ಬೆಂಗಳೂರು: ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವಾಗಿದ್ದು, ಹಬ್ಬದ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಜನ ಸಜ್ಜಾಗಿದ್ದಾರೆ. ಈ ಮಧ್ಯೆ ನಗರದ ಮ್ಲಲೇಶ್ವರಂನಲ್ಲಿ ಕೊರೊನಾ ಕಟ್ಟುನಿಟ್ಟನ ನಿಯಮಗಳನ್ನು ಜಾರಿಗೊಳಿಸಿದ್ದು, ಜನರು ಮಾತ್ರ ಕ್ಯಾರೆ ಅನ್ನುತ್ತಿಲ್ಲ.ಹೌದು, ಕೊರೊನಾ ಸಂಪೂರ್ಣವಾಗಿ ಮುಗಿದೇ ಹೋಗಿದೆ ಎನ್ನುವ ಹಾಗೇ ಬೆಂಗಳೂರಿನ ಜನ ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಮಲ್ಲೇಶ್ವರಂನಲ್ಲಿ ಜನ ನೈಟ್ ಕರ್ಫ್ಯೂ ಶುರುವಾದರೂ ಕೊಂಚವೂ ಫಾಲೋ ಮಾಡದೇ ಹಬ್ಬಕ್ಕಾಗಿ ಹೂ, ಹಣ್ಣು, ಬಟ್ಟೆ, ದೇವರ ಅಲಂಕಾರದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯಇದು ಹಬ್ಬದ ಖರೀದಿ ಮಾತ್ರವಲ್ಲ ಕೊರೊನಾ ಮೂರನೇ ಅಲೆಯ ಆರಂಭಕ್ಕೂ ನಾಂದಿಯಾಗುವ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿದೆ. ಕಾರಣ ಜನ ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಬ್ರೇಕ್ ಮಾಡಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಇದೇ ವ್ಯಾಪಾರಕ್ಕೆ ಸರಿಯಾದ ಸಮಯ ಅಂತ ವ್ಯಾಪಾರಿಗಳು ಸಹ ನೈಟ್ ಕರ್ಫ್ಯೂ ಇದ್ದರೂ ಅಂಗಡಿಗಳನ್ನು ಓಪನ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಬಾಲ್ಯ ವಿವಾಹ ತಪ್ಪಿಸಿ, ಶಿಕ್ಷಣ ಕೊಡಿಸಿ- ಅಧಿಕಾರಿಗಳಿಗೆ ಬಾಲಕಿ ಪತ್ರ






 Advertisement 




Sign in to your account
Username or Email Address


Password

 Remember Me


