ಮಡಿಕೇರಿ: ವಿಶ್ವ ಸಂಸ್ಥೆಯೂ ತನ್ನ ಸಂಯುಕ್ತ ರಾಷ್ಟ್ರದ ಅಡಿಯಲ್ಲಿ ಬರುವಂಥ ಕೆಲವೊಂದು ಸಣ್ಣ ದೇಶಗಳಿಗೆ ಆರ್ಥಿಕ ಮತ್ತು ರಕ್ಷಣಾತ್ಮಕ ನೆರವನ್ನು ತಲುಪಿಸಲು ಯುನೈಟೆಡ್ ನೇಶನ್ಸ್ ಫೋರ್ಸ್‍ ಅನ್ನು( UN forces) ಅಂತಹ ದೇಶದಲ್ಲಿ ನಿಯೋಜಿಸಲಾಗುತ್ತದೆ. ಇದೀಗ ಈ ಸೇನೆಯಲ್ಲಿ ಭಾರತದಿಂದ ಕೊಡಗಿನ ಯೋಧರು ಆಯ್ಕೆಯಾಗಿದ್ದು, ವಿಶ್ವ ಸಂಸ್ಥೆಯ ಶಾಂತಿ ಪಾಲಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.ಸಂಯುಕ್ತ ರಾಷ್ಟ್ರಗಳಲ್ಲಿ ಬಲಿಷ್ಟ ಸೇನೆಗಳಿಂದ ಕೆಲವೊಂದು ಸೈನಿಕರನ್ನು ಆಯ್ಕೆ ಮಾಡಿ ಕೆಲ ತಿಂಗಳ ಕಾಲ ಯುನೈಟೆಡ್ ನೇಶನ್ಸ್  ಫೋರ್ಸ್‍ನಲ್ಲಿ ಕಾರ್ಯ ನಿರ್ವಹಿಸಲು ವಿದೇಶಕ್ಕೆ ಕಳುಹಿಸಲಾಗುತ್ತದೆ. ಇದೇ ರೀತಿ ಈ ಭಾರಿಯ ಯುನೈಟೆಡ್ ನೇಶನ್ಸ್ ಫೋರ್ಸ್‍ನಲ್ಲಿ ಭಾರತೀಯ ಸೇನೆಯಿಂದ ಕೆಲ ಯೋಧರು ಆಯ್ಕೆಯಾಗಿದ್ದಾರೆ. ಆಯ್ಕೆ ಆದವರಲ್ಲಿ ಹಲವರು ಕೊಡಗಿನ ಯೋಧರಾಗಿದ್ದಾರೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್ ಕ್ರೀಡಾಪಟುಗಳನ್ನು ಭೇಟಿ ಮಾಡಿ ಅಭಿನಂದಿಸಿದ ಪ್ರಧಾನಿಕೊಡಗಿನ ವೀರ ಯೋಧರಾದ, ಪೆಮ್ಮಡ ರವೀಂದ್ರ ಪಿ ಎಸ್, ಶಾಂತಿ ನಗರ ನೇಶನ್ಸ್ ಫೋನ್ನಂಪೇಟೆ, ಕರೋಟಿರ ಲೋಕೇಶ್ ಪಾಲಿಬೆಟ್ಟ, ವಿನೋದ್ ಕಾಳಪ್ಪ ಗಾಳಿಬೀಡು, ಸತೀಶ್ ವಿ.ದೊಡ್ಡಯ್ಯ ಶನಿವಾರಸಂತೆ, ಫೋನ್ನ ಚೆಟ್ಟೀರ ಪಳಂಗಪ್ಪ ಕಾಲೂರು ಮಡಿಕೇರಿ, ದಿನೇಶ್ ಪೂಜಾರಿ ಚಾಮುಂಡೇಶ್ವರಿ ನಗರ ಮಡಿಕೇರಿ, ದೀಕ್ಷಿತ್ ಶೆಟ್ಟಿ ಭಗವತಿ ನಗರ ಮಡಿಕೇರಿ,ಭರತ್ ಪೂಜಾರಿ ಕಗ್ಗೊಡು ಮಡಿಕೇರಿ ಇವರುಗಳು ಇದೇ ಸೆಪ್ಟಂಬರ್ ನಲ್ಲಿ ಲೆಬನಾನ್ ದೇಶದಲ್ಲಿ ನಡೆಯುವ ಯುನೈಟೆಡ್ ನೇಶನ್ಸ್ ಪೀಸ್ ಕೀಪಿಂಗ್ ಕ್ಯಾಂಪ್ (united Nations peace keeping camp) ನಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ






 Advertisement 




Sign in to your account
Username or Email Address


Password

 Remember Me


