ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ಕೆಲಸವನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ನಟಿ ಭಾರತಿ ವಿಷ್ಣುವರ್ಧನ್‍ರವರಿಗೆ ತಿಳಿಸಿದ್ದಾರೆ.ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಸವರಾಜ ಬೊಮ್ಮಾಯಿಯವರು ನನಗೆ ಕನ್ನಡದಲ್ಲಿ ಆಲ್ ಫೇವರೆಂಟ್ ನಟ ಎಂದರೆ ಡಾ. ರಾಜ್ ಕುಮಾರ್ ಮತ್ತು ಮೂವರು ನಟಿಯರೆಂದರೆ ಬಹಳ ಇಷ್ಟ. ಅದರಲ್ಲಿ ಭಾರತಿಯವರು ಕೂಡ ಒಬ್ಬರು ಎಂಬ ವಿಚಾರ ಬಹಿರಂಗಪಡಿಸಿದ್ದರು. ಅಲ್ಲದೇ ಡಾ. ರಾಜ್ ಕುಮಾರ್ ಹಾಗೂ ಭಾರತಿಯವರ ಕಾಂಬಿನೇಷನ್‍ನಲ್ಲಿ ಬಂದ ಬಂಗಾರದ ಮನುಷ್ಯ ಸಿನಿಮಾವನ್ನು ಹಲವಾರು ಬಾರಿ ವೀಕ್ಷಿಸಿರುವುದಾಗಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಮಂತ್ರಾಲಯದಿಂದ ವಾಪಸ್ಸಾಗ್ತಿದ್ದಾಗ ಕಾರು ಅಪಘಾತ- ಮದ್ವೆಯಾಗ್ಬೇಕಿದ್ದ ಜೋಡಿ ಸಾವುಹೀಗಾಗಿ ಪಬ್ಲಿಕ್ ಟಿವಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಬೊಮ್ಮಾಯಿಯವರಿಗೆ ಸಪ್ರ್ರೈಸ್ ಆಗಿ ಹಿರಿಯ ನಟಿ ಭಾರತೀಯವರು ಕರೆ ಮಾಡಿ ಮಾತನಾಡಿದರು. ನೀವು ಮುಖ್ಯಮಂತ್ರಿಯಾಗಿರುವ ಬಗ್ಗೆ ನಮಗೆ ಬಹಳ ಸಂತೋಷವಿದೆ. ನಿಮ್ಮನ್ನು ಭೇಟಿಯಾಗಬೇಕೆಂದು ಬಹಳಷ್ಟು ಬಾರಿ ಪ್ರಯತ್ನಿಸಿದೆ. ಆದರೆ ಈವರೆಗೂ ಭೇಟಿಯಾಗಲು ಅವಕಾಶ ಸಿಗಲಿಲ್ಲ. ನೀವು ನಿಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೀರಾ ಎಂದು ನಾನು ಕೂಡ ತೊಂದರೆ ನೀಡಲಿಲ್ಲ ಎಂದಿದ್ದಾರೆ. ಆಗ ಬೊಮ್ಮಾಯಿಯವರು ನಾನು ಕೂಡ ನಿಮ್ಮನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಶಿಷ್ಯ ಸಂತೋಷ್ ಲಾಡ್ ಅಸಮಾಧಾನಇದೇ ಸಂದರ್ಭದಲ್ಲಿ ಸಾಹಸ ಸಿಂಹ ಡಾ. ವಿಷ್ಟುವರ್ಧನ್ ಪ್ರತಿಷ್ಠಾನಕ್ಕೆ ನೀವು ಅಧ್ಯಕ್ಷರಾಗಿದ್ದೀರಾ, ಇದರಿಂದ ನಿಮ್ಮ ಜೊತೆ ಕೆಲಸ ಮಾಡುವಂತಹ ಸೌಭಾಗ್ಯ ನಮಗೆ ಸಿಕ್ಕಿದೆ. ಇದೇ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್‍ರವರ ಹುಟ್ಟುಹಬ್ಬವಿರುವುದಾಗಿ ತಿಳಿಸಿದ ಅವರು, ವಿಷ್ಣುವರ್ಧನ್ ಅವರ ಪ್ರತಿಷ್ಠಾನದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ. ಆಗ ನಾನು ಪ್ರತಿಷ್ಠಾನದ ಕೆಲಸವನ್ನು ನಾನು ಮುಂದುವರಿಸಿ ಮಾಡಿಕೊಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸುದೀಪ್ ಒಬ್ಬ ನಟರಾಗುತ್ತಾರೆ ಅಂತ ಅಂದುಕೊಂಡಿರಲಿಲ್ಲ: ಬೊಮ್ಮಾಯಿನಿಮ್ಮ ಅಂದಿನ ಹಳೆಯ ಸಿನಿಮಾಗಳು ಇಂದಿಗೂ ಸಹ ಹಿಟ್ ಸಿನಿಮಾವಾಗಿದೆ. ನೀವೆಲ್ಲರೂ ಕನ್ನಡ ಚಿತ್ರರಂಗವಷ್ಟೇ ಅಲ್ಲದೇ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದೀರಾ. ಹೀಗಾಗಿ ನಿಮ್ಮೆಲ್ಲರ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಬೊಮ್ಮಾಯಿಯವರು ನುಡಿದಿದ್ದಾರೆ. ಕೊನೆಗೆ ನಿಮ್ಮ ಫೇವರೆಟ್ ನಟಿಯಾಗಿರುವುದು ನಮ್ಮ ಭಾಗ್ಯ. ಭಗವಂತ ನಿಮಗೆ ಉತ್ತಮ ಕೆಲಸಗಳನ್ನು ಮಾಡುವಂತ ಶಕ್ತಿ ಕೊಡಲಿ ಎಂದು ಭಾರತಿಯವರು ಶುಭ ಹಾರೈಸಿದ್ದಾರೆ.






 Advertisement 




Sign in to your account
Username or Email Address


Password

 Remember Me


