ಬಾಗಲಕೋಟೆ: ತಿಕೋಟಾ ಮೂಲದ ಭಕ್ತರೊಬ್ಬರು 6 ಲಕ್ಷದ 50 ಸಾವಿರ ರೂಪಾಯಿಗೆ ದೇವರ ತೆಂಗಿನಕಾಯಿ ಖರೀದಿಸಿ ಭಾರೀ ಅಚ್ಚರಿ ಮೂಡಿಸಿದ್ದಾರೆ.ವಿಜಯಪುರ ಜಿಲ್ಲೆ ತಿಕೋಟಾ ಮೂಲದ ನಿವಾಸಿ ಮಹಾವೀರ ಹರಕೆ 6,50,000 ರೂ. ಸವಾಲು ಕೂಗಿ ತೆಂಗಿನಕಾಯಿ ಪಡೆದ ವ್ಯಕ್ತಿ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಮಾಳಿಂಗರಾಯನ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಮಾಳಿಂಗರಾಯ ಜಾತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಕಾಯಿ ಮಾರಾಟವಾಗಿದೆ.ಪ್ರತಿ ವರ್ಷ ಶ್ರಾವಣ ಮಾಸದ ಮುಕ್ತಾಯದ ವೇಳೆ ಮಾಳಿಂಗರಾಯ ಜಾತ್ರೆ ನಡೆಯುತ್ತದೆ. ಜಾತ್ರೆ ಬಳಿಕ ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ ಹಾಗೂ ಪಲ್ಲಕ್ಕಿ ಮೇಲಿನ ಕಾಯಿಗಳ ಹರಾಜು ನಡೆಯುತ್ತದೆ. ಗದ್ದುಗೆ ಮೇಲಿನ ಪಲ್ಲಕ್ಕಿ ಮೇಲಿನ ಕಾಯಿ ಮನೆಗೆ ಒಯ್ದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಪಲ್ಲಕ್ಕಿ 10 ಕಾಯಿಗಳಿರುತ್ತೆವೆ, ಮಾಳಿಂಗರಾಯನ ಗದ್ದುಗೆ ಮೇಲೆ ಒಂದು ಕಾಯಿ ಇರುತ್ತದೆ. ಇದನ್ನೂ ಓದಿ: ರೈಲು ತಡವಾದರೆ ಪ್ರಯಾಣಿಕರಿಗೆ ಕೊಡಬೇಕು ಪರಿಹಾರ: ಸುಪ್ರೀಂ ಕೋರ್ಟ್ಬೀರಲಿಂಗೇಶ್ವರ್ ಪಲ್ಲಕ್ಕಿ ಮೇಲೆ 2 ಕಾಯಿಗಳಿರುತ್ತವೆ. ಅದರಲ್ಲಿ ಮಾಳಿಂಗರಾಯನ ಗದ್ದುಗೆ ಮೇಲೆ ಒಂದು ಕಾಯಿಗೆ ಭಾರೀ ಬೇಡಿಕೆಯಿರುತ್ತೆ. ಮಾಳಿಂಗರಾಯ ಗದ್ದುಗೆ ಕಾಯಿಂದ ಮನೆ ಹಾಗೂ ಉದ್ಯಮಕ್ಕೆ ಶುಭವಾಗಲಿದೆಯೆಂದು ಇದನ್ನು ಖರೀದಿಸುತ್ತಾರೆ.Sign in to your account
Username or Email Address


Password

 Remember Me


