋ ಪದ ಹೋಲಿಕೆ ಇದೆ. ಆದರೆ ಕೂಡು ಒಕ್ಕಲಿಗರೂ ಯಾವ ಕಾರಣಕ್ಕೂ ಒಕ್ಕಲಿಗರಲ್ಲ. ಅವರು ಲಿಂಗಾಯತ ಉಪ ಪಂಗಡದವರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‍ನಲ್ಲಿ ಶುರುವಾಯ್ತಾ ಜಾತಿ ರಾಜಕಾರಣದ ಮತ್ತೊಂದು ಸಮರ..?ಈ ಹಿಂದೆ ಎನ್. ಶಂಕ್ರಪ್ಪ ಆಯೋಗದ ವರದಿ ಸಂದರ್ಭದಲ್ಲಿ ಕೆಲವು ತಪ್ಪುಗಳಾಗಿವೆ. ಒಕ್ಕಲಿಗರು ಅಂತ ಕೆಲವು ಕಡೆ ದಾಖಲಾಗಿದೆ. ಆದರೆ ಅದಕ್ಕೆ ಫಿಡವಿಟ್ ಸಬ್ ಮಿಟ್ ಮಾಡಿ ಸರಿಪಡಿಸುವಂತೆ ಮನವಿ ಮಾಡಿದ್ದೇವೆ. ಉಪ ಪಂಗಡಗಳನ್ನು ಒಗ್ಗೂಡಿಸಿ ಪ್ರತ್ಯೇಕ ಧರ್ಮದ ಹೋರಾಟ ಮಾಡಿದ್ದೆವು, ಆದರೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಲಿಲ್ಲ. ಆದರೆ ನಮ್ಮ ಸಮುದಾಯದ ಬಡ ಮಕ್ಕಳಿಗೆ ಮೀಸಲಾತಿ ಬೇಕು. ಕೂಡು ಒಕ್ಕಲಿಗ ಸಮುದಾಯ ಅಲ್ಪಸಂಖ್ಯೆಯ ಸಮುದಾಯ ಕೃಷಿ ನಂಬಿ ಜೀವನ ಮಾಡುವ ಸಮುದಾಯ. ಉತ್ತರ ಕರ್ನಾಟಕದಲ್ಲಿ ನಮ್ಮ ಸಮುದಾಯವಿದೆ. ಎಲ್ಲ ಸಮುದಾಯಕ್ಕೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಬೇಕು. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಕೂಡು ಒಕ್ಕಲಿಗ ಸಮುದಾಯ ಹಿಂದುಳಿದಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನಕೂಡು ಒಕ್ಕಲಿಗ ಸಮುದಾಯದ ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ. ನಾವು ಲಿಂಗಾಯತ ಕೂಡು ಒಕ್ಕಲಿಗರು, ನಾವು ಲಿಂಗಾಯತ ಉಪ ಪಂಗಡ. ಆದರೆ ಒಕ್ಕಲಿಗರು, ಕೂಡು ಒಕ್ಕಲಿಗರು ಕೃಷಿ ಆಧಾರಿತ ಸಮುದಾಯವಾಗಿದೆ. ಆದರೆ ನಾವು ಹಾಗೂ ಒಕ್ಕಲಿಗರು ಬೇರೆ ಬೇರೆಯಾಗಿದ್ದೇವೆ. ದಕ್ಷಿಣ ಕರ್ನಾಟಕದ ಒಕ್ಕಲಿಗರು ಬೇರೆ. ನಾವು ಲಿಂಗಾಯತ ಒಕ್ಕಲಿಗರು ಬೇರೆ. ಶಿರಸಂಗಿ ಲಿಂಗರಾಜರಿಂದ ನಮ್ಮ ಸಮುದಾಯಕ್ಕೆ ಇತಿಹಾಸ ಇದೆ.ಅಖಿಲ ಭಾರತ ವೀರಶೈವ ಮಹಸಭಾದ ಮೊದಲ ಅಧ್ಯಕ್ಷರು. ನಾವು ಈ ಭಾಗದ ಒಕ್ಕಲಿಗರನ್ನು ಗೌರವಿಸುತ್ತೇವೆ. ನಾವು ಒಕ್ಕಲಿಗರ ಭಾಗವಲ್ಲ. ನಾವು ಲಿಂಗಾಯತರ ಒಂದು ಭಾಗ. ಲಿಂಗಾಯತರಲ್ಲಿ ಕೂಡು ಒಕ್ಕಲಿಗ ಕೂಡ ಒಂದು ಪಂಗಡ. ಎಲ್ಲ ಸಮುದಾಯಗಳು ಮೀಸಲಾತಿ ಬಯಸಿದಂತೆ ಇವರು ಬಯಸಿದ್ದಾರೆ. ಅದೇ ಬೇಡಿಕೆ ಬಹಳ ವರ್ಷಗಳಿಂದ ಮುಂದಿಟ್ಟಿದ್ದಾರೆ. ನನ್ನ ಬಳಿಯೂ ಇದೇ ಬೇಡಿಕೆ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ನುಡಿಯ ಹಂಗಿನ್ನೂ ನಿಮಗೆ ಹಿಂಗದು,
ನಡೆಯನೆಂತು ಪರರಿಗೆ ಹೇಳುವಿರಿ ?
ಒಡಲ ಹಂಗಿನ ಸುಳುಹು ಬಿಡದು ;
ಎನ್ನೊಡನೆ ಮತ್ತೇತರ ಅನುಭವವಣ್ಣಾ ?
ತಾನಾದಲ್ಲದೆ ಇದಿರಿಂಗೆ ಹೇಳಬಹುದೆ?
ಅರಿವ ತೋರಬಲ್ಲಡೆ ತನ್ನನರುಹದೆ ಅರಿವನು
ಕಾಣಾ ಎನ್ನ ಅಜಗಣ್ಣ ತಂದೆ.
– ಮುಕ್ತಾಯಕ್ಕ.— M B Patil (@MBPatil) September 12, 2021ಒಕ್ಕಲಿಗರ ಬಗ್ಗೆ ಗೌರವ ಇದೆ, ಅವರ ಸ್ವಾಮೀಜಿಯವರ ಬಗ್ಗೆ ಗೌರವ ಇದೆ, ಆದರೆ ನಾವು ಲಿಂಗಾಯತರು. ಬೀದರ್, ಕಲಬುರಗಿ ಭಾಗದವರು ಇಂದು ಬಂದು ಮೀಸಲಾತಿ ಬೇಡಿಕೆ ಮುಂದಿಟ್ಟಿದ್ದಾರೆ. ನಮಗೂ 3ಂ ಅಥವಾ 2ಂ ಮೀಸಲಾತಿ ಬೇಕು ಅಂತ ಕೇಳುದ್ದಾರೆ. ಶಂಕ್ರಪ್ಪ ಕಮಿಟಿಯಲ್ಲಿ ಒಂದು ತಪ್ಪಾಗಿತ್ತು, ಅದಕ್ಕೆ ಅಫಿಡವಿಟ್ ಹಾಕಿ ಸರಿ ಮಾಡಲು ಮನವಿ ಕೊಟ್ಟಿದ್ದೇವೆ. ಒಬ್ಬ ವ್ಯಕ್ತಿಯಿಂದ ತಪ್ಪಾದರೆ ಇಡೀ ಸಮಾಜಕ್ಕೆ ದೂರಬಾರದು.ನಿಮಗೂ 3ಂ ಮೀಸಲಾತಿ ಸಿಗುತ್ತೆ ಅಂತ ಪುಸಲಾಯಿಸೋ ಕೆಲಸ ಮಾಡಿದ್ರು.ಆದರೆ ಎಲ್ಲಾ ದಾಖಲೆಗಳಲ್ಲಿ ಹಿಂದೂ ಲಿಂಗಾಯತ ಕೂಡು ಒಕ್ಕಲಿಗ ಅಂತ ಇದೆ. ಲಿಂಗಾಯತ ಕೂಡು ಒಕ್ಕಲಿಗ ಅಂತ ಇದೆ ನುಡಿದಿದ್ದಾರೆ.Sign in to your account
Username or Email Address


Password

 Remember Me


