ಮಂಡ್ಯ: ಮೊಸಳೆ ದಾಳಿಯಿಂದ ಮೇಕೆ ಸಾವನ್ನಪ್ಪಿದ್ದು ರೈತರಲ್ಲಿ ಆತಂಕ ಮೂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಸಮೀಪದ ವಿರಿಜಾ ನಾಲೆಯ ಬಳಿ ಜರುಗಿದೆ.ಪಾಲಹಳ್ಳಿ ಗ್ರಾಮದ ಚಿಕ್ಕಣ್ಣ ಎಂಬ ರೈತರಿಗೆ ಸೇರಿದ ಮೇಕೆಯ ಮೇಲೆ ಇಂದು ಬೆಳಗ್ಗೆ ಮೊಸಳೆ ದಾಳಿ ನಡೆಸಿದೆ. ಈ ವೇಳೆ ಅಕ್ಕ-ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಮೊಸಳೆಗೆ ದೊಣ್ಣೆಯಿಂದ ಹೊಡೆದು ಮೇಕೆಯನ್ನು ಬಿಡಿಸಿದ್ದಾರೆ. ನಂತರ ಮೊಸಳೆ ವಿರಿಜಾ ನಾಲೆಯ ಒಳ ಭಾಗಕ್ಕೆ ಹೊರಟು ಹೋಗಿದೆ. ಇದನ್ನೂ ಓದಿ:ಶತಕ ಸಿಡಿಸದೇ 50 ಇನ್ನಿಂಗ್ಸ್ ಕಳೆದ ವಿರಾಟ್ ಬ್ಯಾಟ್ಮೊಸಳೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮೇಕೆ ಸಾವನ್ನಪ್ಪಿದ್ದೆ. ಕಳೆದ ಎರಡು ದಿನಗಳ ಹಿಂದೆಯೂ ಇದೇ ಮೊಸಳೆ ಚಿಕ್ಕಣ್ಣ ಅವರ ಒಂದು ಮೇಕೆಯನ್ನು ತಿಂದು ಹಾಕಿತ್ತು. ಇದೀಗ ಮತ್ತೊಂದು ಮೇಕೆಯ ಮೇಲೆ ಮೊಸಳೆ ದಾಳಿ ನಡೆಸಿರುವುದು ಸಾಕಷ್ಟು ಆತಂಕ ಉಂಟುಮಾಡಿದೆ. ರಂಗನತಿಟ್ಟು ಪಕ್ಷಿಧಾಮದಿಂದ ಈ ಮೊಸಳೆ ಬಂದಿರುವ ಶಂಕೆಯನ್ನು ರೈತರು ವ್ಯಕ್ತಪಡಿಸುತ್ತಿದ್ದು, ಶೀಘ್ರವೇ ಮೊಸಳೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ರೈತರು ಆಗ್ರಹಿಸುತ್ತಿದ್ದಾರೆ.ಇದನ್ನೂ ಓದಿ:ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಪಂಚಮಸಾಲಿ ಸಮುದಾಯ






 Advertisement 




Sign in to your account
Username or Email Address


Password

 Remember Me


