ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ತೀವ್ರ ಪೈಪೋಟಿ ಹಾಗೂ ಪ್ರತಿಷ್ಠೆಯಾಗಿರುವ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಹೋರಾಟ ನಡೆಸುತ್ತಿದೆ. ಅಲ್ಲದೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದರೂ, ಸಿಎಂ ನಿವಾಸ ಹುಬ್ಬಳ್ಳಿಯಲ್ಲಿದ್ದರೂ, ಬೊಮ್ಮಾಯಿ ಹಾಗೂ ಅವರ ಕುಟುಂಬಕ್ಕೆ ಮತದಾನದ ಹಕ್ಕಿಲ್ಲದಾಗಿದೆ.ಬಸವರಾಜ ಬೊಮ್ಮಾಯಿ ವಾಸವಾಗಿರುವ ಆದರ್ಶನಗರದ 46 ನೇ ವಾರ್ಡ್ ಮಹಾನಗರ ಪಾಲಿಕೆ ಚುನಾವಣೆ ಅತೀ ಹೆಚ್ಚು ಗಮನ ಸೆಳೆದಿದೆ. ಆದರೆ ಕುತೂಹಲದ ಸಂಗತಿ ಅಂದರೆ ಮಹಾನಗರದಲ್ಲಿ ಮುಖ್ಯಮಂತ್ರಿ ಅವರ ನಿವಾಸ ಇದ್ದರೂ ಮತವೇ ಇಲ್ಲ. ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಸಿಎಂ ಆಗಿದ್ದಾರೆ. ಹೀಗಾಗಿ ಅವರ ಮನೆ ಹುಬ್ಬಳ್ಳಿಯಲ್ಲಿದ್ದರು ಅವರು ಹಾಗೂ ಕುಟುಂಬದವರ ಮತಗಳು ಇರುವುದು ಶಿಗ್ಗಾಂವಿಯಲ್ಲಿ ಈ ಕಾರಣ ಬಸವರಾಜ ಬೊಮ್ಮಾಯಿಯವರಿಗೆ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಲು ಆಗುವುದಿಲ್ಲ. ಇದನ್ನೂ ಓದಿ:ಬೆಲೆ ಏರಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವರ ಜೊತೆ ಚರ್ಚೆ ಮಾಡುವೆ: ಸಿಎಂಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದು, ಹುಬ್ಬಳ್ಳಿಯಲ್ಲೇ ಶಿಕ್ಷಣ ಪಡೆದಿದ್ದಾರೆ. ಅಲ್ಲದೇ ಅವರ ತಂದೆಯ ಕಾಲದಿಂದಲೂ ಹುಬ್ಬಳ್ಳಿಯ ಆದರ್ಶ ನಗರದಲ್ಲಿ ನಿವಾಸವಿದೆ. ಈ ಮೊದಲು ಬೊಮ್ಮಾಯಿಯವರ ಕುಟುಂಬ ಹುಬ್ಬಳ್ಳಿಯಲ್ಲೇ ಮತದಾನ ಹಕ್ಕು ಚಲಾವಣೆ ಮಾಡುತ್ತಿದ್ದರು. ಆದರೆ ಜೆಡಿಯು ತೊರೆದು ಬಿಜೆಪಿ ಸೇರ್ಪಡೆಯಾದ ನಂತರ ಬಸವರಾಜ್ ಬೊಮ್ಮಾಯಿ ಶಿಗ್ಗಾಂವ ಸವಣೂರ ಕ್ಷೇತ್ರ ಆಯ್ದುಕೊಂಡ ಪರಿಣಾಮ ಅವರ ಮತದಾನದ ಹಕ್ಕು ಇದೀಗ ಶಿಗ್ಗಾಂವ ಕ್ಷೇತ್ರದಲ್ಲಿರುವುದರಿಂದ ಮತದಾನದ ಹಕ್ಕು ಅಲ್ಲಿಯೇ ಲಭ್ಯವಾಗಿದೆ. ಇದನ್ನೂ ಓದಿ:ಬೆಳಗಾವಿಯಲ್ಲಿ ನಾವು ಗೆದ್ದೇ ಗೆಲ್ತೇವೆ, ಬಹುಮತವನ್ನೂ ತರ್ತೇವೆ: ಫಿರೋಜ್ ಸೇಠ್ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರವೂ ಹುಬ್ಬಳ್ಳಿಯ ನಿವಾಸದಲ್ಲಿಯೇ ವಾಸವಾಗುತ್ತಿದ್ದಾರೆ. ಅಲ್ಲದೇ ಹುಬ್ಬಳ್ಳಿಯ ನಿವಾಸದಲ್ಲಿಯೇ ಸಾರ್ವಜನಿಕರ ಅಹವಾಲು ಆಲಿಸುತ್ತಾರೆ. ಆದರೆ ಅವರ ಮತದಾನದ ಹಕ್ಕು ಮಾತ್ರ ಶಿಗ್ಗಾಂವ ಕ್ಷೇತ್ರದಲ್ಲಿರುವುದರಿಂದ ಪಾಲಿಕೆ ಚುನಾವಣೆಯಲ್ಲಿ ಮುಖ್ಯಮಂತ್ರಿಗಳಿಗೆ ಮತದಾನದ ಹಕ್ಕಿಲ್ಲದಾಗಿದೆ. ಇದು ನಾಳೆ ನಡೆಯುವ ಪಾಲಿಕೆ ಚುನಾವಣೆ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದೆ.






 Advertisement 




Sign in to your account
Username or Email Address


Password

 Remember Me


