ಬೆಂಗಳೂರು: ಪರಿಷತ್ ಆಯ್ಕೆಗೆ ಯಾವ ಮಾನದಂಡ, ಏನು ಎಂಬುದು ದೆಹಲಿಯಲ್ಲಿ ನಿಗದಿ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.ಇಂದು ಸಿಎಂ-ಡಿಸಿಎಂ ದೆಹಲಿಗೆ ತೆರೆಳುತ್ತಿರುವ ಬಗ್ಗೆ ತಮ್ಮ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, 300ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಎಲ್ಲಾ ವರ್ಗಕ್ಕೂ ಅವಕಾಶ ಮಾಡಿಕೊಡಲು ಆಗಲ್ಲ. ಹಾಲಿ ಸದಸ್ಯರು ಕೆಲವರಿದ್ದಾರೆ. ಎಲ್ಲರೂ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದರು.ಎಲ್ಲಾ ವರ್ಗದಲ್ಲೂ ಇದ್ದಾರೆ. ಕೆಲವರಿಗೆ ಬ್ಲಾಕ್ ಮಟ್ಟದಲ್ಲಿ ಅಧಿಕಾರ ಸಿಕ್ಕಿದೆ. ಕೆಲವರಿಗೆ ಜಿಲ್ಲಾ ಮಟ್ಟದಲ್ಲಿ ಸಿಕ್ಕಿದೆ ನೋಡೋಣ. ಇರುವ 7 ಸೀಟಲ್ಲಿ ಎಲ್ಲರೂ ಕೇಳ್ತಿದ್ದಾರೆ. ಕರಾವಳಿಯವರು ಕೇಳ್ತಿದ್ದಾರೆ, ಮಲ್ನಾಡವ್ರು ಕೇಳ್ತಾರೆ, ಹಳೇ ಮೈಸೂರು ಭಾಗದವರು ಕೇಳ್ತಿದ್ದಾರೆ. ಮುಂಬೈ ಕರ್ನಾಟಕ ಕೇಳ್ತಿದ್ದಾರೆ. ಬಹಳ ಕಷ್ಟಕರವಾದಂತಹ ಪರಿಸ್ಥಿತಿಯಲ್ಲಿ ಇದ್ದೇವೆ. ಯಾವ ಮಾನದಂಡದ ಮೇಲೆ ಆಯ್ಕೆ ಮಾಡಬೇಕು ಎಂಬುದನ್ನು ದೆಹಲಿಯಲ್ಲಿ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.ಇದೇ ವೇಳೆ ಪರಮೇಶ್ವರ್ (G Parameshwar) ಅಸಮಾಧಾನದ ಬಗ್ಗೆ ಮಾತನಾಡಿದ ಡಿಕೆಶಿ, ಖಂಡಿತವಾಗಿಯೂ ಅವರ ಮಾತನ್ನ ಕೇಳುತ್ತೇವೆ. ನಗುತ್ತಲೇ ಉತ್ತರಿಸಿದರು. ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುವ ಬಗ್ಗೆ ನಿಮ್ಮ ಹತ್ರ ಏನಾದ್ರೂ ಮಾಹಿತಿ ಇರಬಹುದು ನೋಡಿ ಎಂದಿದ್ದಾರೆ.Sign in to your account
Username or Email Address


Password

 Remember Me


